ವಿಷಯಕ್ಕೆ ಹೋಗಿ

ನೋವು -ನೆನಪು

🌀🌀🌀🌀🌀🌀🌀🌀🌀🌀

*ಕಡಮೇರಿ ರಹ್ಮಾನಿಯಾ ದ ನೆನಪು...*



*ಪ್ರಿಯ ಹಾರಿಸ್ ರಹ್ಮಾನಿ..... ನೆನಪಿನಾಳದಿ ಬೇರೂರಿದ ನೋವು ಮರುಕಳಿಸುತ್ತಿದೆ ಗೆಳೆಯಾ... ನಿನ್ನ ನೆನಪಲ್ಲೇ ಒಂದೆರೆಡು ಗೆರೆಗಳು ಬರೆಯಬೇಕೆಂದು ಅನಿಸಿತು.*
◻▪▫▪▫▪▫▪▫◻
*ಇದೀಗ ಮಗದೊಮ್ಮೆ ಸನದುದಾನ ಸಮ್ಮೇಳನಕ್ಕೆ ಕಡಮೇರಿ ರಹ್ಮಾನಿಯಾ ಸಜ್ಜಾಗಿದೆ.ರಹ್ಮಾನಿಯಾ ಸಮ್ಮೇಳನ ಬರುವಾಗ ಮತ್ತೊಮ್ಮೆ ಹಾರಿಸ್ ರಹ್ಮಾನಿ ನೆನಪಿನಂಗಳದಲ್ಲಿದ್ದಾನೆ. ಬಾಲ್ಯದಿಂದಲೂ ನಾವು ಗೆಳೆಯರು,ನನ್ನ ದೊಡ್ಡಮ್ಮನ ಮೊಮ್ಮಗ ಕೂಡಾ.*
*(ನಮ್ಮ ತಾತರಾಗಿದ್ದ ಮರ್ಹೂಮ್ ಅಬೂಬಕ್ಕರ್ ಹಾಜಿ ಪೊನ್ನಾನಿಯಲ್ಲಿ ಕಲಿತ ಪಂಡಿತರಾಗಿದ್ದರು.ಆಲಡ್ಕಕ್ಕೆ ಶಂಸುಲ್ ಉಲಮಾ ಪ್ರಭಾಷಣಕ್ಕೆ ಬರುತ್ತಿದ್ದ ಕಾಲದಲ್ಲಿ ತಾತನವರು ಆಗ ಕಲ್ಲಡ್ಕದಲ್ಲಿ ಮುದರ್ರಿಸ್ ಆಗಿದ್ದರಂತೆ.ಸೂಕ್ಷ್ಮತೆಯ ಆಗರವಾಗಿದ್ದ ಅವರು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು, ಆದ್ರಿಂದ ನಾವು ಅವರ ಮೊಮ್ಮಕ್ಕಳಾದೆವಲ್ಲ ಅನ್ನೋ ಅಭಿಮಾನ ಎಂದಿಗೂ ಇದೆ.ಅಷ್ಟೇ ಅಲ್ಲದೆ ಅಂದು ನಮ್ಮೂರಲ್ಲಿ ಸಮಸ್ತದ ಉಸಿರಾಗಿ ನಿರಾಶ್ರಿತರ ಧ್ವನಿಯಾಗಿದ್ದ ಸಕ್ರಿಯ ಕಾರ್ಯಕರ್ತರಾದ ಕಲ್ಲಡ್ಕ ಮರ್ಹೂಮ್ ಇಬ್ರಾಹಿಂ ಹಾಜಿಯವರಿಗೆ ನಮ್ಮ ತಾತರೆಂದರೆ ಬಹಳ ಅಚ್ಚುಮೆಚ್ಚು.ಈ ಇಬ್ಬರೂ ಮಹಾ ಮನುಷ್ಯರು ಕಲ್ಲಡ್ಕದ ಧಾರ್ಮಿಕ ಮತ್ತು ಸಾಮಾಜಿಕ ನೇತೃತ್ವಕ್ಕೆ ಮುಂದಾಳತ್ವ ವಹಿಸಿದ್ದರು ಎಂದರೆ ತಪ್ಪಾಗಲ್ಲ.)*

*ಹಾರಿಸ್ ತನ್ನ ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೂ ಕಲಿತದ್ದು ಕೋಟೆಕಾರಿನ ಹಾಸ್ಟೆಲೊಂದರಲ್ಲಾಗಿತ್ತು.ನಿಜವಾಗಿಯೂ ಅದರ ನಂತರವಾಗಿತ್ತು ನನ್ನೊಂದಿಗಿನ ಒಡನಾಟ ಪ್ರಾರಂಭಗೊಂಡದ್ದು.ಕಾರಣ ಸಣ್ಣಪುಟ್ಟ ಕೆಲಸ ನೋಡಿಕೊಂಡು ಆ ನಂತರ ಅಧಿಕವೂ ತಂಗಿದ್ದು ತನ್ನ ಅಜ್ಜಿಯ ಕೆ.ಸಿ ರೋಡಿನ ಮನೆಯಲ್ಲೇ.ಆ ಮಧ್ಯೆ ನಾನೂ ಕೂಡಾ ಅಲ್ಲೇ ಹತ್ತಿರದ ದೊಡ್ಡಮ್ಮನ ಮನೆಯಲ್ಲಿ ತಂಗಿದ್ದೆ.ನಂತರ ಹಾರಿಸ್ ನ ಕುಶಾಗ್ರತೆಯನ್ನು ಮನಗಂಡು ಆತನ ತಾಯಿಯ ಸಹೋದರ ಮಜೀದ್ ಮುಸ್ಲಿಯಾರರು ಉನ್ನತ ಮಟ್ಟದ ಶಿಕ್ಷಣ ಪಡೆಯುವ ಇರಾದೆಯಿಂದ ಕಡಮೇರಿ ರಹ್ಮಾನಿಯಾಗೆ ಸೇರಿಸಿದ್ದರು.ಅವನ ಜೀವನದಲ್ಲಿ ಅದೊಂದು ಕ್ರಾಂತಿಯ ಹೆಜ್ಜೆಯಾಗಿತ್ತು.ಅದೇ ವರ್ಷ ನನ್ನನ್ನೂ ಅವರೇ ಪಯ್ಯಕ್ಕಿಗೆ ಸೇರಿಸಿದ್ದರು.ನಂತರ ನಮ್ಮ ಭೇಟಿಯು ನಿಧಾನ ಪಡೆಯಿತು.ಕಾರಣ ನಂತರ ಶಿಕ್ಷಣದೆಡೆಗೆ ಗಮನ ಕೊಡಬೇಕಾಯಿತು.*

*ಆದರೂ ಹಾರಿಸ್ ನಾನು ಪಯ್ಯಕ್ಕಿ ಯಲ್ಲಿ ತೃತೀಯ ವರ್ಷಗಳನ್ನು ಪೂರೈಸುವುದರೊಳಗೆ 3 ಬಾರಿ ಬಂದಿದ್ದ.ರಹ್ಮಾನಿಯಾದ ಕ್ಯಾಲೆಂಡರ್ ವಿತರಣೆಗಾಗಿ ಎಂದು ನನ್ನ ನೆನಪು..ಈ ಮಧ್ಯೆ ಮಾಸಿಕವೊಂದರಲ್ಲಿ ಲೇಖನವೊಂದು ಪ್ರಕಟಗೊಂಡಾಗ ಇನ್ನೂ ಬರೆಯಬೇಕು ಎಂದು ಹುರಿದುಂಬಿಸಿದ್ದ.ರಹ್ಮಾನಿ ಕೂಡಾ ಒಳ್ಳೆಯ ಬರಹಗಾರ.ಪ್ರಚಲಿತ ಮಾಸಿಕದಲ್ಲಿ ಎಡೆಬಿಡದೆ ಬರೆಯುತ್ತಿದ್ದ.ನನ್ನನ್ನೂ ಪ್ರೋತ್ಸಾಹಿಸಿದ್ದು ಇದೆ.ನಂತರ ನಮ್ಮ ಭೇಟಿ ಆಲಪ್ಪುಝದಲ್ಲಿ ನಡೆದ ಸಮಸ್ತ ಮಹಾ ಸಮ್ಮೇಳನ ದ ವೇದಿಕೆಯ ಬಳಿಯಾಗಿತ್ತು.ಆಗ ಆತನನ್ನು ನನ್ನ ಗೆಳೆಯರಿಗೂ ಪರಿಚಯಿಸಿದ್ದೆ.ಆತನೂ ಆಗ ನಾನು ಮಲಪ್ಪುರಂ ಜಿಲ್ಲೆಯ ಪ್ರದೇಶವೊಂದರಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವೆನೆಂದು ಹೇಳಿದ್ದ.ರಹ್ಮಾನಿಯಾದ ಕಲಿಕೆ ಮುಗಿದ ನಂತರ ದ.ಕ ಜಿಲ್ಲೆಯ ಕೈಕಂಬ ಸಮೀಪ ತಿಂಗಳುಗಳ ಕಾಲ ಖತೀಬ್ ಆಗಿದ್ದು ನಂತರ ಉನ್ನತ ವ್ಯಾಸಂಗಕ್ಕಾಗಿ ಮಲಪ್ಪುರದೆಡೆಗೆ ಸಾಗಿದ್ದ.ಕಾಣದೆ ತುಂಬಾ ದಿನಗಳು ಕಳೆದುದರಿಂದ ನನಗೆ ಆಗಲೇ ನೋಡಲು ತುಂಬಾ ಚೇಂಜಸ್ ಕಾಣುತ್ತಿದ್ದ ರಹ್ಮಾನಿ ಉಭಯ ಕುಶಲೋಪರಿಯ ಬಳಿಕ ಅವರ ತಂಡ ನಮ್ಮಿಂದ ಬೀಳ್ಕೊಟ್ಟರು.ನಾನಂತೂ ಕನ ಮನದಲ್ಲೂ ಎಣಿಸಿರಲ್ಲಿಲ್ಲ! ಅದು ನನ್ನ ಕೊನೆಯ ಭೇಟಿಯೆಂದು.ಅಂದು ಹೇಳಿದ ಸಲಾಮ್ ಕೊನೆಯ ಸಲಾಮೆಂದು.ನಮಗೆ ಅಭಿಮಾನವಿತ್ತು ರಹ್ಮಾನಿ ನಮ್ಮ ತಾತನವರ ಕೀರ್ತಿಯನ್ನು ಬಾನೆತ್ತರಕ್ಕೇರಿಸುವನೆಂದು.ನಿರೀಕ್ಷೆಯಿತ್ತು‌ ನಮ್ಮ ಕುಟುಂಬದ ಘನ ವಿದ್ವಾಂಸನಾಗಿ ಹೊರಬರುವನೆಂದು.ರಹ್ಮಾನಿಯಾ ಗೂ ಕೂಡಾ ಆಕಾಂಕ್ಷೆ ಇತ್ತು.*

*ಆದರೆ ವಿಧಿಯ ಲೀಲೆ ಬೇರೆಯೇ ಆಗಿತ್ತು.ಆಕಸ್ಮಿಕವಾಗಿ ಆತನ ರೂಹ್ ಸ್ವರ್ಗದೆಡೆಗೆ ಹಾರಿತ್ತು.ಹಲವು ಕನಸ ಗೋಪುರಗಳು ನುಚ್ಚುನೂರಾಗಿದ್ದವು.ಒಡನಾಟದಲ್ಲಿ ಸದಾ ಮಂದಸ್ಮಿತ ಸ್ವಭಾವಗುಣಕ್ಕೆ ಕಾವಲುನಿಂತ ಹಾರಿಸ ನ ಕನಸುಗಳು ಕವಲೊಡೆಯುವ ಮುನ್ನ ಮುದುಡಿ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ.ಸಮಸ್ತ ಎಂದರೆ ಜೀವವಾಗಿತ್ತು.ಹೆಮ್ಮೆ ಮತ್ತು ಗೌರವ ಕೂಡಾ ಇತ್ತು.ವಿರುದ್ಧ ಧ್ವನಿಯೆತ್ತಿದವರ ಸದ್ದಡಗಿಸಲು ಸದಾ ಮುಂದಿದ್ದ.ಕಾರಣ ತನ್ನ ಗುರು ಪರಂಪರೆಯ ಎಲ್ಲರೂ ಸಮಸ್ತದ ನೇತೃತ್ವದಲ್ಲಿರುವ ವಿಧ್ವತ್ ಪ್ರತಿಭೆಗಳು..ಕೋಟುಮಲ ಉಸ್ತಾದರಂತಹ ಸಾತ್ವಿಕರು.ಇಬ್ಬರೂ ಈಗ ನಮ್ಮೊಂದಿಗಿಲ್ಲ.ಆದರೆ ಅವರ ನೆನಪುಗಳು ಸದಾ ಮರುಕಳಿಸುತ್ತಿದೆ.ಆ ದಿನ ವಾರ್ತೆ ಕೇಳಿದ ನನಗಂತೂ ನಂಬಲಾಗಲೇ ಇಲ್ಲ.ತಾಜುದ್ದೀನ್ ರಹ್ಮಾನಿಯವರನ್ನು ಸಂಪರ್ಕಿಸಿ ವಿಷಯ ತಿಳಿದ ನಂತರ ಏನೆನ್ನಬೇಕೋ ತಿಳಿಯಲಾರದೆ ಚಡಪಡಿಸಿತು ಮನ.ಮುಸ್ಸಂಜೆಯಾಗುವ ಮುನ್ನ ಗುಂಡುಕಲ್ಲು ತಲುಪಿದೆ.ಅಲ್ಲಿ ತಲುಪಿದರೆ ಯಾವ ಕಲ್ಲು ಹೃದಯವೂ ಕರಗಿ ನೀರಾಗುವಂತಿತ್ತು ಆ ವಾತಾವರಣ.ಮಳೆ ಹನಿಗಳು ಭುವಿಯನ್ನು ತಂಪೆರಗಿಸುತ್ತಿತ್ತು.ಅಂಬುಲೆನ್ಸೊಂದು ಬಂದು ನಿಂತಾಗ ಸೇರಿದ್ದ ನೂರಾರು ಜನರು ಈ ಜವಾನನ ಮಯ್ಯಿತನ್ನು ನೋಡಲು ಸೇರಿದ್ದರು.ಆ ಮುಖವು ಪ್ರಕಾಶಿಸುತ್ತಿತ್ತು. ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಜನರು ಧಫನ ಭೂಮಿಯವರೆಗೂ ಸಾಕ್ಷಿಯಾಗಿದ್ದರು.ಜಿಫ್ರೀ ತಂಗಳ್ ಮಯ್ಯಿತ್ ನಮಾಝ್ ಗೆ ನೇತೃತ್ವ ನೀಡಿದ್ದರು.*

*ಅಲ್ಲಾಹನು ಪ್ರಿಯ ಗೆಳೆಯ ಹಾರಿಸ್ ರಹ್ಮಾನಿ ಗೆ ಮಗ್ಫಿರತ್ ನೀಡಲಿ,ನಮ್ಮೆಲ್ಲರನ್ನು ಕುಟುಂಬದೊಂದಿಗೆ ಸ್ವರ್ಗದಲ್ಲಿ ಒಂದು ಗೂಡಿಸಲಿ.ಆಮೀನ್ ಯಾ ರಬ್ಬಲ್ ಆಲಮೀನ್..*

*✍🏻ನಿಝಾಮುದ್ದೀನ್ ಅನ್ಸಾರಿ ಕಲ್ಲಡ್ಕ*
🔳◽🔳◽🔳◽🔳◽🔳◽

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...

ಅರಬಿ ಭಾಷೆ : ಇತಿಹಾಸ ಮತ್ತು ವರ್ತಮಾನ

✒ ನಿಝಾಮ್ ಅನ್ಸಾರಿ ಭಾಷೆ ಮನುಷ್ಯನ ಸವಿಶೇಷತೆಗಳಲ್ಲೊಂದು. ಚಿಂತನೆಗಳು ಮತ್ತು ಅಭಿರುಚಿಗಳ ಆಶಯವನ್ನು ಅಭಿವ್ಯಕ್ತಿಗೊಳಿಸುವ ಅಥವಾ ಹೊರ ಹಾಕುವ ಶಬ್ದಗಳ ಒಂದು ಸಮೂಹವಾಗಿದೆ ಇದು. ಪ್ರಪಂಚದಲ್ಲಿ ಇಂದು ಹಲವು ಅಧಿಕೃತವಾಗಿರುವ ಭಾಷೆಗಳು ಅಸ್ತಿತ್ವದಲ್ಲಿವೆ.ಅದರಲ್ಲೂ ಪ್ರಾದೇಶಿಕ ಭಾಷೆಗಳು ಬೇರೇನೆ. ಆದರೆ ಈ ಎಲ್ಲಾ ಭಾಷೆಗಳ ಪೈಕಿ ರಾಜನಂತೆ ಇರೋದು ಅರಬಿ ಭಾಷೆ ಮಾತ್ರ . ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ನಿಯಂತ್ರಿಸುವ ತಾಕತ್ತಿದ್ದ ಭಾಷೆಯಾಗಿತ್ತು ಅರಬಿ. ಯಾವ ರೀತಿಯಲ್ಲಿ ಈಗ ಆಂಗ್ಲ ಭಾಷೆಗೆ ಪ್ರಾಧಾನ್ಯತೆ, ಜಾಗತಿಕ ಅಂಗೀಕಾರ ಇದೆಯೋ ಅದೇ ರೀತಿಯಲ್ಲಿ ಅಂದು ಅರಬಿ ಭಾಷೆ ಸ್ಥಾನ ಪಡೆದಿತ್ತು. ಬಲದಿಂದ ಎಡಕ್ಕೆ ಇರುವ ಕೆಲವೊಂದು ಭಾಷೆಗಳಲ್ಲಿ ಅರಬೀ ಕೂಡಾ ಒಂದು. ಸೈಮಟಿಕ್ ಭಾಷೆಗಳಲ್ಲೊಂದಾದ ಅರಬಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳ ಪೈಕಿ ಒಂದು ಕೂಡಾ . ಐಕ್ಯ ರಾಷ್ಟ್ರ ಸಂಘದ ಅಂಗೀಕೃತ ಭಾಷೆಯಾದ ಅರಬಿ, 26 ದೇಶಗಳ ಅಧಿಕೃತ ಭಾಷೆಯಾಗಿದೆ‌. ಆಫ್ರಿಕನ್ ಯೂನಿಯನ್ ಆರ್ಗನೈಸೇಷನ್ ಇಸ್ಲಾಮಿಕ್ ಕಾನ್ಫೆರನ್ಸ್ ನಂತಹ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಅರಬಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ. ಅರಬಿ ಭಾಷೆ: ಹುಟ್ಟು ಮತ್ತು ಬೆಳವಣಿಗೆ ಬಿ.ಸಿ 1900 ರಲ್ಲಿ ಜೀವಿಸಿದ್ದ 'ಯಅರೂಬ್ ಇಬ್ನ್ ಖಹ್ತಾನ್' ಎಂಬವರನ್ನು ಅರಬಿ ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ನಾಮಕ್ಕೆ ಹೊಂದಿಕೊಂಡು 'ಅರಬಿ' ಎಂಬ ಹೆಸರು...

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...