ವಿಷಯಕ್ಕೆ ಹೋಗಿ

*ಓ ಅಲ್ಲಾಹ್..ಮತ್ತೆ ಮರಳಿಸು ಆ ಮಂದಹಾಸವ*



ಪ್ರಿಯ ಶೈಖುನಾ....

ತಾವು ನಮ್ಮೆಲ್ಲರ ಮಾರ್ಗದರ್ಶಕರು,ನಮ್ಮ ಏಳಿಗೆ ಮತ್ತು ಪ್ರಗತಿಯಲ್ಲೆಲ್ಲಾ ತಮ್ಮ ಅವಿಸ್ಮರಣೀಯ ಪ್ರಭಾವ ಸಾಫಲ್ಯಗಳಾಗಿವೆ.ತಮ್ಮೊಂದಿಗೆ ನಾವು ಸರ್ವದಾ ಸರ್ವತ್ರ ಋಣಿಯಾಗಿರುವೆವು.
ತಮಗೆ ಪ್ರತಿಯಾಗಿ ನೀಡಲು ನಮ್ಮ ಹಸ್ತಗಳು ಬರಿಶೂನ್ಯ.
ತಾವೆಂದಿಗೂ ಅಧಿಕಾರಕ್ಕಾಗಿ ಅಂಗಲಾಚಿ ಪಟ್ಟು ಹಿಡಿದಿಲ್ಲ
ಮೋಹದಿಂದ ಪಟ್ಟವು ತಮ್ಮನ್ನೇ ಅರಸಿಕೊಂಡು ಬಂದಿದ್ದೇ ಎಲ್ಲಾ....
ತಮ್ಮೊಡನೆ ಒಲವು ತೋರಿದವರೊಡನೆ ಒಲುಮೆಯ ಹಂಚಲು ತಮಗಂತೂ ವೈಮನಸ್ಯವೇ ಇಲ್ಲ....

ಶೈಖುನಾ ಕೋಟ ಉಸ್ತಾದರ ಜ್ಞಾನದ ಕೋಟೆಯೊಳಗೆ ಪಳಗಿದ ತಾವು ಕೋಟಿಗೊಬ್ಬರು....

ರಂಝಾನಿನ ದಿನಗಳೊಂದೊಂದು ಸರಿಯುತ್ತಿರುವಾಗ ನಿರೀಕ್ಷೆಯಿಂದಲೇ ಈ ಮನವು ತುಡಿಯುತಿದೆ ಆ ಸಚೇತನರ ಲವಲವಿಕೆಯಿಂದ ಕೂಡಿದ ಮುತ್ತಿನ ಉಪದೇಶವ ಆಲಿಸಲು....

ಆದರೆ....ಇದೀಗ
ಆ ಹೃದಯವು ನೋವ ನುಂಗುತ್ತಿದೆ....
ಆ ಶರೀರವಿಂದು ಬಳಲಿದೆ....
ಆ ಲವಲವಿಕೆ ಮಾಯವಾಗಿದೆ...
ಆ ನಯನಗಳಲ್ಲಿ ಮತ್ತೆ ಗುಣಮುಖರಾಗಬೇಕೆಂಬ ಹಂಬಲ ಕಾದಿದೆ...

ಇಲ್ಲ ಶೈಖುನಾ...
ತಾವು ಬರಬೇಕು....
ಮತ್ತೆ ಗುಣಮುಖರಾಗಿ.....
ನಿರೀಕ್ಷೆ ಹೊತ್ತ ನೂರಾರು ಶಿಷ್ಯಗಣಕ್ಕೆ ಆಸರೆಯಾಗಿ...
ತಮ್ಮ ಉಪದೇಶಗಳೇ ನಮ್ಮ ಉನ್ನತಿಗೆ ಹೇತು...
ತಮ್ಮ ನಿರ್ದೇಶನಗಳೇ ನಮ್ಮ ಗೆಲುವಿನ ನಿದರ್ಶನ...
ಜ್ಞಾನಧಾರೆಯ ನಡುವೆ ಹುರಿದುಂಬಿಸುತ್ತಿದ್ದ ಚಿಂತನಾರ್ಹ ಹಾಸ್ಯಭರಿತ ಮಣಿ ಮುತ್ತುಗಳೇ ನಮಗೆ ಸ್ಪೂರ್ತಿ..
ಅಕಾಡೆಮಿಯ ಅಂಗಣದಲ್ಲಿನ ತಮ್ಮ ಅನುದಿನದ ಹೆಜ್ಜೆಗಳು ಎಂದಿನಂತೆ ಇಂದೂ ನೆನಪಾಗಿದೆ..
ಮತ್ತೆ ಮತ್ತೆ ಮರುಕಳಿಸುತಿದೆ....

ಮನೋವೇದನೆಯ ಹೊತ್ತು ಅತ್ತ ಧಾವಿಸುವವರಿಗೆ ತಮ್ಮ ಮಂದಹಾಸ ಬೀರಿದ ಸಾಂತ್ವನದ ನುಡಿಗಳೇ ದಿವ್ಯ ಔಷಧವಾಗಿರಲು...
ಆ ಮೊಗದಲ್ಲಿ ನಗು ಮಿಂಚಲು ಪ್ರಾರ್ಥಿಸುತ್ತಿದೆ ಮುಗ್ಧ ಹೃದಯಗಳು ಹಲವು...

ಪ್ರಾರ್ಥಿಸೋಣ.....
ಯಾ ಅಲ್ಲಾಹ್...
ಆ ಅಭಿಜ್ಞರೊಂದಿಗಿನ ನಮ್ಮ ಅನುಬಂಧವ ಸುದೃಢಗೊಳಿಸು..
ಪ್ರೀತಿಯ ಶೈಖುನಾ ಪಯ್ಯಕ್ಕಿ ಉಸ್ತಾದರಿಗೆ ಪರಿಪೂರ್ಣ ಆರೋಗ್ಯವ ದಯಪಾಲಿಸು...
ಯಾ ಅಲ್ಲಾಹ್..ಆ ಮಂದಹಾಸವ ಮತ್ತೆ ಮರಳಿಸು, ‌

ಶೈಖುನಾ ಪಯ್ಯಕ್ಕಿ ಉಸ್ತಾದರ ಪರಿಪೂರ್ಣ ಆಫಿಯತ್ಗಾಗಿ ಪವಿತ್ರ ರಂಝಾನಿನ ದಿನ ರಾತ್ರಿಗಳಲ್ಲಿ ತಮ್ಮ ಪ್ರಾರ್ಥನೆಯಲ್ಲಿ ಎಂದಿಗೂ ಮರೆಯದಿರಿ.....

(ಹಳೆಯ ಬರಹ-ಉಸ್ತಾದರ ವಿರಹಕ್ಕಿಂತ ಮುಂಚಿನದ್ದು)

✍🏿ನಿಝಾಮುದ್ದೀನ್ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...

ಅರಬಿ ಭಾಷೆ : ಇತಿಹಾಸ ಮತ್ತು ವರ್ತಮಾನ

✒ ನಿಝಾಮ್ ಅನ್ಸಾರಿ ಭಾಷೆ ಮನುಷ್ಯನ ಸವಿಶೇಷತೆಗಳಲ್ಲೊಂದು. ಚಿಂತನೆಗಳು ಮತ್ತು ಅಭಿರುಚಿಗಳ ಆಶಯವನ್ನು ಅಭಿವ್ಯಕ್ತಿಗೊಳಿಸುವ ಅಥವಾ ಹೊರ ಹಾಕುವ ಶಬ್ದಗಳ ಒಂದು ಸಮೂಹವಾಗಿದೆ ಇದು. ಪ್ರಪಂಚದಲ್ಲಿ ಇಂದು ಹಲವು ಅಧಿಕೃತವಾಗಿರುವ ಭಾಷೆಗಳು ಅಸ್ತಿತ್ವದಲ್ಲಿವೆ.ಅದರಲ್ಲೂ ಪ್ರಾದೇಶಿಕ ಭಾಷೆಗಳು ಬೇರೇನೆ. ಆದರೆ ಈ ಎಲ್ಲಾ ಭಾಷೆಗಳ ಪೈಕಿ ರಾಜನಂತೆ ಇರೋದು ಅರಬಿ ಭಾಷೆ ಮಾತ್ರ . ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ನಿಯಂತ್ರಿಸುವ ತಾಕತ್ತಿದ್ದ ಭಾಷೆಯಾಗಿತ್ತು ಅರಬಿ. ಯಾವ ರೀತಿಯಲ್ಲಿ ಈಗ ಆಂಗ್ಲ ಭಾಷೆಗೆ ಪ್ರಾಧಾನ್ಯತೆ, ಜಾಗತಿಕ ಅಂಗೀಕಾರ ಇದೆಯೋ ಅದೇ ರೀತಿಯಲ್ಲಿ ಅಂದು ಅರಬಿ ಭಾಷೆ ಸ್ಥಾನ ಪಡೆದಿತ್ತು. ಬಲದಿಂದ ಎಡಕ್ಕೆ ಇರುವ ಕೆಲವೊಂದು ಭಾಷೆಗಳಲ್ಲಿ ಅರಬೀ ಕೂಡಾ ಒಂದು. ಸೈಮಟಿಕ್ ಭಾಷೆಗಳಲ್ಲೊಂದಾದ ಅರಬಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳ ಪೈಕಿ ಒಂದು ಕೂಡಾ . ಐಕ್ಯ ರಾಷ್ಟ್ರ ಸಂಘದ ಅಂಗೀಕೃತ ಭಾಷೆಯಾದ ಅರಬಿ, 26 ದೇಶಗಳ ಅಧಿಕೃತ ಭಾಷೆಯಾಗಿದೆ‌. ಆಫ್ರಿಕನ್ ಯೂನಿಯನ್ ಆರ್ಗನೈಸೇಷನ್ ಇಸ್ಲಾಮಿಕ್ ಕಾನ್ಫೆರನ್ಸ್ ನಂತಹ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಅರಬಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ. ಅರಬಿ ಭಾಷೆ: ಹುಟ್ಟು ಮತ್ತು ಬೆಳವಣಿಗೆ ಬಿ.ಸಿ 1900 ರಲ್ಲಿ ಜೀವಿಸಿದ್ದ 'ಯಅರೂಬ್ ಇಬ್ನ್ ಖಹ್ತಾನ್' ಎಂಬವರನ್ನು ಅರಬಿ ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ನಾಮಕ್ಕೆ ಹೊಂದಿಕೊಂಡು 'ಅರಬಿ' ಎಂಬ ಹೆಸರು...

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...