-ನಿಝಾಮ್ ಅನ್ಸಾರಿ

ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ.
ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು.
ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ.
ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರೋಧಿಸಿ , ಯಾರ ಒತ್ತಡ , ಬಲ ಪ್ರಯೋಗಗಳಿಲ್ಲದೆ ನಾವು ಬುರ್ಖಾ ಧರಿಸುತ್ತಿದ್ದೇವೆ. ಆರೋಪಗಳೆಲ್ಲ ಸುಳ್ಳೆಂದು ಒಂದು ಸ್ತ್ರೀ ಸಮುದಾಯ ಪ್ರತಿಭಟಿಸಿದಾಗ ಅಲ್ಲೂ ಕೂಡ ಧರ್ಮದ ,ಅಥವಾ ಇಸ್ಲಾಂನ ಕಾಳಜಿ ಬಹಳ ವ್ಯಕ್ತವಾಗಿ ಇತರರಲ್ಲಿ ಅಭಿವ್ಯಕ್ತಿಗೊಂಡಿತ್ತು.
ಧರ್ಮ ನಿಯಮಗಳನ್ನು ಸ್ಥಾಪಿಸಿದ್ದು ಅದರ ನೈಜ ಅನುಯಾಯಿಗಳಿಗೇ ಹೊರತು ನಾಮಧಾರಿ ಧರ್ಮ ರಕ್ಷಕರಿಗಲ್ಲ ಅನ್ನೋದನ್ನ ನಾವು ಮೊದಲು ಮನದಟ್ಟು ಮಾಡಬೇಕಿದೆ.
ಒಂದೆಡೆ ತಡೆಯಲಾಗಂತಹ ಸುಡು ಬಿಸಿಲು. ಈ ವೇಳೆಯಲ್ಲಿನ ವ್ರತಾಚರಣೆಗೂ , ಇತರ ಕಾಲಮಾನದಲ್ಲಿ ಕೈಗೊಳ್ಳುವ ವ್ರತಕ್ಕೂ ಪ್ರತಿಫಲದಲ್ಲಿ ತುಂಬಾ ವ್ಯತ್ಯಾಸವಿರಬಹುದು ಎಂಬುವುದು ನನ್ನ ಅನಿಸಿಕೆ. ಕಾರಣ ಈಗೀಗ ವ್ರತಾಚರಣೆಯು ಒಂದು ಟಾಸ್ಕ್ ನಂತಾಗಿದೆ. ರಂಝಾನ್ ತಿಂಗಳ ಮುಂಚೆಯೇ ಬಿಸಿಲನ್ನು ತಡೆಯಲಾಗದೆ ಲೀಟರ್ಗಟ್ಟಲೆ ನೀರು, ಸಿಹಿ ಪಾನೀಯಗಳನ್ನು ಸೇವಿಸಿ ಬಾಯಾರಿಕೆ ನೀಗಿಸಲು ಹರಸಾಹಸ ಪಡುತ್ತಿದ್ದೆವು. ಅದಕ್ಕೆಂದೇ ದಾರಿ ಬದಿಗಳಲ್ಲಿ ಕಬ್ಬು, ಕೋಲ್ಡ್ ಡ್ರಿಂಕ್ಸ್, ಜ್ಯೂಸ್ ಅಂಗಡಿಗಳು ತಲೆಯೆತ್ತಿವೆ. ಈ ನಿಟ್ಟಿನಲ್ಲಿ ದಿನದ ಹದಿಮೂರು , ಹದಿನಾಲ್ಕು ಗಂಟೆಗಳ ಕಾಲ ಸೃಷ್ಟಿಕರ್ತನಾದ ಅಲ್ಲಾಹನಿಗೆ ಅನ್ನ ಪಾನೀಯಗಳನ್ನು ತೊರೆಯುವುದು ಅಲ್ಪ ತ್ರಾಸದಾಯಕವಾದದ್ದು. ಹೀಗಾಗಿ ಇತರ ವ್ರತಗಳಿಗಿಂತಲೂ ಈ ಬಾರಿಯ ರಂಝಾನ್ ಹೆಚ್ಚಿನ ಪ್ರತಿಫಲಾರ್ಹ ವ್ರತಗಳೆಂದರೆ ತಪ್ಪಾಗದು.
ಮತ್ತೊಂದು ವಿಚಾರ ಇಲ್ಲಿ ನೆನಪಿಸಬೇಕಾಗುತ್ತದೆ. ವ್ರತ ತೊರೆಯುವ ಅಥವಾ ಇಫ್ತಾರ್ ನ ವಿಷಯದಲ್ಲಿ ನಮ್ಮ ಸಮುದಾಯವು ತೋರುವಂತಹ ಕಾಳಜಿ ಎಲ್ಲೂ ಕಂಡಿಲ್ಲ. ಪ್ರತಿಯೊಂದು ಮನೆ ಮನೆಗಳಲ್ಲೂ ಇಫ್ತಾರ್ ನಡೆಯುವಾಗ ಕುಟುಂಬ ಮತ್ತು ನೆರೆಕರೆಯವರನ್ನು ಕರೆಯೋದ್ರಿಂದ ಹಿಡಿದು , ಆ ವೇಳೆ ದಾರಿಯಲ್ಲಿ ಹೋಗುವವರಿಗೆ ದಾರಿ ಬದಿಯ ಮಸೀದಿಗಳಲ್ಲಿ, ಇಫ್ತಾರ್ ಟೆಂಟ್ ಗಳನ್ನು ಸ್ಥಾಪಿಸಿ ಪ್ರಯಾಣಿಕರಿಗೆ ವ್ರತ ತೊರೆಯುವ ಸೌಕರ್ಯಗಳನ್ನು ಒದಗಿಸುವುದು, ಹೀಗೇ ವಿಶ್ವದ ನಾನಾಕಡೆಗಳಲ್ಲಿ ನಾನಾ ರೀತಿಯ ಇಫ್ತಾರ್ ಸಂಗಮಗಳು ನಡೆಯುತ್ತಿರುವುದು ನಮ್ಮ ಸಹೋದರತೆಯ ಸಾಮೀಪ್ಯವನ್ನು ಎತ್ತಿ ತೋರಿಸುತ್ತದೆ. ಕಳೆದೆರಡು ದಿನಗಳ ಹಿದೆ ಪತ್ರಿಕೆಯೊಂದರ ಪುಟ ತಿರುವಿದಾಗ ಕಂಡ ವಾರ್ತೆಯೊಂದನ್ನು ಓದಿ ಅಚ್ಚರಿಯೆನಿಸಿತ್ತು. ಸಿಖ್ ಸಮುದಾಯದ ನೇತಾರರು ಸೇರಿ ನಡೆಸುವ ಇಫ್ತಾರ್ ಸಂಗಮದ ಫೋಟೋದೊಂದಿಗೆ ವರದಿಯಾಗಿತ್ತು.
ನಮ್ಮ ಕರಾವಳಿಯ ಉಡುಪಿ ಮಠದಲ್ಲೂ ಇಫ್ತಾರ್ ಸಂಗಮಗಳು ನಡೆಯುವುದಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮುಸ್ಲಿಮರಂತೆಯೇ ಹಿಂದೂಗಳೂ ವೃತಾಚರಣೆ ಮಾಡುತ್ತಾರೆ. ಒಂದೆರದೂ ವ್ರತವಲ್ಲ .ಪೂರ್ತಿ ತಿಂಗಳು..! ಅಲ್ಲದೇ ಅವರ ಹೋಟೆಲ್ಗಳು ಕೂಡಾ ಒಂದು ತಿಂಗಳ ಕಾಲ ಮುಚ್ಚಿಡುತ್ತಾರೆ. ಇಂತಹ ಮತ ಸೌಹಾರ್ದತೆಯು ಇಂದಿಗೂ ಜೀವಂತಿಕೆ ಪಡೆಯುತ್ತಲಿದೆ ಎನ್ನುವಾಗ ಅಚ್ಚರಿಯೆನಿಸುವುದಿದೆ. ವ್ರತ ಬರೀ ರಂಝಾನ್ ಎಂಬ ದೃಷ್ಟಿಯಿಂದ ನೋಡುವುದು ಮಾತ್ರವಲ್ಲ ಅದರ ಆರೋಗ್ಯಕರ ಅಂಶಗಳನ್ನೂ ತಿಳಿದರೆ ವೈದ್ಯಕೀಯ ಅಥವಾ ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ ಶಾರೀರಿಕ ಧೃಡತೆಗೂ ಪರಿಣಾಮಕಾರಿಯಾಗಿದೆ ಅನ್ನೋದನ್ನ ತಿಳಿದ ಹಲವು ಇತರ ಧರ್ಮೀಯರೂ ಉಪವಾಸ ಆಚರಿಸುವುದಿದೆ.

ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ.
ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು.
ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ.
ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರೋಧಿಸಿ , ಯಾರ ಒತ್ತಡ , ಬಲ ಪ್ರಯೋಗಗಳಿಲ್ಲದೆ ನಾವು ಬುರ್ಖಾ ಧರಿಸುತ್ತಿದ್ದೇವೆ. ಆರೋಪಗಳೆಲ್ಲ ಸುಳ್ಳೆಂದು ಒಂದು ಸ್ತ್ರೀ ಸಮುದಾಯ ಪ್ರತಿಭಟಿಸಿದಾಗ ಅಲ್ಲೂ ಕೂಡ ಧರ್ಮದ ,ಅಥವಾ ಇಸ್ಲಾಂನ ಕಾಳಜಿ ಬಹಳ ವ್ಯಕ್ತವಾಗಿ ಇತರರಲ್ಲಿ ಅಭಿವ್ಯಕ್ತಿಗೊಂಡಿತ್ತು.
ಧರ್ಮ ನಿಯಮಗಳನ್ನು ಸ್ಥಾಪಿಸಿದ್ದು ಅದರ ನೈಜ ಅನುಯಾಯಿಗಳಿಗೇ ಹೊರತು ನಾಮಧಾರಿ ಧರ್ಮ ರಕ್ಷಕರಿಗಲ್ಲ ಅನ್ನೋದನ್ನ ನಾವು ಮೊದಲು ಮನದಟ್ಟು ಮಾಡಬೇಕಿದೆ.
ಒಂದೆಡೆ ತಡೆಯಲಾಗಂತಹ ಸುಡು ಬಿಸಿಲು. ಈ ವೇಳೆಯಲ್ಲಿನ ವ್ರತಾಚರಣೆಗೂ , ಇತರ ಕಾಲಮಾನದಲ್ಲಿ ಕೈಗೊಳ್ಳುವ ವ್ರತಕ್ಕೂ ಪ್ರತಿಫಲದಲ್ಲಿ ತುಂಬಾ ವ್ಯತ್ಯಾಸವಿರಬಹುದು ಎಂಬುವುದು ನನ್ನ ಅನಿಸಿಕೆ. ಕಾರಣ ಈಗೀಗ ವ್ರತಾಚರಣೆಯು ಒಂದು ಟಾಸ್ಕ್ ನಂತಾಗಿದೆ. ರಂಝಾನ್ ತಿಂಗಳ ಮುಂಚೆಯೇ ಬಿಸಿಲನ್ನು ತಡೆಯಲಾಗದೆ ಲೀಟರ್ಗಟ್ಟಲೆ ನೀರು, ಸಿಹಿ ಪಾನೀಯಗಳನ್ನು ಸೇವಿಸಿ ಬಾಯಾರಿಕೆ ನೀಗಿಸಲು ಹರಸಾಹಸ ಪಡುತ್ತಿದ್ದೆವು. ಅದಕ್ಕೆಂದೇ ದಾರಿ ಬದಿಗಳಲ್ಲಿ ಕಬ್ಬು, ಕೋಲ್ಡ್ ಡ್ರಿಂಕ್ಸ್, ಜ್ಯೂಸ್ ಅಂಗಡಿಗಳು ತಲೆಯೆತ್ತಿವೆ. ಈ ನಿಟ್ಟಿನಲ್ಲಿ ದಿನದ ಹದಿಮೂರು , ಹದಿನಾಲ್ಕು ಗಂಟೆಗಳ ಕಾಲ ಸೃಷ್ಟಿಕರ್ತನಾದ ಅಲ್ಲಾಹನಿಗೆ ಅನ್ನ ಪಾನೀಯಗಳನ್ನು ತೊರೆಯುವುದು ಅಲ್ಪ ತ್ರಾಸದಾಯಕವಾದದ್ದು. ಹೀಗಾಗಿ ಇತರ ವ್ರತಗಳಿಗಿಂತಲೂ ಈ ಬಾರಿಯ ರಂಝಾನ್ ಹೆಚ್ಚಿನ ಪ್ರತಿಫಲಾರ್ಹ ವ್ರತಗಳೆಂದರೆ ತಪ್ಪಾಗದು.
ಮತ್ತೊಂದು ವಿಚಾರ ಇಲ್ಲಿ ನೆನಪಿಸಬೇಕಾಗುತ್ತದೆ. ವ್ರತ ತೊರೆಯುವ ಅಥವಾ ಇಫ್ತಾರ್ ನ ವಿಷಯದಲ್ಲಿ ನಮ್ಮ ಸಮುದಾಯವು ತೋರುವಂತಹ ಕಾಳಜಿ ಎಲ್ಲೂ ಕಂಡಿಲ್ಲ. ಪ್ರತಿಯೊಂದು ಮನೆ ಮನೆಗಳಲ್ಲೂ ಇಫ್ತಾರ್ ನಡೆಯುವಾಗ ಕುಟುಂಬ ಮತ್ತು ನೆರೆಕರೆಯವರನ್ನು ಕರೆಯೋದ್ರಿಂದ ಹಿಡಿದು , ಆ ವೇಳೆ ದಾರಿಯಲ್ಲಿ ಹೋಗುವವರಿಗೆ ದಾರಿ ಬದಿಯ ಮಸೀದಿಗಳಲ್ಲಿ, ಇಫ್ತಾರ್ ಟೆಂಟ್ ಗಳನ್ನು ಸ್ಥಾಪಿಸಿ ಪ್ರಯಾಣಿಕರಿಗೆ ವ್ರತ ತೊರೆಯುವ ಸೌಕರ್ಯಗಳನ್ನು ಒದಗಿಸುವುದು, ಹೀಗೇ ವಿಶ್ವದ ನಾನಾಕಡೆಗಳಲ್ಲಿ ನಾನಾ ರೀತಿಯ ಇಫ್ತಾರ್ ಸಂಗಮಗಳು ನಡೆಯುತ್ತಿರುವುದು ನಮ್ಮ ಸಹೋದರತೆಯ ಸಾಮೀಪ್ಯವನ್ನು ಎತ್ತಿ ತೋರಿಸುತ್ತದೆ. ಕಳೆದೆರಡು ದಿನಗಳ ಹಿದೆ ಪತ್ರಿಕೆಯೊಂದರ ಪುಟ ತಿರುವಿದಾಗ ಕಂಡ ವಾರ್ತೆಯೊಂದನ್ನು ಓದಿ ಅಚ್ಚರಿಯೆನಿಸಿತ್ತು. ಸಿಖ್ ಸಮುದಾಯದ ನೇತಾರರು ಸೇರಿ ನಡೆಸುವ ಇಫ್ತಾರ್ ಸಂಗಮದ ಫೋಟೋದೊಂದಿಗೆ ವರದಿಯಾಗಿತ್ತು.
ನಮ್ಮ ಕರಾವಳಿಯ ಉಡುಪಿ ಮಠದಲ್ಲೂ ಇಫ್ತಾರ್ ಸಂಗಮಗಳು ನಡೆಯುವುದಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮುಸ್ಲಿಮರಂತೆಯೇ ಹಿಂದೂಗಳೂ ವೃತಾಚರಣೆ ಮಾಡುತ್ತಾರೆ. ಒಂದೆರದೂ ವ್ರತವಲ್ಲ .ಪೂರ್ತಿ ತಿಂಗಳು..! ಅಲ್ಲದೇ ಅವರ ಹೋಟೆಲ್ಗಳು ಕೂಡಾ ಒಂದು ತಿಂಗಳ ಕಾಲ ಮುಚ್ಚಿಡುತ್ತಾರೆ. ಇಂತಹ ಮತ ಸೌಹಾರ್ದತೆಯು ಇಂದಿಗೂ ಜೀವಂತಿಕೆ ಪಡೆಯುತ್ತಲಿದೆ ಎನ್ನುವಾಗ ಅಚ್ಚರಿಯೆನಿಸುವುದಿದೆ. ವ್ರತ ಬರೀ ರಂಝಾನ್ ಎಂಬ ದೃಷ್ಟಿಯಿಂದ ನೋಡುವುದು ಮಾತ್ರವಲ್ಲ ಅದರ ಆರೋಗ್ಯಕರ ಅಂಶಗಳನ್ನೂ ತಿಳಿದರೆ ವೈದ್ಯಕೀಯ ಅಥವಾ ವೈಜ್ಞಾನಿಕ ದೃಷ್ಟಿಕೋನದಿಂದ ಹೇಳುವುದಾದರೆ ಶಾರೀರಿಕ ಧೃಡತೆಗೂ ಪರಿಣಾಮಕಾರಿಯಾಗಿದೆ ಅನ್ನೋದನ್ನ ತಿಳಿದ ಹಲವು ಇತರ ಧರ್ಮೀಯರೂ ಉಪವಾಸ ಆಚರಿಸುವುದಿದೆ.
ಕಾಮೆಂಟ್ಗಳು