ಉಷಾಕಿರಣ ಬೀರಿ ಊರ ಬೆಳಗಿಹ
ಜ್ಞಾನದೈಸಿರಿಯು
ದಶಮಾನಗಳಂಚಿಗೂ ದಿಟ್ಟೆದೆಯಿಂದ
ಭೋಧನಾನಿರತ ಆ ಹರಿವ-
ಅರಿವಿನ ಪ್ರವಾಹವು ದರಹಾಸವ ಚೆಲ್ಲಿ
ಇಹದಾಚೆಗೆ ಪಯಣವಿತ್ತ ಪರಾರ್ಧ್ಯ ಪಾರಂಗತರು
ಅವರು #ಪಯ್ಯಕ್ಕಿಉಸ್ತಾದ್..!!

ಓ ಭುವಿಯೇ...ಬಿಚ್ಚಿಡು ನೀ
ನಿನ್ನೊಡಲಲಿ ಬಚ್ಚಿಟ್ಟ
ಜ್ಞಾನ ಸರಣಿಯ ಅಭಿಜ್ಞರ ಅನುಬಂಧವ...
ಅದೇಗೆ ಸಾಧಿಸಿತೆಂದೇ ಅಚ್ಚರಿಯು ಎನಗೆ..!
ಅನುಪಮ ದಶಕಗಳಸವೆಸಿದ ಆ
ಕನತ್ ಚಿಲುಮೆಯ ಸಾಗರವ
ಆರಡಿಯೊಳಗೆ ತುಂಬಲು ನಿನಗೆ..!
ಪೃಥ್ವಿಯೇ ನಿಜಕ್ಕೂ ಭಾಗ್ಯಶಾಲಿ ನೀ
ನಿನ್ನೆದೆಯ ಅಪ್ಪಿ ಚಿರನಿದ್ರೆಗೆ ಜಾರಿದ
ಜಲಜಲಿಸುವ ಆ ವಿದ್ವತ್ ಕನಿ..!
ಇಳೆಯ ರೋಧನವು
ಮುಗಿಲು ಮುಟ್ಟಿದಾಕ್ಷಣ..
ವರ್ಷಿತ ಗಗನದಿಂದ ಅಶ್ರುಧಾರೆಯಂತೆ
ತಣ್ಬನಿಗಳು ಜಾರಿ
ಮೆಲ್ಲಗೆ ಭುವಿಯ ಸೇರಲು...
ವಿರಹವ ತಾಳಲಾರದೆ
ಶೋಕದಿ ಮರುಗಿದ
ಮನುಕುಲದ ಮನವು
ಮೆಲ್ಲನೆ ಮಂತ್ರಿಸಿತು
ಅವರಿನ್ನೂ ಬದುಕಿರುತ್ತಿದ್ದರೆ..?!!
ಕಂಬನಿ ಮಿಡಿದ ಹೃದಯಗಳೆಷ್ಟು ಕೇಳು
ಆ ಪರಂಜ್ಯೋತಿಯ ಕಣ್ಣಾರೆ ದರ್ಶಿಸಲು
ಹಾತೊರೆಯುತಿಹ ಮನದಾಳಗಳದೆಷ್ಟು...!
ಚಿನುಮಯ ಸಾಮ್ರಾಜ್ಯವ ಕಟ್ಟಿ
ಜ್ಞಾನದ ತುತ್ತತುದಿ ಏರಿದ ಪುಂಗವರ
ಸ್ಮರಣೆಯ ಮೆಲುಕು ಹಾಕುವರೆಷ್ಟು.....!!
ನಡೆದರು ನೋಟದಲಿ
ಕಣ್ಣಳತೆಯಿಟ್ಟು ..
ಕಣ್ದೊಳಲು ಸಾಗಿಲ್ಲ ಅವರ ಬಿಟ್ಟು..
ಇತಿಹಾಸ ಬರೆದಿತು
ಆರವವಿಲ್ಲ-ಆ ಜೀವನವನು ಕಂಡು
ಇನ್ಯಾರು ಹೋಲುವರು
ಈ ನಿಸ್ತುಲ ದ್ಯುತಿಗೆ ಸಮಾನರು..!?!
ಆಧ್ಯಾತ್ಮಿಕ ಪಥದ ಮಾರ್ಗದರ್ಶಕ
ನನ್ನ ಮನದಾಳದ ಮರ್ಹೂಮ್
ಅವರಿಗೆ ಅವರೇ ಸಾಟಿ...!!
-ನಿಝಾಮ್ ಅನ್ಸಾರಿ
ಜ್ಞಾನದೈಸಿರಿಯು
ದಶಮಾನಗಳಂಚಿಗೂ ದಿಟ್ಟೆದೆಯಿಂದ
ಭೋಧನಾನಿರತ ಆ ಹರಿವ-
ಅರಿವಿನ ಪ್ರವಾಹವು ದರಹಾಸವ ಚೆಲ್ಲಿ
ಇಹದಾಚೆಗೆ ಪಯಣವಿತ್ತ ಪರಾರ್ಧ್ಯ ಪಾರಂಗತರು
ಅವರು #ಪಯ್ಯಕ್ಕಿಉಸ್ತಾದ್..!!

ಓ ಭುವಿಯೇ...ಬಿಚ್ಚಿಡು ನೀ
ನಿನ್ನೊಡಲಲಿ ಬಚ್ಚಿಟ್ಟ
ಜ್ಞಾನ ಸರಣಿಯ ಅಭಿಜ್ಞರ ಅನುಬಂಧವ...
ಅದೇಗೆ ಸಾಧಿಸಿತೆಂದೇ ಅಚ್ಚರಿಯು ಎನಗೆ..!
ಅನುಪಮ ದಶಕಗಳಸವೆಸಿದ ಆ
ಕನತ್ ಚಿಲುಮೆಯ ಸಾಗರವ
ಆರಡಿಯೊಳಗೆ ತುಂಬಲು ನಿನಗೆ..!
ಪೃಥ್ವಿಯೇ ನಿಜಕ್ಕೂ ಭಾಗ್ಯಶಾಲಿ ನೀ
ನಿನ್ನೆದೆಯ ಅಪ್ಪಿ ಚಿರನಿದ್ರೆಗೆ ಜಾರಿದ
ಜಲಜಲಿಸುವ ಆ ವಿದ್ವತ್ ಕನಿ..!
ಇಳೆಯ ರೋಧನವು
ಮುಗಿಲು ಮುಟ್ಟಿದಾಕ್ಷಣ..
ವರ್ಷಿತ ಗಗನದಿಂದ ಅಶ್ರುಧಾರೆಯಂತೆ
ತಣ್ಬನಿಗಳು ಜಾರಿ
ಮೆಲ್ಲಗೆ ಭುವಿಯ ಸೇರಲು...
ವಿರಹವ ತಾಳಲಾರದೆ
ಶೋಕದಿ ಮರುಗಿದ
ಮನುಕುಲದ ಮನವು
ಮೆಲ್ಲನೆ ಮಂತ್ರಿಸಿತು
ಅವರಿನ್ನೂ ಬದುಕಿರುತ್ತಿದ್ದರೆ..?!!
ಕಂಬನಿ ಮಿಡಿದ ಹೃದಯಗಳೆಷ್ಟು ಕೇಳು
ಆ ಪರಂಜ್ಯೋತಿಯ ಕಣ್ಣಾರೆ ದರ್ಶಿಸಲು
ಹಾತೊರೆಯುತಿಹ ಮನದಾಳಗಳದೆಷ್ಟು...!
ಚಿನುಮಯ ಸಾಮ್ರಾಜ್ಯವ ಕಟ್ಟಿ
ಜ್ಞಾನದ ತುತ್ತತುದಿ ಏರಿದ ಪುಂಗವರ
ಸ್ಮರಣೆಯ ಮೆಲುಕು ಹಾಕುವರೆಷ್ಟು.....!!
ನಡೆದರು ನೋಟದಲಿ
ಕಣ್ಣಳತೆಯಿಟ್ಟು ..
ಕಣ್ದೊಳಲು ಸಾಗಿಲ್ಲ ಅವರ ಬಿಟ್ಟು..
ಇತಿಹಾಸ ಬರೆದಿತು
ಆರವವಿಲ್ಲ-ಆ ಜೀವನವನು ಕಂಡು
ಇನ್ಯಾರು ಹೋಲುವರು
ಈ ನಿಸ್ತುಲ ದ್ಯುತಿಗೆ ಸಮಾನರು..!?!
ಆಧ್ಯಾತ್ಮಿಕ ಪಥದ ಮಾರ್ಗದರ್ಶಕ
ನನ್ನ ಮನದಾಳದ ಮರ್ಹೂಮ್
ಅವರಿಗೆ ಅವರೇ ಸಾಟಿ...!!
-ನಿಝಾಮ್ ಅನ್ಸಾರಿ
ಕಾಮೆಂಟ್ಗಳು