https://m.facebook.com/story.php?story_fbid=2464587093764817&id=100006406501585 -ನಿಝಾಮ್ ಅನ್ಸಾರಿ ಫೇಸ್ ಬುಕ್ ವಾಲ್ ನಿಂದ- ಎಲ್ಲರ ಮನದಲ್ಲೂ ಈಗ ಪುತ್ತೂರು ಎಂಬ ಊರ ಹೆಸರು ನೆಲೆಯಾಗಿದೆ..ಕಾರಣ ಎಲ್ಲರಿಗೂ ಗೊತ್ತೇ ಇದೆ. ಕಾಲೇಜು ವಿದ್ಯಾರ್ಥಿಗಳ ನಡುವಿನ ಅತ್ಯಾಚಾರ ಪ್ರಕರಣವೊಂದು ಬಟಾಬಯಲಾಗಿದ್ದು. ಒಂದು ಕಾಲದಲ್ಲಿ ಹಲವು ಕಲಾವಿದರ ಜನ್ಮ ಭೂಮಿಯೆಂದೇ ಖ್ಯಾತಿ ಪಡೆದಿದ್ದ ಪುತ್ತೂರು,ಇದೀಗ ಸಾಮೂಹಿಕ ಅತ್ಯಾಚಾರದ ಕಳಂಕವನ್ನು ಮೆತ್ತಿಕೊಂಡಿದೆ.. ಈ ಕುರಿತು ಒಂದು ವಿಭಾಗದ ಜನರು ನ್ಯಾಯಕ್ಕಾಗಿ ಆಕ್ರೋಶ ವ್ಯಕ್ತಪಡಿಸಿ ಧ್ವನಿಯೆತ್ತಿದರೆ, ಇನ್ನೊಂದು ವಿಭಾಗ ಅದನ್ನು ಸಾರಸಗಟಾಗಿ ತಿರಸ್ಕರಿಸಿ ಮತ್ತೊಮ್ಮೆ ಅವರ ಧರ್ಮಾಂಧತೆ ಸಾರವನ್ನು ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಕಟಪಡಿಸಿದ್ದಾರೆ.. ಈ ವಿಚಾರವಾಗಿ ವಿಷಾದವಿದೆ.. ಸಮರ್ಥನೆಗೂ ಒಂದು ಮಿತಿ ಇದೆಯಲ್ವಾ. ಅಮಾನವೀಯ ರೀತಿಯಲ್ಲಿ ಅಕ್ರಮ ಲೈಂಗಿಕ ಚಟುವಟಿಕೆ ನಡೆದಿದೆ ಎಂಬುವುದನ್ನು ಯಾವ ರೀತಿಯಲ್ಲೆಲ್ಲಾ ಪ್ರಚುರ ಪಡಿಸಬೇಕೋ ಆ ರೀತಿಯಲ್ಲೆಲ್ಲ ಪ್ರಚಾರವನ್ನು ಸೋಶಿಯಲ್ ಮೀಡಿಯಾ ಕೈಗೆತ್ತಿಕೊಂಡಿದೆ.. ಒಳ್ಳೆಯದು..ಆದರೆ ಎಲ್ಲೋ ಈ ಪ್ರಚಾರಗಳು ದುರ್ಬಳಕೆಯಾಗುತ್ತಿದೆ ಎಂಬುದು ನಗ್ನ ಸತ್ಯ. ಕಥುವಾ ಬಾಲಕಿಯ ಅತ್ಯಾಚಾರ ಪ್ರಕರಣದ ವಿಚಾರ ಬಂದಾಗ ಯಾರೆಲ್ಲ ಮೌನಿಯಾಗಿದ್ದರೋ ಅವರೀಗಲೂ ಮೌನರಾಗಿಯೇ ಇದ್ದಾರೆ. ಒಂದರ್ಥದಲ್ಲಿ ಹೇಳುವುದದರೆ ಸಾಮಾಜಿಕ ತಾಣಗಳಲ್ಲಿ ...
ಪಥಿಕನ ಬಗ್ಗೆ ಸಿಂಪಲ್ಲಾಗಿ : ನಿಝಾಮ್ ಅನ್ಸಾರಿ - ತಂ - ದಿ. ಇಸ್ಮಾಯಿಲ್ ಯು.ಕೆ, ತಾ -ಝುಬೈದಾ. ಕಲ್ಲಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಕಾಸರಗೋಡು ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ. ಸಮಾಜಶಾಸ್ತ್ರದಲ್ಲಿ ಬಿ.ಎ ಹಾಗೂ ಅರಬಿಕ್ ನಲ್ಲಿ 'ಅನ್ಸಾರಿ' ಪದವೀಧರ, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.