ವಿಷಯಕ್ಕೆ ಹೋಗಿ

ತಿಳಿಯಲೇ ಬೇಕು ಈ ಕುಲುಕ್ಕಿ ಶರ್‍ಬತ್ತಿನ ಅಸಲಿಯತ್ತು..!!

download

ಸಿಹಿ ಪಾನೀಯಗಳೆಂದರೆ ಎಲ್ಲರಿಗೂ ಬಲು ಇಷ್ಟ.ಅದರಲ್ಲೂ ಸುಡು ಬೇಸಿಗೆಯಲ್ಲಂತೂ ತಂಪು ಪಾನೀಯಗಳ ಹವಾ ತುಂಬಾ ಜೋರಾಗೇ ಇರುತ್ತೆ. ದಣಿದು ಬಂದರಂತೂ ಇದನ್ನು ನೋಡಿದಾಕ್ಷಣ ಜನ ಅತ್ತ ಮುಗಿ ಬೀಳುತ್ತಾರೆ. ಕಾಲ ಬದಲಾದಂತೆಲ್ಲಾ ಜನರ ಅಭಿರುಚಿಯೂ ಬದಲಾಗಿರುತ್ತದೆ ಅನ್ನೋದಕ್ಕೆ ಈ ಕೇರಳದ ಕುಲುಕ್ಕಿ ಶರಬತ್ತೇ ಸಾಕ್ಷಿಯಾಗಿದೆ. ಈ ಬಾರಿಯ ನುಡಿಸಿರಿಯಲ್ಲೂ ಕೂಡಾ ಹಲವು ಕುಲುಕ್ಕಿ ಶರಬತ್ತಿನ ಸ್ಟಾಲ್‍ಗಳು ಅಲ್ಲಲ್ಲಿ ರಾರಾಜಿಸುತ್ತ ಜನರ ಬಾಯಲ್ಲಿ ನೀರೂರಿಸುತ್ತಿದೆ. ಕೇರಳದ ಈ ವಿಭಿನ್ನ ಶೈಲಿಯ ಪಾನೀಯವನ್ನ ಹೇಗೆ ತಯಾರಿಸುತ್ತಾರೆ. ಬಾಯಲ್ಲಿ ನೀರೂರಿಸುವ ಇದರ ರುಚಿಯ ಹಿನ್ನಲೆಯ ರಹಸ್ಯಗಳೇನು? ಈ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ.
ದೇವರ ನಾಡೆಂದೇ ಪ್ರಖ್ಯಾತಿ ಹೊಂದಿದ ಕೇರಳ, ಚಾರಣಿಗರನ್ನ ಕೈಬೀಸಿ ಕರೆಯುವ ಪ್ರವಾಸಿ ತಾಣ. ಅರಬ್ಬೀ ಸಮುದ್ರದೊಂದಿಗೆ ಮೈಚಾಚಿ ನಿಂತ ಈ ನಾಡ ಸೊಬಗು ಅದೆಷ್ಟೋ ದೇಶ ವಿದೇಶೀ ಪ್ರವಾಸಿಗರನ್ನ ಅತ್ತ ಆಕರ್ಷಿಸುತ್ತಿದೆ.ಪ್ರಾಕೃತಿಕ ಅಂದವ ಸವಿಯಲು ಬರುವವರನ್ನ ಸೆಳೆಯಲೆಂದೇ ಹೌಸ್ ಬೋಟ್,ನಾಡ ದೋಣಿ ಉತ್ಸವಗಳಂತಹ ವಿನೂತನ ಪ್ರಯತ್ನಗಳನ್ನ ಮಾಡಿ ಸೈ ಎನಿಸಿಕೊಂಡವರು ಕೇರಳೀಯರು. ಅಂತಹ ಪ್ರಯತ್ನಗಳ ಪೈಕಿ ಪಾನೀಯದಲ್ಲಾದ ಒಂದು ವಿಶಿಷ್ಟ ಪ್ರಯೋಗವೇ ಈ ಕುಲುಕ್ಕಿ ಶರಬತ್ತು. ಮಾರುಕಟ್ಟೆಯಲ್ಲಿ ಸಿಗುವ ಎನರ್ಜಿ ಡ್ರಿಂಕ್ಸ್ ಗಳಿಗೂ ಪೈಪೋಟಿ ನೀಡಬಲ್ಲ ಇದರ ಅಲೆ ಇದೀಗ ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ.ಅಂದ ಹಾಗೆ ಈ ಶರಬತ್ತಿನ ಒಳಗುಟ್ಟನ್ನು ನಿಮ್ಮ ಮುಂದಿಡುತ್ತಿದ್ದೇನೆ.
ನಿಂಬೆ ಹಣ್ಣು,ಸಕ್ಕರೆ ಪಾಕ,ಕಾಯಿ ಮೆಣಸು,ಶುಂಠಿ ದ್ರಾವಕ,ಕಸ್‍ಕಸ್,ಸೋಡಾ ಮುಂತಾದ ಸಾಮಾಗ್ರಿಗಳನ್ನು ಈ ರುಚಿಕರ ಪಾನೀಯವನ್ನ ತಯಾರಿಸಲು ಬಳಸಲಾಗುತ್ತದೆ. ಪಾತ್ರೆಯೊಂದರಲ್ಲಿ ಸೋಡಾ ಮತ್ತು ಸಕ್ಕರೆ ಪಾಕವನ್ನು ಮಿಶ್ರಣ ಮಾಡಿ ನಿಂಬೆ ರಸವನ್ನು ಸೇರಿಸಿ 20 ಸೆಕೆಂಡ್ಸ್ ಗಳ ಕಾಲ ಚೆನ್ನಾಗಿ ಕುಲುಕಿಸಬೇಕು... ಇಲ್ಲಿಗೆ ಈ ಪಾನೀಯ ಕುಡಿಯಲು ಸಿದ್ಧ..
ಇದರ ತಯಾರಿಕೆಯಲ್ಲಿ ಕೈಚಳಕ ಹೊಂದಿದ ಕೆಲ ಯುವಕರು ಗ್ಲಾಸುಗಳನ್ನು ಅತ್ತಿತ್ತ ಬಿಸಾಡಿ ಕ್ಯಾಚ್ ಹಿಡಿದು ಗ್ರಾಹಕರಿಗೆ ಮನರಂಜನೆಯನ್ನೂ ನೀಡುತ್ತಾರೆ. ಕಳೆದ ಹಲವು ವರ್ಷಗಳಿಂದ ಇದೇ ತಯಾರಿಯಲ್ಲಿ ಪಳಗಿರುವ ಕೇರಳದ ಪ್ರತಿಷ್ಟಿತ ಕುಲುಕ್ಕಿ ಹಬ್‍ನ ಕೆಲಸಗಾರರು ಹೇಳುವಂತೆ ಕೇರಳದಲ್ಲಿ ಪ್ರತ್ಯೇಕ ಸೀಸನ್‍ಗಳಲ್ಲಿ ಇದು ಭಾರೀ ವ್ಯಾಪಾರವನ್ನು ಗಿಟ್ಟಿಸುತ್ತಲ್ಲದೆ ಕೊಚ್ಚಿ ಒಳಗೊಂಡಂತೆ ರಾಜ್ಯದ ಎಲ್ಲಾ ಬೀಚ್‍ಗಳಲ್ಲೂ ಕುಲುಕ್ಕಿ ಸ್ಟಾಲ್‍ಗಳು ತಲೆಯೆತ್ತುತ್ತವೆ. ಅಲ್ಲದೇ ಇದರ ಸವಿಯನ್ನು ಹೀರಲು ದೂರದೂರಿನಿಂದಲೂ ಗ್ರಾಹಕರು ಬರುತ್ತಾರಂತೆ. ಅಂತೂ ನುಡಿಸಿರಿಯಲ್ಲಿ ಸಾಹಿತ್ಯಪಾಕವನ್ನುಂಡು ಕುಲುಕ್ಕಿ ಶರಬತ್ತಿನ ರುಚಿಯನ್ನ ಸವಿಯಲು ಜನರು ಸ್ಟಾಲಲ್ಲಿ ಸಾಲುಗಟ್ಟಿ ನಿಂತಿರೋದು ಕಂಡು ಬಂತು.

images

ನಿಝಾಮ್ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...

ಅರಬಿ ಭಾಷೆ : ಇತಿಹಾಸ ಮತ್ತು ವರ್ತಮಾನ

✒ ನಿಝಾಮ್ ಅನ್ಸಾರಿ ಭಾಷೆ ಮನುಷ್ಯನ ಸವಿಶೇಷತೆಗಳಲ್ಲೊಂದು. ಚಿಂತನೆಗಳು ಮತ್ತು ಅಭಿರುಚಿಗಳ ಆಶಯವನ್ನು ಅಭಿವ್ಯಕ್ತಿಗೊಳಿಸುವ ಅಥವಾ ಹೊರ ಹಾಕುವ ಶಬ್ದಗಳ ಒಂದು ಸಮೂಹವಾಗಿದೆ ಇದು. ಪ್ರಪಂಚದಲ್ಲಿ ಇಂದು ಹಲವು ಅಧಿಕೃತವಾಗಿರುವ ಭಾಷೆಗಳು ಅಸ್ತಿತ್ವದಲ್ಲಿವೆ.ಅದರಲ್ಲೂ ಪ್ರಾದೇಶಿಕ ಭಾಷೆಗಳು ಬೇರೇನೆ. ಆದರೆ ಈ ಎಲ್ಲಾ ಭಾಷೆಗಳ ಪೈಕಿ ರಾಜನಂತೆ ಇರೋದು ಅರಬಿ ಭಾಷೆ ಮಾತ್ರ . ಒಂದು ಕಾಲದಲ್ಲಿ ಇಡೀ ಜಗತ್ತನ್ನೇ ನಿಯಂತ್ರಿಸುವ ತಾಕತ್ತಿದ್ದ ಭಾಷೆಯಾಗಿತ್ತು ಅರಬಿ. ಯಾವ ರೀತಿಯಲ್ಲಿ ಈಗ ಆಂಗ್ಲ ಭಾಷೆಗೆ ಪ್ರಾಧಾನ್ಯತೆ, ಜಾಗತಿಕ ಅಂಗೀಕಾರ ಇದೆಯೋ ಅದೇ ರೀತಿಯಲ್ಲಿ ಅಂದು ಅರಬಿ ಭಾಷೆ ಸ್ಥಾನ ಪಡೆದಿತ್ತು. ಬಲದಿಂದ ಎಡಕ್ಕೆ ಇರುವ ಕೆಲವೊಂದು ಭಾಷೆಗಳಲ್ಲಿ ಅರಬೀ ಕೂಡಾ ಒಂದು. ಸೈಮಟಿಕ್ ಭಾಷೆಗಳಲ್ಲೊಂದಾದ ಅರಬಿ ಜಗತ್ತಿನ ಅತ್ಯಂತ ಪುರಾತನ ಭಾಷೆಗಳ ಪೈಕಿ ಒಂದು ಕೂಡಾ . ಐಕ್ಯ ರಾಷ್ಟ್ರ ಸಂಘದ ಅಂಗೀಕೃತ ಭಾಷೆಯಾದ ಅರಬಿ, 26 ದೇಶಗಳ ಅಧಿಕೃತ ಭಾಷೆಯಾಗಿದೆ‌. ಆಫ್ರಿಕನ್ ಯೂನಿಯನ್ ಆರ್ಗನೈಸೇಷನ್ ಇಸ್ಲಾಮಿಕ್ ಕಾನ್ಫೆರನ್ಸ್ ನಂತಹ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಅರಬಿ ಭಾಷೆಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದೆ. ಅರಬಿ ಭಾಷೆ: ಹುಟ್ಟು ಮತ್ತು ಬೆಳವಣಿಗೆ ಬಿ.ಸಿ 1900 ರಲ್ಲಿ ಜೀವಿಸಿದ್ದ 'ಯಅರೂಬ್ ಇಬ್ನ್ ಖಹ್ತಾನ್' ಎಂಬವರನ್ನು ಅರಬಿ ಭಾಷೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಇವರ ನಾಮಕ್ಕೆ ಹೊಂದಿಕೊಂಡು 'ಅರಬಿ' ಎಂಬ ಹೆಸರು...

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...