
ಪ್ರಿಯ ಶೈಖುನಾ....
ತಾವು ನಮ್ಮೆಲ್ಲರ ಮಾರ್ಗದರ್ಶಕರು,ನಮ್ಮ ಏಳಿಗೆ ಮತ್ತು ಪ್ರಗತಿಯಲ್ಲೆಲ್ಲಾ ತಮ್ಮ ಅವಿಸ್ಮರಣೀಯ ಪ್ರಭಾವ ಸಾಫಲ್ಯಗಳಾಗಿವೆ.ತಮ್ಮೊಂದಿಗೆ ನಾವು ಸರ್ವದಾ ಸರ್ವತ್ರ ಋಣಿಯಾಗಿರುವೆವು.
ತಮಗೆ ಪ್ರತಿಯಾಗಿ ನೀಡಲು ನಮ್ಮ ಹಸ್ತಗಳು ಬರಿಶೂನ್ಯ.
ತಾವೆಂದಿಗೂ ಅಧಿಕಾರಕ್ಕಾಗಿ ಅಂಗಲಾಚಿ ಪಟ್ಟು ಹಿಡಿದಿಲ್ಲ
ಮೋಹದಿಂದ ಪಟ್ಟವು ತಮ್ಮನ್ನೇ ಅರಸಿಕೊಂಡು ಬಂದಿದ್ದೇ ಎಲ್ಲಾ....
ತಮ್ಮೊಡನೆ ಒಲವು ತೋರಿದವರೊಡನೆ ಒಲುಮೆಯ ಹಂಚಲು ತಮಗಂತೂ ವೈಮನಸ್ಯವೇ ಇಲ್ಲ....
ಶೈಖುನಾ ಕೋಟ ಉಸ್ತಾದರ ಜ್ಞಾನದ ಕೋಟೆಯೊಳಗೆ ಪಳಗಿದ ತಾವು ಕೋಟಿಗೊಬ್ಬರು....
ರಂಝಾನಿನ ದಿನಗಳೊಂದೊಂದು ಸರಿಯುತ್ತಿರುವಾಗ ನಿರೀಕ್ಷೆಯಿಂದಲೇ ಈ ಮನವು ತುಡಿಯುತಿದೆ ಆ ಸಚೇತನರ ಲವಲವಿಕೆಯಿಂದ ಕೂಡಿದ ಮುತ್ತಿನ ಉಪದೇಶವ ಆಲಿಸಲು....
ಆದರೆ....ಇದೀಗ
ಆ ಹೃದಯವು ನೋವ ನುಂಗುತ್ತಿದೆ....
ಆ ಶರೀರವಿಂದು ಬಳಲಿದೆ....
ಆ ಲವಲವಿಕೆ ಮಾಯವಾಗಿದೆ...
ಆ ನಯನಗಳಲ್ಲಿ ಮತ್ತೆ ಗುಣಮುಖರಾಗಬೇಕೆಂಬ ಹಂಬಲ ಕಾದಿದೆ...
ಇಲ್ಲ ಶೈಖುನಾ...
ತಾವು ಬರಬೇಕು....
ಮತ್ತೆ ಗುಣಮುಖರಾಗಿ.....
ನಿರೀಕ್ಷೆ ಹೊತ್ತ ನೂರಾರು ಶಿಷ್ಯಗಣಕ್ಕೆ ಆಸರೆಯಾಗಿ...
ತಮ್ಮ ಉಪದೇಶಗಳೇ ನಮ್ಮ ಉನ್ನತಿಗೆ ಹೇತು...
ತಮ್ಮ ನಿರ್ದೇಶನಗಳೇ ನಮ್ಮ ಗೆಲುವಿನ ನಿದರ್ಶನ...
ಜ್ಞಾನಧಾರೆಯ ನಡುವೆ ಹುರಿದುಂಬಿಸುತ್ತಿದ್ದ ಚಿಂತನಾರ್ಹ ಹಾಸ್ಯಭರಿತ ಮಣಿ ಮುತ್ತುಗಳೇ ನಮಗೆ ಸ್ಪೂರ್ತಿ..
ಅಕಾಡೆಮಿಯ ಅಂಗಣದಲ್ಲಿನ ತಮ್ಮ ಅನುದಿನದ ಹೆಜ್ಜೆಗಳು ಎಂದಿನಂತೆ ಇಂದೂ ನೆನಪಾಗಿದೆ..
ಮತ್ತೆ ಮತ್ತೆ ಮರುಕಳಿಸುತಿದೆ....
ಮನೋವೇದನೆಯ ಹೊತ್ತು ಅತ್ತ ಧಾವಿಸುವವರಿಗೆ ತಮ್ಮ ಮಂದಹಾಸ ಬೀರಿದ ಸಾಂತ್ವನದ ನುಡಿಗಳೇ ದಿವ್ಯ ಔಷಧವಾಗಿರಲು...
ಆ ಮೊಗದಲ್ಲಿ ನಗು ಮಿಂಚಲು ಪ್ರಾರ್ಥಿಸುತ್ತಿದೆ ಮುಗ್ಧ ಹೃದಯಗಳು ಹಲವು...
ಪ್ರಾರ್ಥಿಸೋಣ.....
ಯಾ ಅಲ್ಲಾಹ್...
ಆ ಅಭಿಜ್ಞರೊಂದಿಗಿನ ನಮ್ಮ ಅನುಬಂಧವ ಸುದೃಢಗೊಳಿಸು..
ಪ್ರೀತಿಯ ಶೈಖುನಾ ಪಯ್ಯಕ್ಕಿ ಉಸ್ತಾದರಿಗೆ ಪರಿಪೂರ್ಣ ಆರೋಗ್ಯವ ದಯಪಾಲಿಸು...
ಯಾ ಅಲ್ಲಾಹ್..ಆ ಮಂದಹಾಸವ ಮತ್ತೆ ಮರಳಿಸು,
ಶೈಖುನಾ ಪಯ್ಯಕ್ಕಿ ಉಸ್ತಾದರ ಪರಿಪೂರ್ಣ ಆಫಿಯತ್ಗಾಗಿ ಪವಿತ್ರ ರಂಝಾನಿನ ದಿನ ರಾತ್ರಿಗಳಲ್ಲಿ ತಮ್ಮ ಪ್ರಾರ್ಥನೆಯಲ್ಲಿ ಎಂದಿಗೂ ಮರೆಯದಿರಿ.....
(ಹಳೆಯ ಬರಹ-ಉಸ್ತಾದರ ವಿರಹಕ್ಕಿಂತ ಮುಂಚಿನದ್ದು)
✍🏿ನಿಝಾಮುದ್ದೀನ್ ಅನ್ಸಾರಿ
ಕಾಮೆಂಟ್ಗಳು