ವಿಷಯಕ್ಕೆ ಹೋಗಿ

'ಮ್ಯೂಸಿಕಲಿ': ನರಕದ ಭಯವಿರಲಿ -'ಟಿಕ್ ಟಾಕ್' ಮೋಡಿಗೆ ಬಲಿಯಾಗುತ್ತಿರುವ ಹದಿಹರೆಯದ ಮುಸ್ಲಿಂ ತರುಣಿಯರು'

✒-ನಿಝಾಮ್ ಅನ್ಸಾರಿ



ಪ್ರಪಂಚವು ಹಂತ ಹಂತವಾಗಿ ಅಭಿವೃದ್ಧಿಯ ಕಡೆಗೆ ದಾಪುಗಾಲಿರಿಸುತ್ತಿದೆ. ದಿನ ಕಳೆದಂತೆ ವಿಜ್ಞಾನ ತಂತ್ರಜ್ಞಾನ ವಲಯಗಳಲ್ಲಿ ಕ್ಷಿಪ್ರಗತಿಯ ಬದಲಾವಣೆಯನ್ನು ಕಾಣುತ್ತಿದ್ದೇವೆ. ನಿನ್ನೆ ಹೊಸತೆನಿಸಿದ್ದೆಲ್ಲಾ ಇಂದಿಗೆ ಹಳೆಯದಾಗುತ್ತಿದೆ. ಹಳೆಯ ಕಾಲದಲ್ಲಿ ಶಾಲೆಯಿಂದ ಕೊಂಚ ಬಿಡುವು ಸಿಕ್ಕಾಗ ಕ್ರಿಕೆಟ್, ಚೆನ್ನಿದಾಂಡು ಎಂದೆಲ್ಲಾ ಹೇಳಿ ಮೈದಾನಕ್ಕಿಳಿಯೋದು, ಹುಣಸೇ ಮರ ಏರೋದು, ಮಾವಿನ ಮರಕ್ಕೆ ಕಲ್ಲೆಸೆಯೋದು ಸರ್ವೇಸಾಮಾನ್ಯವಾಗಿತ್ತು. ಆಧುನಿಕತೆಯ ಜಗತ್ತು ಮನುಷ್ಯನ ದೈಹಿಕ ಬಲಕ್ಕಾಗಿ ಜಿಮ್ ಕೋಚಿಂಗ್ ಸೆಂಟರ್ ಗಳನ್ನು ತೆರೆದರೆ, ಶರೀರವನ್ನು ಅಲ್ಪವೂ ಅಲುಗಾಡಿಸದೆ ಕೆಲಸ ಮಾಡಿ ವೇತನ ಪಡೆಯುವಲ್ಲಿ ಕಂಪೂಟರೀಕೃತ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದೆ‌. ಅಂದರೆ ಹಾಯಾಗಿ ಕುಳಿತಲ್ಲೇ ತಿಂಡಿ ತಿನಿಸು, ಕೆಲಸ,ವ್ಯಾಯಾಮವೆಲ್ಲದರಲ್ಲೂ ಸುಧಾರಿಸಿಕೊಂಡು ಮುಂದೆ ಸಾಗಿದೆ. ಹಿಂದಿನ ಕಾಲದಂತೆ ಊರೂರು ಅಲೆದಾಡೋದು,ನೆರೆಕರೆ ಸಂಬಂಧಿಕರನ್ನು ಕಂಡು ಮಾತನಾಡೋದು, ಹರಟೆ ಹೊಡೆಯೋದು ಇಂದಿಗೆ ಹಳೆಯ ಆಚಾರಗಳಾಗಿ ಪರಿಗಣಿಸಲ್ಪಟ್ಟಿದೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯನನ್ನು ತಾಳಕ್ಕೆ ತಕ್ಕಂತೆ ಕುಣಿಸುವ ,ಮಾನಸಿಕವಾಗಿ ತನ್ನತ್ತ ಕೇಂದ್ರೀಕರಿಸುವಲ್ಲಿ ಅನುಸರಿಸುವ ಗುಲಾಮರಂತೆ ಕಂಡುಕೊಂಡಿದೆ‌.

ನಾವು ಎಲ್ಲಾ ಸಮಯದಲ್ಲೂ ಬ್ಯುಸಿಯಾಗಿದ್ದರೆ ಮೊಬೈಲ್,ಕಂಪ್ಯೂಟರ್ ಗಳಂತಹ ತಂತ್ರಜ್ಞಾನಗಳು ನಮ್ಮನ್ನು ಗುಲಾಮರನ್ನಾಗಿಸಿದೆ ಎನ್ನಬಹುದು. ಮನೆ ದಿನಚರಿಗಳೂ ಆರಭವಾಗೋದೇ ತಂತ್ರಜ್ಞಾನದಿಂದ. ಬೆಳಗ್ಗಿನ ಬ್ರೇಕ್ ಫಾಸ್ಟ್ ನಿಂದ ರಾತ್ರಿಯ ಡಿನ್ನರ್ ವರೆಗೂ ಆನ್ಲೈನ್ ಮೂಲಕ ಆರ್ಡರ್ ಮಾಡಿ ತರಿಸುತ್ತಾರೆ. ನಗರ ವಲಯಗಳಲ್ಲಂತೂ ಗ್ಯಾಸ್ ಸ್ಟೌವ್ ಗಳನ್ನೇ ಮುಟ್ಟದ ಅದೆಷ್ಟೋ ಮಹಿಳೆಯರಿದ್ದಾರೆ.
ನಮ್ಮ ಈ ಬ್ಯುಸಿಮಯ ಬದುಕು ಜೀವನದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ ನಮ್ಮವರೊಂದಿಗೆ ಮಾತನಾಡಲೂ ಕೂಡಾ ಸಮಯದ ಕೊರತೆ ಶುರುವಿಟ್ಟಿದೆ‌. ಸಮಯ ಕಳೆಯುದಕ್ಕಾಗಿ ವಿಭಿನ್ನ ಆಟೋಟಗಳಿಗೆ ಮೊರೆ ಹೋಗುತ್ತಿದ್ದ ನಾವು ಈಗಿನ ಮಕ್ಕಳ ಸಮಯವೆಲ್ಲವೂ ಪರದೆ ಮೇಲೆ ವ್ಯರ್ಥವಾಗಿ ಹೋಗೋದನ್ನ ನೋಡಿ ತುಟಿಪಿಟಿಕ್ಕೆನ್ನದೆ ಹೈರಾಣಾಗಿ ಬಿಡುತ್ತೇವೆ.

ನಿಜವಾಗಿಯೂ ಇಲ್ಲಿ ನಡೆಯುತ್ತಿರುವುದೇನೆಂದರೆ,ಆಧುನಿಕ ತಂತ್ರಜ್ಞಾನದೊಂದಿಗಿನ ಅಪರಿಮಿತವಾದ ನಮ್ಮ ಒಡನಾಟ. ಸಮಯವು ಹಿಂದಿನಂತೆಯೇ ಇಪ್ಪತ್ನಾಲ್ಕು ಘಂಟೆಗಳೇ ಇವೆ.ಆದರೆ ಸಾಕಾಗುತ್ತಿಲ್ಲ. ಹಗಲು ರಾತ್ರಿಯೆನ್ನದೆ ಮೊಬೈಲ್ ಲೋಕದ ಮಾಯಾಜಾಲದಲ್ಲಿ ಬಿದ್ದಿರುವ ನಮಗೆ ನಮ್ಮ ಜಾಲತಾಣವೇ ಹೋರಾಟದ ವೇದಿಕೆ. ಆಂತರಿಕವಾಗಿ ಕಲಹವಾಡುವ ನಾವು ಬಾಹ್ಯ ಜಗತ್ತಿನಲ್ಲಾಗುವ ಪರಿವರ್ತನೆಯ ಬಗ್ಗೆ ಕಿಂಚಿತ್ತೂ ಚಿಂತಿಸುತ್ತಿಲ್ಲ.ನಮ್ಮ ಮಾತು ಮೌನದಿಂದಾಗುವ ಅದೆಷ್ಟೋ ರದ್ಧಾಂತಗಳೆಗೆ ಪರೋಕ್ಷವಾಗಿ ನಾವೇ ಕಾರಣರಾಗುತ್ತಿದ್ದೇವೆ. ತಾಂತ್ರಿಕ ಜಗತ್ತು ಹೇಳಿಕೊಟ್ಟದ್ದೇ ಪ್ರಪಂಚವೆಂದು ನಂಬಿದಾಗ ಮಾನವೀಯತೆಯು ಯಾಂತ್ರಿಕತೆಯೊಳಗಿನ ನಿರಾಕಾರವಾದ ಒಂದು ಸೊಬಗು ಸಾಧನವಾಗುತ್ತದೆಯಷ್ಟೇ.

ಒಂದೆಡೆ ಸಣ್ಣ ಮಕ್ಕಳು ಬ್ಲೂವೇಲ್, ಮೊಮೊಗಳಂತಹ ಅಪಾಯಕಾರಿಯಾದ ಆಟಗಳನ್ನಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳು ಅದರದೇ ಆದ ಮೋಡಿಯಲ್ಲಿ ಜನರ ನಿದ್ದೆಗೆಡಿಸಿದೆ. ದಿನಪೂರ್ತಿ ರಜೆ ಇದ್ದರೂ ಇಂಟರ್ನೆಟ್ ನಲ್ಲಿ ಕಳೆಯುವ ಅದೆಷ್ಟೋ ಯುವಕದ್ದಾರೆ.ಅವರಿಗೆ ತಮ್ಮ ಸುತ್ತಮುತ್ತಲಿನ ಕುರಿತು ಗೊಡವೆಯೇ ಇರೋದಿಲ್ಲ. ಎಲ್ಲಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕೆನ್ನುವ ಸಾಮಾನ್ಯ ಜ್ಞಾನವೂ ಇರುವುದಿಲ್ಲ‌.
ವಾಟ್ಸಾಪ್,ಫೇಸ್ ಬುಕ್ ಒಂದಕ್ಕೊಂದು ಪೈಪೋಟಿ ನೀಡಿ ನೆಟ್ಟಿಗರನ್ನು ಆಕರ್ಷಿಸುವ ಮೂಲಕ ಖ್ಯಾತಿ ಪಡೆದಿದೆ. ಸಿಮ್ ಕಂಪೆನಿಗಳ ವಿಷಯಗಳನ್ನು ಹೇಳಬೇಕಿಲ್ಲ ತಾನೆ. ಇಂದು ದೇಶದ ಜನಸಂಖ್ಯೆಯ ಬಹು ಭಾಗವೂ ಈ ವಿಷಯದಲ್ಲಿ ಮುಂದಿದೆ.ಮುಸುರೆ ತಿಕ್ಕುವವರಿಂದ ಹಿಡಿದು ಮ್ಯಾನೇಜರುಗಳ ವರೆಗೂ ಅಂತರ್ಜಾಲದ ಸುಳಿಯಲ್ಲಿ ಸಿಲುಕಿ ನರಳುತ್ತಿರುವವರಿದ್ದಾರೆ.

ಏನೇ ಇರಲಿ,ಇವೆಲ್ಲವೂ ಎಷ್ಟು ಪ್ರಯೋಜನಕಾರಿಯೋ ಅದಕ್ಕಿಂತ ಹೆಚ್ಚಾಗಿ ಉಪದ್ರವಕಾರಿಯಾಗಿದೆ ಅನ್ನೋದನ್ನ ಮಾತ್ರ ಅಲ್ಲಗಳೆಯಲಾಗದು.
ವಾಟ್ಸಾಪ್,ಫೇಸ್ ಬುಕ್,ಟ್ವಿಟ್ಟರ್ ಗಳಂತೆ ಹಲವು ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದಿದ್ದರೂ ಒಂದು ಸೀಮಿತ ಸಮುದಾಯದ ಮೇಲೆ ಮಾತ್ರ ಅದರ ಪರಿಣಾಮವು ಎದ್ದು ಕಾಣುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಸಂಗೀತಮಯ ,ಸ್ಪೋಟ್ ಡಬ್ಬಿಂಗ್ ಅಪ್ಲಿಕೇಶನ್‌ಗಳು ಮಾತ್ರ ಇದಕ್ಕಿಂತ ಭಿನ್ನವೆನಿಸುತ್ತದೆ.

ಅವುಗಳ ಪೈಕಿ ಇನ್ಸ್ಟ್ರಾಗ್ರಾಮ್ ಮೊದಲಿಗ.ನಂತರ ಡಬ್ಸ್ ಸ್ಮಾಶ್ ,ಮ್ಯೂಸಿಕಲಿ ಆಗಿ ಇದೀಗ ಟಿಕ್ ಟಾಕ್ ಸರದಿ. ಏತನ್ಮಧ್ಯೆ ಹಲವು ಅಪ್ಲಿಕೇಶನ್ ಹೊರಬಂದರೂ ಜನರು ಪ್ಲೇ ಸ್ಟೋರ್ನಿಂದಲೇ ಹಿಂತಿರುಗಿಸಿದರು.
ಇಂತಹ ಆಪ್ಗಳು ಎಲ್ಲರ ಮನೆ ಮಾತಾಗಿದ್ದು ಕವನ,ಹಾಡು,ನಿನೆಮಾ ಡೈಲಾಗುಗಳು,ಹಿನ್ನಲೆ ಗಾಯನ ಇಂತಹ ಹಲವು ಪ್ರಕಾರಗಳನ್ನು ಒಳಗೊಂಡಿದೆ .ಇಲ್ಲಿ ಬಳಕೆದಾರನು ತನ್ನ ಅಭಿವ್ಯಕ್ತಿಯನುಸಾರ ಬೇಕಾದ ಸಂಗೀತ ,ಡೈಲಾಗುಗಳನ್ನು ಬಳಸಬಹುದು.ಡಬ್ ಮಾಡಬಹುದು.ಮದ್ರಾಸ್ ಹೈಕೋರ್ಟ್ ಕೆಲವು ದಿನಗಳ ಹಿಂದೆಯಷ್ಟೇ ಟಿಕ್ ಟಾಕ್ ನಿಷೇಧಿಸಲಾಗಿದೆ ಅನ್ನುವ ತೀರ್ಪು ನೀಡಿತ್ತು. ಈ ನಡೆಯನ್ನು ಎಲ್ಲಾ ಕಡೆಯಿಂದಲೂ ವಿಚಾರವಾದಿಗಳು ಸೈ ಅಂದಿದ್ದರು.ಟಿಕ್ ಟಾಕ್ ತಾಣವನ್ನು ‌ಜನರು, ಅದರಲ್ಲೂ ಹೆಚ್ಚಿನ ಹುಡುಗಿಯರು ಅಶ್ಲೀಲ ಪ್ರದರ್ಶನಕ್ಕಾಗಿ ಬಳಸುತ್ತಿದ್ದಾರೆ ಎಂಬುವುದಾಗಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನಲೆಯಲ್ಲಿ ಮದ್ರಾಸ್ ಹೈಕೋರ್ಟ್ ಸ್ಪಷ್ಟ ನಿಲುವು ಕೈಗೊಂಡರೂ ನಂತರ ಅದನ್ನು ಹಿಂಪಡೆಯಲಾಯಿತು. ಹೀಗೇ ಒಂದು ಜಾಲತಾಣದಿಂದಾಗಿ ಲಜ್ಜಾಹೀನ ಸಂಸ್ಕೃತಿಯೊಂದು ಮರುಹುಟ್ಟು ಪಡೆದಂತಾಗಿದೆ. ಈ ವಿಚಾರವಾಗಿ ಎಲ್ಲರನ್ನೂ ದೂಷಿಸುವಂತಿಲ್ಲ. ಒಂದು ನಿರ್ದಿಷ್ಟ ಪ್ರಮಾಣದ ಯುವ ಪೀಳಿಗೆಯೊಂದು ಜನನ ಮರಣವೆನ್ನದೆ ಟಿಕ್ ಟಾಕ್ ಅನ್ನುವ ಸ್ಥಿತಿಗೆ ತಲುಪಿದೆ. ಮಾನಸಿಕವಾಗಿ ಟಿಕ್ ಟಾಕ್ ಮೋಡಿಗೆ ಜನರು ಆಕರ್ಷಿತರಾಗಿ ಕೊನೆಗೆ ತಮ್ಮ ಶಿಕ್ಷಣ, ವೃತ್ತಿಯಲ್ಲಿನ ಜವಾಬ್ದಾರಿಯನ್ನು ಮರೆತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗುತ್ತಿದ್ದಾರೆ.

ಆದರೆ ಇಂದು ನಮ್ಮ ಮುಸ್ಲಿಂ ಸಮಾಜದ ಹುಡುಗಿಯರು ಈ ಅಪ್ಲಿಕೇಶನ್ ಬಳಸಿ ತಮ್ಮ ನಗ್ನತೆಯನ್ನು ಪ್ರದರ್ಶಿಸುತ್ತಿರುವುದು ಬಹಳ ಖೇದಕರವೂ,ಪೋಷಕರು ಗಮನಿಸಬೇಕಾಗ ಗೌರವವಿರುವ ವಿಷಯ.

ಎಲ್ಲಿ ನೋಡಿದರೂ ನಮ್ಮ ಹದಿಹರೆಯದ ಹುಡುಗಿಯರು ಸೇರಿ ಪ್ರತ್ಯಕ್ಷ ವ್ಯಭಿಚಾರಕ್ಕೆ ಒತ್ತು ನೀಡುವಂತಹ, ಪಡ್ಡೆ ಹುಡುಗರ ಕಾಮ ಕೆರಳಿಸುವಂತಹ ವೀಡಿಯೋಗಳನ್ನು ಹರಿಯ ಬಿಡುತ್ತಿದ್ದಾರೆ.ನಮ್ಮ ಮನೆಯಲ್ಲೇ ಕುಳಿತು ನಮ್ಮ ಹೆಣ್ಮಕ್ಕಳು ಈ ರೀತಿ ಪಂಚೇದ್ರಿಯಗಳ ವ್ಯಭಿಚಾರಕ್ಕೆ ಅನುವು ಮಾಡಿಕೊಡುವುದಾದರೆ ಕೊನೆಗೊಮ್ಮೆ ಅನಾಹುತವು ನಮ್ಮ ಮನೆ ಬಾಗಿಲಿಗೆ ಬಂದೆರಗುತ್ತದೆ ಖಂಡಿತ.

ಮುಸ್ಲಿಂ ಹೆಣ್ಮಕ್ಕಳು ಕಲಿಯುವ ಕಾಲೇಜುಗಳು,ವಸತಿ ಶಾಲೆಗಳಲ್ಲಿ ವಾಸ ಮಾಡಲು ಅನುಮತಿ ನೀಡುವ ತಂದೆ ತಾಯಿಯರು,ತಮ್ಮ ಮಕ್ಕಳ ಮೇಲೆ ಧಾರ್ಮಿಕ ಚೌಕಟ್ಟಿನ ಆಧಾರದಲ್ಲಿ ನಿಗಾ ವಹಿಸುದಾದರೆ ಮಾತ್ರ ಭವಿಷ್ಯದಲ್ಲಿ ಉಂಟಾಗುವ ಮಾನ ಹಾನಿಯನ್ನು ಇಲ್ಲವಾಗಿಸಬಹುದು. ಶಾಪಿಂಗ್ ಮಾಲ್ ಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ. ನಮ್ಮ ಮನೆಯಲ್ಲಿ ಸಾಂಪ್ರದಾಯಿಕ ಬುರ್ಖಾ ಧರಿಸಿ ಓಡಾಡುತ್ತಿದ್ದ ಮಕ್ಕಳು ಕಾಲೇಜ್ ಹಾಸ್ಟೆಲ್ ಸೇರಿದಂದಿನಿಂದ ಫ್ಯಾಷನ್ ಬುರ್ಖಾದೆಡೆಗೆ ಸಾಗುತ್ತಾರೆ.ಅದರಲ್ಲೂ ದೇಹಾಂಗಗಳ ಸ್ಪಷ್ಟ ಪ್ರದರ್ಶನ..!
ನಿಜಕ್ಕೂ ಅಸಹನೀಯ…ಖೇದಕರ..ನಾವಿದೆಲ್ಲವನ್ನು ಕಂಡೂ ಕಾಣದಂತೆ ನಟಿಸುತ್ತಿದ್ದೇವೆ…ಈ ಕಾರಣದಿಂದಲೇ ಬುರ್ಖಾ ಅನ್ನೋದು ಇತ್ತೀಚೆಗೆ ವಿವಾದದ ಕೇಂದ್ರ ಬಿಂದು ಎನಿಸಿರುವುದು. ಬುರ್ಖಾವನ್ನು ನಮ್ಮ ಹೆಣ್ಮಕ್ಕಳು ದುರುಪಯೋಗ ಮಾಡುವುದರಿಂದ ಅದು ತಾನಾಗಿಯೇ ಸಮಾಜದಲ್ಲಿ ಇತರರ ಕೆಂಗಣ್ಣಿಗೆ ಗುರಿಯಾಗಿಸುತ್ತದೆ.

ಇದನ್ನು ಇಲ್ಲಿ ಹೇಳುವಾಗ “ನರಕದಿ ನಾ ಕಂಡಿರೋದು ಅತಿ ಹೆಚ್ಚು ಸ್ತ್ರೀಯರನ್ನಾಗಿದೆ” ಎಂಬ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಮಾತು ನೆನಪಾಗುತ್ತಿದೆ..

ಲೌಕಿಕ ಶಿಕ್ಷಣ ನೀಡುವ ವಿಚಾರದಲ್ಲಿ ಹೇಳುವುದಾದರೆ ಧಾರ್ಮಿಕತೆಯ ಬಗ್ಗೆ ಅರಿವಿಲ್ಲದ, ಅಂತರಂಗ ಬಹಿರಂಗ ಶುದ್ದಿಯಿಲ್ಲದ ಹೆಣ್ಮಕ್ಕಳು ಲೌಕಿಕ ಶಿಕ್ಷಣ ಪಡೆಯೋದ್ರಿಂದ ದುನಿಯಾದಲ್ಲಿ ಸಂಪಾದಿಸಬಹುದು, ಕೀರ್ತಿ ಗಳಿಸಬಹುದೇ ವಿನಃ ಪರಲೋಕದಲ್ಲಿ ಅಲ್ಲಾಹನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅದರಲ್ಲೂ ಹೆಚ್ಚಿನವರು ನಗರಗಳಲ್ಲಿ ಖಾಸಗಿ ಬದುಕು ಕಟ್ಟಿಕೊಂಡವರು. ಅವರಿಗೆ ಪ್ರಭಾಷಣ,ಧಾರ್ಮಿಕ ತರಗತಿ ತರಬೇತಿಗಳು ಇಂತಹುದೇನೂ ಅರಿವಿಗೆ ಬರುವುದಿಲ್ಲ‌.. ಬರೀ ಬೀಚ್,ಶಾಪಿಂಗ್ ಮಾಲ್ ಗಳು,ವರ್ಣ ರಂಜಿತ ಸಂಗೀತ ರಸಮಂಜರಿ ವೇದಿಕೆಗಳು ಇವೆಲ್ಲವುದಕ್ಕಿಂತಲೂ ಆಕರ್ಷಕವಾಗಿರುತ್ತೆ. ಈ ಬಗ್ಗೆ ಟೀಕಿಸುವುದಲ್ಲದೆ ಅವರನ್ನು ಸರಿದಾರಿಗೆ ತರುವ ಪ್ರಯತ್ನ ಯಾವ ಸಂಘಟನೆಗಳಿಂದಲೂ ಆಗುತ್ತಿಲ್ಲ. ಬುರ್ಖಾ ಹಾಕಿ ಸಿನೆಮಾ ಥಿಯೇಟರ್ ಪ್ರವೇಶಿಸುವ ಅದೆಷ್ಟೋ ಮುಸ್ಲಿಂ ಸ್ತ್ರೀಯರು ನಮ್ಮ ಮಂಗಳೂರಿನಲ್ಲೇ ಇದ್ದಾರೆ. ಟಿಕ್ ಟಾಕ್ ,ಮ್ಯೂಸಿಕಲಿ ಆಪ್ಗಳಲ್ಲಿ ಅನ್ಯರೊಂದಿಗೆ ಸಲುಗೆ ಬೆಳೆಸಿ ಸಲ್ಲಾಪವಾಡಿ ಸಿಕ್ಕಿ ಬಿದ್ದ ಸಾವಿರಾರು ಘಟನೆಗಳು ಹಳೆಯದಾಗಿವೆ. ಅದರಲ್ಲೂ ಕೇರಳೀಯ ಮತ್ತು ಮಂಗಳೂರು ಬ್ಯಾರಿಗಳ ಹೆಣ್ಮಕ್ಕಳ ನಡುವೆ ಪೈಪೋಟಿ ನಡೆಯುತ್ತೆ. ಮಂಗಳೂರು ನಗರದೆಲ್ಲಡೆ ಇರುವ ಶಾಲಾ ಕಾಲೇಜುಗಳ ಆವರಣಕ್ಕೊಮ್ಮೆ ಇಣುಕಿ ನೋಡಿ. ನಮ್ಮ ಸಮುದಾಯದ ಹೆಣ್ಮಕ್ಕಳ ದುಸ್ಥಿತಿ ಅರಿವಾಗಬಹುದು. ಅಂದ ಮಾತ್ರಕ್ಕೆ ಇದು ಬರಿ ನಗರದಲ್ಲಿ ಮಾತ್ರ ನಡೆಯೋದು ಅಂತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲೂ ಈ ಬಗ್ಗೆ ಅದೆಷ್ಟೋ ದೂರುಗಳಿವೆ. ಟಿಕ್ ಟಾಕ್ ತೆರೆದರೆ ಹೆಚ್ಚಿಗೆ ಸ್ಕಾರ್ಪ್ ಹಾಕಿದ ಹೆಣ್ಮಕ್ಕಳು ಕಾಣುವಾಗ ಬಹಳ ಬೇಸರವೆನಿಸುತ್ತದೆ.
ಕೊನೆಗೊಂದು ಮಾತು ಈ ವಿಚಾರಗಳು ಬರೀ ಸೂಚನೆಗಳು ಮಾತ್ರ. ಮುಂದೊಂದು ದಿನ ನಮ್ಮ ಮಕ್ಕಳನ್ನು ನಮ್ಮ ಹತೋಟಿಯಲ್ಲಿಡಲು ಸಾಧ್ಯವಾಗದೆ, ಪರಿಸ್ಠಿತಿ ಕೈ ಬಿಟ್ಟು ಹೋಗುವಾಗ ನಮಗದರ ಅರಿವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಯರ ಸಮ್ಮತಿಯಿಂದಲೇ ಹಲವು ಪ್ರಣಯ ವಿವಾಹಗಳು ನೆರವೇರುತ್ತವೆ. ಅದು ಖಂಡಿತ ಬರಕತ್ತಿಲ್ಲದ ಕುಟುಂಬವನ್ನು ಸೃಷ್ಟಿ ಮಾಡುತ್ತದೆ.

ಪ್ರೇಮ ವಿವಾಹಕ್ಕೆ ಅವಕಾಶ ಎಂದಿಗೂ ಇಸ್ಲಾಂ ನೀಡಿಲ್ಲ. ವಿವಾಹವಾಗು ,ನಂತರ ಜೀವಕ್ಕಿಂತಲೂ ಒಡತಿಯನ್ನು ಪ್ರೀತಿಸು.ಅದರಲ್ಲಿ ಅಲ್ಲಾಹನ ಪ್ರೀತಿಯಿದೆ‌‌, ಅನುಗ್ರಹ ವಿದೆ. ಇದೆಲ್ಲರೂ ಅರಿತಿರಬೇಕು. ಕಾಲಾತೀತವಾಗಿ ನಾವು ಮನದಟ್ಟು ಮಾಡಬೇಕಾದ ವಿಚಾರಗಳಾಗಿವೆ ಇದು. ನಾವು ಮುಸ್ಲಿಮರಾಗಿರೋದೆ ಬಹು ದೊಡ್ಡ ಅನುಗ್ರಹವಾಗಿದೆ. ಆ ನಂತರ ಅದಕ್ಕಾಗಿ ಸ್ತುತಿಸಿ ಜೀವನ ನಡೆಸುವುದಲ್ಲದೆ ಹೀಗೇ ಸಮಯವನ್ನು ಪೋಲು ಮಾಡುವುದು ಧರ್ಮದೊಂದಿಗೆ ಮಾಡುವ ಬಹುದೊಡ್ದ ಅಪರಾಧ. ಮಗಳು ಐಟಿ ,ಬಿಟಿ, ನರ್ಸಿಂಗ್ ಕಲಿಯುತ್ತಾಳೆಂದು ದೂರದೂರಿಗೆ ಅಟ್ಟಿ ಬಿಡುವ ಪೋಷಕರೇ ಗಮನಿಸಿ ಇನ್ನಾದರೂ ಜಾಗೃತೆ ವಹಿಸಿ ಮುಂದುವರೆಯಿರಿ..
ಲೌಕಿಕ ಶಿಕ್ಷಣ ವೆನ್ನುವುದು ಅಲ್ಲಾಹನ ಸ್ವರ್ಗಕ್ಕೆ ತಲುಪಲು ಕಡ್ಡಾಯವೇನಲ್ಲ. ಆದರೆ ದೀನೀ ಜ್ಞಾನ ಕಡ್ಡಾಯ. ಅದಿಲ್ಲದಿದ್ದರೆ ನರ್ಸಿಂಗ್ ಪ್ರಮಾಣಪತ್ರ ಖಬರಿನಲ್ಲೂ ನಾಳೆ ಮಹ್ಶರಾದಲ್ಲೂ ಉಪಕಾರಪ್ರದವಲ್ಲ. ಚಿಂತಿಸಿರಿ .ಚಿಂತಿಸುವವರಾಗಿದ್ದರೆ, ಚಿಂತಿಸುವ ಮನ ನಿಮ್ಮಲ್ಲಿದ್ದರೆ..ನೀವು ಉತ್ತಮ ಪೋಷಕರಾಗಿದ್ದರೆ..ಉತ್ತಮ ಗುಣನಡತೆ ಹೊಂದಿರುವ ಮಕ್ಕಳಾಗಿದ್ದರೆ…

ಆಧುನಿಕತೆಯು ನಮ್ಮನ್ನು ಸೆಳೆಯುತ್ತಲೇ ಇರುತ್ತವೆ. ದಿನಕಳೆದಂತೆ ಹೊಸ ಅಪ್ಲಿಕೇಶನ್ ಗಳು ಮತ್ತು ಅದರ ಪರಿಷ್ಕೃತ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುತ್ತಲೇ ಇರುತ್ತವೆ. ಆದರೆ ಧರ್ಮ ಮಾತ್ರ ಆಧುನಿಕತೆಯೊಂದಿಗೆ ಎಂದಿಗೂ ಹೆಜ್ಜೆ ಹಾಕಲ್ಲ. ಧಾರ್ಮಿಕ ಸಿದ್ದಾಂತಗಳಲ್ಲಿ ಎಂದಿಗೂ ಕಿಂಚಿತ್ತು ಬದಲಾವಣೆಯಾಗಲ್ಲ.ನಾವು ಎಚ್ಚೆತ್ತುಕೊಂಡು ಅವುಗಳನ್ನು ಅಳವಡಿಸಿ, ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಉತ್ತಮ ಸಮುದಾಯದಲ್ಲಿ ಸೇರಬೇಕಿದೆ.ಸೃಷ್ಟಿಕರ್ತನು ಅನುಗ್ರಹಿಸಲಿ ಆಮೀನ್..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...