ವಿಷಯಕ್ಕೆ ಹೋಗಿ

#_ಈ_ಕಳಂಕವನ್ನು_ಜನಮಾನಸಗಳಿಂದ_ಅಳಿಸುವುದಾದರೂ_ಹೇಗೆ..!?*

https://m.facebook.com/story.php?story_fbid=2464587093764817&id=100006406501585


-ನಿಝಾಮ್ ಅನ್ಸಾರಿ  ಫೇಸ್ ಬುಕ್ ವಾಲ್ ನಿಂದ-

ಎಲ್ಲರ ಮನದಲ್ಲೂ ಈಗ ಪುತ್ತೂರು ಎಂಬ ಊರ ಹೆಸರು ನೆಲೆಯಾಗಿದೆ..ಕಾರಣ ಎಲ್ಲರಿಗೂ ಗೊತ್ತೇ ಇದೆ. ಕಾಲೇಜು ವಿದ್ಯಾರ್ಥಿಗಳ ನಡುವಿನ ಅತ್ಯಾಚಾರ ಪ್ರಕರಣವೊಂದು ಬಟಾಬಯಲಾಗಿದ್ದು. ಒಂದು ಕಾಲದಲ್ಲಿ ಹಲವು ಕಲಾವಿದರ ಜನ್ಮ ಭೂಮಿಯೆಂದೇ ಖ್ಯಾತಿ ಪಡೆದಿದ್ದ ಪುತ್ತೂರು,ಇದೀಗ ಸಾಮೂಹಿಕ ಅತ್ಯಾಚಾರದ ಕಳಂಕವನ್ನು ಮೆತ್ತಿಕೊಂಡಿದೆ.. ಈ ಕುರಿತು ಒಂದು ವಿಭಾಗದ ಜನರು ನ್ಯಾಯಕ್ಕಾಗಿ ಆಕ್ರೋಶ ವ್ಯಕ್ತಪಡಿಸಿ ಧ್ವನಿಯೆತ್ತಿದರೆ, ಇನ್ನೊಂದು ವಿಭಾಗ ಅದನ್ನು ಸಾರಸಗಟಾಗಿ ತಿರಸ್ಕರಿಸಿ ಮತ್ತೊಮ್ಮೆ ಅವರ ಧರ್ಮಾಂಧತೆ ಸಾರವನ್ನು ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಕಟಪಡಿಸಿದ್ದಾರೆ..



ಈ ವಿಚಾರವಾಗಿ ವಿಷಾದವಿದೆ.. ಸಮರ್ಥನೆಗೂ ಒಂದು ಮಿತಿ ಇದೆಯಲ್ವಾ. ಅಮಾನವೀಯ ರೀತಿಯಲ್ಲಿ ಅಕ್ರಮ ಲೈಂಗಿಕ ಚಟುವಟಿಕೆ ನಡೆದಿದೆ ಎಂಬುವುದನ್ನು ಯಾವ ರೀತಿಯಲ್ಲೆಲ್ಲಾ ಪ್ರಚುರ ಪಡಿಸಬೇಕೋ ಆ ರೀತಿಯಲ್ಲೆಲ್ಲ ಪ್ರಚಾರವನ್ನು ಸೋಶಿಯಲ್ ಮೀಡಿಯಾ ಕೈಗೆತ್ತಿಕೊಂಡಿದೆ.. ಒಳ್ಳೆಯದು..ಆದರೆ ಎಲ್ಲೋ ಈ ಪ್ರಚಾರಗಳು ದುರ್ಬಳಕೆಯಾಗುತ್ತಿದೆ ಎಂಬುದು ನಗ್ನ‌ ಸತ್ಯ.

ಕಥುವಾ ಬಾಲಕಿಯ ಅತ್ಯಾಚಾರ ಪ್ರಕರಣದ ವಿಚಾರ ಬಂದಾಗ ಯಾರೆಲ್ಲ ಮೌನಿಯಾಗಿದ್ದರೋ ಅವರೀಗಲೂ ಮೌನರಾಗಿಯೇ ಇದ್ದಾರೆ. ಒಂದರ್ಥದಲ್ಲಿ ಹೇಳುವುದದರೆ ಸಾಮಾಜಿಕ ತಾಣಗಳಲ್ಲಿ ಈ ವಿಷಯದಲ್ಲಿ ಸಂಭ್ರಮಿಸಿದವರೂ ಅದೇ ಮನೋಸ್ಥಿತಿಯ ಜನರು. ವಿದ್ಯಾರ್ಥಿಗಳನ್ನು ರಾಜಕೀಯ ದೃಷ್ಟಿಕೋನವನ್ನಿಟ್ಟುಕೊಂಡು ಪೋಷಿಸುವ ಸಂಘಟನೆಯ ನೇತಾರರಂತೂ ತುಟಿ ಬಿಚ್ಚುತ್ತಿಲ್ಲ. ಬದಲಾಗಿ ಸಮರ್ಥನೆಗಳನ್ನು ನೀಡುತ್ತಾ ಬಂದಿದ್ದಾರೆ..
ದಲಿತ ಹೆಣ್ಮಗಳೊಬ್ಬಳ ಮೇಲಿನ ಸಾಮೂಹಿಕ ಅತ್ಯಾಚಾರ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಜಾತಿಯ ನಾಮದಿಂದಲೇ ಮಂತ್ರಿಯಾದೆನು ಎಂದು ಪತ್ರಿಕಾಗೋಷ್ಠಿಯಲ್ಲಿ ಪರಿಚಯಿಸಿದ ವ್ಯಕ್ತಿಯೂ ತನ್ನ ಹುಟ್ಟೂರ ಬಗ್ಗೆ ಮರು ಮಾತನಾಡುವ ಗೋಜಿಗೆ ಹೋಗಲಿಲ್ಲ.
ಇಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಎರಡು ಘಟನೆಗಳು ಚಿಂತನೆಗೆ ಹಚ್ಚುವುದಾದರೆ ಗಮನಾರ್ಹ ಎನಿಸುತ್ತದೆ. ಲವ್ ಹೆಸರಲ್ಲಿ ಯುವಕನೊಬ್ಬನಿಂದ ಇರಿತಕ್ಕೊಳಗಾದ ಹೆಣ್ಣೊಬ್ಬಳು ಚಿಂತಾಜನಕ ಸ್ಥಿತಿಯಲ್ಲಿರುವಾಗಲೇ, ಮತ್ತೊಂದು ಹೆಣ್ಣಿನ ಮೇಲೆ ಅತ್ಯಂತ ಕ್ರೂರವಾದ ರೀತಿಯಲ್ಲಿ ಅತ್ಯಾಚಾರ ಮಾಡಿದ್ದಲ್ಲದೆ, ಅದನ್ನು ಜಾಲತಾಣಗಳಲ್ಲಿ ಹರಿಯಬಿಟ್ಟು ವಿಕೃತಿ ಮೆರೆದಿರೋದು..
ಎರಡೂ ಅಪರಾಧಗಳಲ್ಲಿ ಶಾಮೀಲಾದವರೆಲ್ಲರೂ ಇನ್ನೇನು ಶಿಕ್ಷಣವನ್ನು ಪಡೆದು ಭವಿಷ್ಯವನ್ನು ರೂಪಿಸಬೇಕಾದ, ಆ ಬಗ್ಗೆ ಮಾತ್ರ ಚಿಂತಿಸಬೇಕಾದ ಯುವಕರು..

ಆಧುನಿಕ ಲೌಕಿಕ ಶಿಕ್ಷಣವು ಮಾನವೀಯತೆಯ ಅಣುವಿನಷ್ಟು ಗಾತ್ರದ ಪ್ರಭಾವವೂ ಕೂಡಾ ಬೀರುವುದಿಲ್ಲ ಎಂದಾದರೆ ಮತ್ತೆ ಮನುಷ್ಯತ್ವ ದೂರವಾಗಿ ಮೃಗೀಯತೆ ತಾಂಡವಾಡುವುದು ಖಂಡಿತ ಅಲ್ವಾ... ಕೆಲವೊಮ್ಮೆ ಪೋಷಕರು ತೋರುವ ಅತಿಯಾದ ಪ್ರೀತಿ ಇಲ್ಲವೇ ಅತಿಯಾದ ತಿರಸ್ಕೃತ ಮನೋಭಾವ ಎರಡೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲೂ ಬಹುದು.. ತಂದೆ ತಾಯಿಯರು ತೋರುವ ಸಡಿಲಿಕೆ ಮುಂದೆ ಇದಕ್ಕಿಂತಲೂ ದೊಡ್ಡ ಪ್ರಮಾಣದ ಅನಾಹುತಗಳಿಗೆ ಕಾರಣವಾಗಲೂಬಹುದು.. ಪೋಷಕರಿಗೆ ಮಾತ್ರವಲ್ಲ..ಅಧ್ಯಾಪಕ ವರ್ಗಕ್ಕೂ ಕೂಡಾ ಈಗಿನ ಮಕ್ಕಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪಾಡು ಪಡಬೇಕಾದ ಪರಿಸ್ಥಿತಿ ಬಿಡಿ..

ಹಾಗಿರುವಾಗ, ಇಂತಹ ಘಟನೆಗಳ ಹಿನ್ನಲೆಯನ್ನು ನೋಡುವಾಗ ಎಲ್ಲವೂ ನಡೆದದ್ದು ಮಾದಕ ವಸ್ತುಗಳ ಬಳಕೆಯಿಂದ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ..

ಮಧ್ಯಪಾನ ಅಥವಾ ಮಾದಕ ವಸ್ತುಗಳ ಬಳಕೆಯ ವಿಷಯದಲ್ಲಿ ಇಸ್ಲಾಂ ಧರ್ಮದ ಕಟ್ಟು ನಿಟ್ಟಿನ ಕ್ರಮಗಳು ಬಹುಶಃ ಇತರ ಧರ್ಮಗಳ ಸಿದ್ಧಾಂತಗಳೊಂದಿಗೆ ತುಲನೆ ಮಾಡುವಾಗ ಇಸ್ಲಾಮಿನ ಅತಿ ಗಂಭೀರವೂ, ಕಠಿಣವೂ ಆದ ನಿಲುವು ಅತಿ ಪ್ರಯೋಜನಕಾರಿ ಎಂದು ತಿಳಿಯುತ್ತದೆ..

ಮದ್ಯಪಾನವು ಪೈಶಾಚಿಕ ಪ್ರವೃತ್ತಿಯ ಭಾಗವಾಗಿದೆ ಎಂಬ ಕುರಾನಿನ ಆಶಯಗಳು ಸಾಮಾಜಿಕವಾಗಿ ಮನುಷ್ಯರನ್ನು ಜಾಗೃತರನ್ನಾಗಿಸುತ್ತದೆ. ಲಹರಿ ವಸ್ತುಗಳ ಬಳಕೆಯನ್ನು ನಿಷಿದ್ಧ ಗೊಳಿಸಿದ್ದೂ ಅದೇ ಕಾರಣದಿಂದ.
ಪುತ್ತೂರಿನಲ್ಲಿ ನಡೆದಂತಹ ಘಟನೆಗಳನ್ನು ಬರೀ ಖಂಡಿಸುವುದರಿಂದ ಮುಂದಿನ ತಲೆಮಾರು ಪಾಠ ಕಲಿಯದು. ಯುವಕರನ್ನು ಮಾನಸಿಕವಾಗಿ ಪರಿವರ್ತಿಸುವ, ಮಾದಕ ವಸ್ತುಗಳ ಬಳಕೆಯಿಂದಾಗುವ ಅನಾಹುತಗಳನ್ನು ತಿಳಿ ಹೇಳಿ, ಅವರ ಬದುಕಿಗೆ ಕೊಳ್ಳಿ ಇಡುವಂತಹ, ತೆರೆಮರೆಯಲ್ಲಿ ರಾಜಕೀಯ ಪಕ್ಷಗಳ ಧುರೀಣರು ನಿಯಂತ್ರಿಸುತ್ತಾ ಯುವಕರನ್ನು ಬಲಿಕೊಡುವ ಸಂಘಟನೆಗಳಿಂದ ದೂರ ಮಾಡುವಲ್ಲಿ ಜಾತಿ ಧರ್ಮಗಳೆನ್ನದೆ ಎಲ್ಲರೂ ಒಗ್ಗಟ್ಟಾಗಿ ಧರ್ಮಾಂಧ ಧುರುಳರ ಕಪಟ ವ್ಯಾಮೋಹಗಳನ್ನು ಹತ್ತಿಕ್ಕಬೇಕಿದೆ.. ಧರ್ಮದ ಸೈದ್ಧಾಂತಿಕ ನಿಲುವುಗಳನ್ನು ಗಾಳಿಗೆ ತೂರಿ, ಧರ್ಮ ರಕ್ಷಕರೆಂಬ ಪಟ್ಟ ಸ್ವತಃ ಕಟ್ಟಿಕೊಂಡು ಬೆಂಕಿಯುಂಡೆ ಉಗುಳುವಂತಹ ಭಾಷಣ ಮಾಡಿ ಜನರ ನಡುವೆ ಅನವಶ್ಯಕ ಸಂಘರ್ಷ ಗಳನ್ನು ಹುಟ್ಟು ಹಾಕುವವರಿಂದ ಪ್ರತಿಯೊಂದು ಧರ್ಮವನ್ನೂ ರಕ್ಷಿಸಬೇಕಿದೆ..

ಕೆಲವು ಖಾಸಗಿ ಸಂಸ್ಥೆಗಳ ಹೆಸರು ಹೇಳುವಾಗಲೇ ಕೇಸರಿ ಬಣ್ಣ ನೆನಪಾಗುವಷ್ಟರ ಮಟ್ಟಿಗೆ ಇಂದಿನ ಖಾಸಗಿ ಸಂಸ್ಥೆಗಳು ಬದಲಾಗಿರುವುದು ಮತ್ತು ಇದರ ಪರಿಣಾಮವಾಗಿ ಕಾಲೇಜು ವರಾಂಡದೊಳಗಿನ ಪ್ರಕರಣಗಳು ಬಹುತೇಕ ಮುಚ್ಚಿ ಹಾಕಲ್ಪಡುತ್ತಿರುವುದು ಇಂತಹ ಕುಕೃತ್ಯಗಳಿಗೆ ದಾರಿ ತೆರೆದಂತಾಗಿದೆ..ಧರ್ಮಾಂಧರಿಗೆ ತುಟಿ ಬಿಚ್ಚಲಾರದಂತಾಗಿದೆಂಬುದು ಹಗಲು ಬೆಳಕಿನಷ್ಟು ಸತ್ಯ..

-ನಿಝಾಮ್‌ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...