ವಿಷಯಕ್ಕೆ ಹೋಗಿ

ತುಂಬಿದ ಕೊಡ ತುಳುಕುವುದಿಲ್ಲ...

ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಶೈಖುನಾ ಪಯ್ಯಕ್ಕಿ ಉಸ್ತಾದರ ಕುರಿತು ಹಾಗೇ ಹೇಳಬೇಕಷ್ಟೇ. ಪಾಂಡಿತ್ಯದ ಸಮಾನತೆಯಿಲ್ಲದ ಶಿಖರದಿ ವಿರಾಜಮಾನ ಸುಲ್ತಾನರಾಗಿ ವಿಹರಿಸುವಾಗಲೂ,ಸಂಪದ್ಭರಿತ ಪಳ್ಳಿಕ್ಕೆರೆಯ ಖಾಝಿ ಸ್ಥಾನವನ್ನು ವಹಿಸುವಾಗಲೂ,ಪೈವಳಿಕೆಯಲ್ಲಿ ತನ್ನ ಕನಸಗೂಸು 'ಅನ್ಸಾರಿಯಾ' ಕವಲೊಡೆದು ಹೆಮ್ಮರವಾಗಿ ಬೆಳೆದು ಫಸಲು ಬಿಡಲು ಪ್ರಾರಂಭಿಸಿದ ಆ ಸುವರ್ಣ ನಿಮಿಷಗಳಲ್ಲಿ ವಿಧ್ಯಾರ್ಥಿಗಳು ಪ್ರಥಮವಾಗಿ ಸನದು ಸ್ವೀಕರಿಸಿದ ವೇಳೆಯೂ ವಿನಯಾನ್ವಿತರ ಆ ಮಂದಹಾಸಲ್ಲಿ ಕಿಂಚಿತ್ತೂ ಬದಲಾವಣೆಯಿಲ್ಲ.ತಾಳ್ಮೆಯ ಮೂಲಕ ಉಸ್ತಾದರು ಮತ್ತೆ ಮತ್ತೆ ಅಧ್ಬುತವೆನಿಸುತ್ತಿದ್ದಾರೆ.*



*ವಿಲಾಯತ್ತಿನ ಉನ್ನತ ಗಿರಿಸಾಲುಗಳನ್ನೇರಿದ ಪಿತಾಮಹರ ಸ್ಮರಣೆಗಳು ಪಯ್ಯಕ್ಕಿಯ ಚರಿತ್ರೆಯ ಹಾಳೆಗಳಲ್ಲಿ ಇಂದಿಗೂ ಜಲಜಲಿಸುವ ಸ್ಮರಣೆಯಾಗಿ ಉಳಿದಿದೆ. ಅವರನ್ನಾಗಿತ್ತು ಈ ನಾಡು ಪ್ರಥಮವಾಗಿ ಪಯ್ಯಕ್ಕಿ ಉಸ್ತಾದ್ ಎಂದು ಕರೆದಿದ್ದು.ಅನ್ಯ ಸ್ತ್ರೀಯರ ನೆರಳು ಕೂಡಾ ತನ್ನ ಪುರುಷಾಯುಸ್ಸಿನಲ್ಲಿ ಕಾಣಬಾರದೆಂದು ಆಗ್ರಹಿಸಿದ ಆ ಅತಿ ಸೂಕ್ಷ್ಮ ಜೀವನದ ಬಗ್ಗೆ ಅಲ್ಪ ಚಿಂತಿಸಿ ನೋಡಿ..ಅಹ್ಲುಬೈತ್ ಹಿಂದೆಯೇ ಕಾಲಿರಿಸಿದ ಈ ಮಣ್ಣಲ್ಲಿ ಪೊನ್ನಾನಿ ದರ್ಸೀ ಪಾರಂಪರ್ಯದ ಬೀಜ ಬಿತ್ತಿ ಬೆಳೆಸಿವರು ಮರ್ಹೂಮ್ ಪಯ್ಯಕ್ಕಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನ.ಮ ಆಗಿದ್ದರು.ಕಳೆದ ವರ್ಷದ ಉರೂಸಿನಲ್ಲ್ಲಿ ಸೌಹಾರ್ದ ಸಂಗಮದ ವೇದಿಕೆಯಲ್ಲಿ ಶಾಲಾ ಅಧ್ಯಾಪಕರೊಬ್ಬರು ಈ ರೀತಿ ಹೇಳಿದ್ದರು"ಇವರು ನಿಮ್ಮ ಮಾತ್ರವಲ್ಲ ನಮ್ಮ ಪಯ್ಯಕ್ಕಿ ಉಸ್ತಾದರೂ ಕೂಡಾ ಎಂದು.ಅವರ ಆತ್ಮೀಯ ವಾದ ಸಾನಿಧ್ಯ ಇಂದಿಗೂ ಪೈವಳಿಕೆಯ ವಾಯುವಿನಲ್ಲಿ ನಮಗೆ ಅನುಭವಿಸಬಹುದು.ಪಯ್ಯಕ್ಕಿ ಮಸೀದಿಯ ಹತ್ತಿರದಲ್ಲೇ ಇದೆ ಆ ಮಹಾನುಭಾವ ರ ಖಬರ್ ಶರೀಫ್.!*

*ಚಂದ್ರವರ್ಷ ಗಣನೆಯಲ್ಲಿ ಪೈವಳಿಕೆ ದರ್ಸ್ ಶತಮಾನವೊಂದನ್ನು ಪೂರೈಸಿದೆ.ಕಲಿಯಲು ವಿಧ್ಯಾರ್ಥಿಗಳು ಸಿಗುವರೋ ಎಂದು ಆಶಂಕೆ ವ್ಯಕ್ತಪಡಿಸಿದ ಪಯ್ಯಕ್ಕಿ ಉಸ್ತಾದರೊಂದಿಗೆ ಬಾಪ್ಪ ಹೇಳಿದರು"30 ರಿಂದ 40 ರ ಮಧ್ಯೆ ವಿಧ್ಯಾರ್ಥಿಗಳಿರುವರೆಂದು"ಇಂದಿಗೂ 35 ಮಕ್ಕಳು ವಿಧ್ಯಾರ್ಜನೆಗೈಯ್ಯುತ್ತಿದ್ದಾರೆ 'ಅಸರ್' ಇರುವ ನಾಲಗೆಯಿಂದ ಹೇಳಿದ ಮಾತು ಫಲಬೀರದೇ ಹೋಗಲಿಲ್ಲ.'ಹೋಗಬಹುದು' ಎಂದು ಹೇಳುವುದಲ್ಲದೆ ಉಸ್ತಾದ್ ಯಾರನ್ನೂ ಬಲವಂತವಾಗಿ ನಿಲ್ಲಿಸಲು ತಯ್ಯಾರಿಲ್ಲ.ಸೌಕರ್ಯಗಳು ಕೂಡಾ ಪರಿಮಿತ.ಆದರೂ ಸಬ್ಖಿನಲ್ಲಿ ಉಸ್ತಾದರ ಪ್ರಾವೀಣ್ಯತೆಯನ್ನು ಮನಗಂಡು ಎಲ್ಲೆಲ್ಲಿಂದಲೋ ಮಕ್ಕಳು ನಿಶಬ್ಧರಾಗಿ ಈ ತೀರವ ತಲುಪುತ್ತಿದ್ದಾರೆ.ನಂದಿ ದಾರುಸ್ಸಲಾಮ್ ,ಪಟ್ಟಿಕ್ಕಾಡ್ ಮುಂತಾದೆಡೆಗಳಲ್ಲಿ ಬಿರುದುದಾರಿಗಳಾಗಿ ಹೊರಬಂದು ಸೇವಾರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.*

*ವಿಶುದ್ಧ ಹರಮ್ ಶರೀಫ್ ನಲ್ಲಾಗಿದೆ ಪಯ್ಯಕ್ಕಿ ಉಸ್ತಾದರು ಪಠಣ ಪೂರ್ತಿಗೊಳಿಸಿದ್ದೆಂದು ಹೆಚ್ಚಿನವರಿಗೂ ತಿಳಿದಿಲ್ಲ.ಈ ಮಧ್ಯೆ ಶಂಸುಲ್ ಉಲಮಾ ಅವಾರ್ಡ್ ಲಭಿಸಿದ ನಂತರವಾಗಿದೆ ಉಸ್ತಾದರು ಸಾಮಾನ್ಯರೆಡೆಯಲ್ಲಿ ಮಶ್ಹೂರ್ ಆಗಿದ್ದೂ ಕೂಡಾ.ವಿನಯ ಮಾತ್ರ ಅವರ ಜೀವನ ಶೈಲಿ. ಮತ ಲೌಕಿಕ ಸಮನ್ವಯ ಕಾಲೇಜ್ ಮತ್ತು ದರ್ಸ್ ನ್ನು ಒಂದೇ ಸೂರಿನಡಿಯಲ್ಲಿ ಕಳಂಕವಿಲ್ಲದೆ ಒಂದೇ ರೀತಿಯಲ್ಲಿ ಮುನ್ನಡೆಸುವ ವಿದ್ವಾಂಸರು ಉತ್ತರ ಮಲಬಾರಿನಲ್ಲಿ ಬೇರೆ ಇದ್ದಾರೆಯೇ ಎಂಬುದು ಸಂಶಯ.ಅರಸಿ ಬಂದ ಖಾಝಿ ಸ್ಥಾನದಿಂದ ಸರಿದು ನಿಲ್ಲಲು ಪ್ರಯತ್ನಿಸುವುದು ನಮಗೆ ಯೋಚಿಸಲೂ ಕೂಡಾ ಕಷ್ಟಕರ.*

*ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡಿದ ಕಾಲದಲ್ಲಿ ಪೈವಳಿಕೆ ಸಾದಾತ್ತುಗಳು ಪ್ರಾರಂಭಿಸಿದ ರಾತೀಬ್ ಗೂ ಕೂಡಾ ತುಂಬಾ ಪ್ರತ್ಯೇಕತೆಗಳಿವೆ.ಐದು ತಾಸುಗಳು ಬೇಕು ಮಜ್ಲಿಸ್ ಮುಗಿಯಬೇಕೆಂದರೆ.ಅದರಿಂದಾಗಿ ಸಾಂಕ್ರಾಮಿಕ ರೋಗಗಳ ಸರ್ವನಾಶವಾಯ್ತು.ಇಂದು ಪಯ್ಯಕ್ಕಿ ಉಸ್ತಾದರಲ್ಲಾಗಿದೆ ಪೈವಳಿಕೆ ಸಾದಾತ್ತುಗಳು ನಡೆಸುವ ರಾತೀಬ್ ನ ಉಸ್ತುವಾರಿ ವಹಿಸಿಕೊಟ್ಟದ್ದು.ಇಲ್ಲಿ ಹೇಳಲಿಚ್ಛಿಸಿದ್ದು ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅನ್ಸಾರಿಯಾ ದ ಅವಾ ಅಕಾಡೆಮಿ ಯ ಕುರಿತಾಗಿತ್ತು.ಆದರೆ ಧನ್ಯತೆಯ ಪಾರಂಪರ್ಯವನ್ನು ಪ್ರತಿಪಾದಿಸದೆ ಅದರತ್ತ ಪ್ರವೇಶಿಸಲಾಗಲ್ಲ.ದಶ ವರುಷಗಳ ಹಿಂದಿನ ಬಂಡೆಕಲ್ಲುಗಳ ಸಾಲುಗಳಿಂದು ಲೋಕೋತ್ತರ ಇಸ್ಲಾಮಿಕ್ ಶೈಕ್ಷಣಿಕ ಸಮುಚ್ಚಯವಾಗಿ ಬಿಟ್ಟಿದೆ.ಜನರನ್ನು ಆಕರ್ಷಿಸುವ ಮೂಲಕ ತನ್ನತ್ತ ಸೆಳೆಯುವ ಮ್ಯಾನೇಜ್ಮೆಂಟ್ ನೈಪುಣ್ಯತೆಯೋ ,ಪ್ರಮುಖರ ಬೆಂಬಲವಿಲ್ಲದಿದ್ದರೂ ಕೂಡಾ ಪಿ ಯು ಐ ಎ ಬೆಳೆಯುತ್ತಲಿದೆ.ಮದೀನಾ ಗಾರ್ಡನ್ ನಿಂದ ಅನ್ಸಾರಿ ಬಿರುದುದಾರಿಗಳಾಗಿ ಈ ವಿಧ್ವತ್ ಪ್ರತಿಭೆಗಳು ಹೊರಜಗತ್ತನ್ನು ತುಳಿಯುತ್ತಿರುವುದು ಸುಂದರ ನಾಳೆಗಳ ಸುನ್ನೀ ನೇತೃತ್ವದೆಡೆಗಾಗಿರಬಹುದು.ಇಂಶಾ ಅಲ್ಲಾಹ್..*

*ಭಾರವಿರುವ ಮುಂಡಾಸಿಗಿಂತ ಶ್ರೇಷ್ಠತೆ ಇರುವುದು ಸಾತ್ವಿಕ ಉಖ್ರವಿಗಳಾದ ಪಂಡಿತ ಜ್ಯೋತಿಗಳ ಪ್ರಾರ್ಥನಾನಿರತ ದೀಕ್ಷೆಯಲ್ಲಾಗಿದೆ.ಹಾಗಾದಲ್ಲಿ ಪಯ್ಯಕ್ಕಿಯ ವಿಧ್ಯಾರ್ಥಿಗಳು ಭಾಗ್ಯಶಾಲಿಗಳು.ಪೊನ್ನಾನಿ ಪಾರಂಪರಿಕ ಹಾದಿ ಒಂದೆಡೆ,ಜ್ಞಾನ ಸರಣಿಯಲ್ಲಿ ಪಳಗಿದ ಪಂಡಿತವ್ಯೂಹದ ಅಧಿಪತಿಯಾದ ಉಸ್ತಾದ್,ಪ್ರವಾದಿ ಕುಟುಂಬ ವಿಶ್ರಾಂತಿ ಪಡೆಯುವ ಮಣ್ಣು,ಮಹತ್ವ ಗಳ ಇಲ್ಲವಾಗಿಸುವ ನವ ಯುಗದ ಅಲಂಕಾರಗಳಿಗೆ ಇಲ್ಲಿ ಎಡೆಯಿಲ್ಲ.ಆತ್ಮೀಯವಾದ ಹೆಜ್ಜೆಗುರುತುಗಳಾಗಿವೆ ಪೈವಳಿಕೆ ಎಂಬ ಪ್ರವಿಶಾಲ ಪ್ರದೇಶಕ್ಕೆ ಜನರನ್ನು ತಲುಪಿಸುತ್ತಿರುವುದು.ಅಷ್ಟಕ್ಕೂ ಉದಾತ್ತ ವಾದ ಇತಿಹಾಸ ಶೃಂಖಲೆಯ ಕೊನೆಯ ಕೊಂಡಿಗೆ ಅಲ್ಲದಿದ್ದರೂ ಮಿತಿ ಮೀರಿ ನಡೆಯಲು ಸಾಧ್ಯವಿಲ್ಲವಲ್ಲವೇ..!*

✍🏻ಕನ್ನಡಕ್ಕೆ: ನಿಝಾಮ್ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...

ಇಂದಿನಿಂದ 'ಸಮಸ್ತ'ದ ಆನ್ ಲೈನ್ ತರಗತಿಗಳು ಆರಂಭ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ‌ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.  ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್‌ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ.  ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತ...

Payyakki Usthad Islamic Academy -Ansariya College of Islamic Science10th Anniversary & Convocation Program-#Photo Gallery......