ವಿಷಯಕ್ಕೆ ಹೋಗಿ

ತಿಳಿಯಲೇ ಬೇಕು ಈ ಕುಲುಕ್ಕಿ ಶರ್‍ಬತ್ತಿನ ಅಸಲಿಯತ್ತು..!!

download

ಸಿಹಿ ಪಾನೀಯಗಳೆಂದರೆ ಎಲ್ಲರಿಗೂ ಬಲು ಇಷ್ಟ.ಅದರಲ್ಲೂ ಸುಡು ಬೇಸಿಗೆಯಲ್ಲಂತೂ ತಂಪು ಪಾನೀಯಗಳ ಹವಾ ತುಂಬಾ ಜೋರಾಗೇ ಇರುತ್ತೆ. ದಣಿದು ಬಂದರಂತೂ ಇದನ್ನು ನೋಡಿದಾಕ್ಷಣ ಜನ ಅತ್ತ ಮುಗಿ ಬೀಳುತ್ತಾರೆ. ಕಾಲ ಬದಲಾದಂತೆಲ್ಲಾ ಜನರ ಅಭಿರುಚಿಯೂ ಬದಲಾಗಿರುತ್ತದೆ ಅನ್ನೋದಕ್ಕೆ ಈ ಕೇರಳದ ಕುಲುಕ್ಕಿ ಶರಬತ್ತೇ ಸಾಕ್ಷಿಯಾಗಿದೆ. ಈ ಬಾರಿಯ ನುಡಿಸಿರಿಯಲ್ಲೂ ಕೂಡಾ ಹಲವು ಕುಲುಕ್ಕಿ ಶರಬತ್ತಿನ ಸ್ಟಾಲ್‍ಗಳು ಅಲ್ಲಲ್ಲಿ ರಾರಾಜಿಸುತ್ತ ಜನರ ಬಾಯಲ್ಲಿ ನೀರೂರಿಸುತ್ತಿದೆ. ಕೇರಳದ ಈ ವಿಭಿನ್ನ ಶೈಲಿಯ ಪಾನೀಯವನ್ನ ಹೇಗೆ ತಯಾರಿಸುತ್ತಾರೆ. ಬಾಯಲ್ಲಿ ನೀರೂರಿಸುವ ಇದರ ರುಚಿಯ ಹಿನ್ನಲೆಯ ರಹಸ್ಯಗಳೇನು? ಈ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ.
ದೇವರ ನಾಡೆಂದೇ ಪ್ರಖ್ಯಾತಿ ಹೊಂದಿದ ಕೇರಳ, ಚಾರಣಿಗರನ್ನ ಕೈಬೀಸಿ ಕರೆಯುವ ಪ್ರವಾಸಿ ತಾಣ. ಅರಬ್ಬೀ ಸಮುದ್ರದೊಂದಿಗೆ ಮೈಚಾಚಿ ನಿಂತ ಈ ನಾಡ ಸೊಬಗು ಅದೆಷ್ಟೋ ದೇಶ ವಿದೇಶೀ ಪ್ರವಾಸಿಗರನ್ನ ಅತ್ತ ಆಕರ್ಷಿಸುತ್ತಿದೆ.ಪ್ರಾಕೃತಿಕ ಅಂದವ ಸವಿಯಲು ಬರುವವರನ್ನ ಸೆಳೆಯಲೆಂದೇ ಹೌಸ್ ಬೋಟ್,ನಾಡ ದೋಣಿ ಉತ್ಸವಗಳಂತಹ ವಿನೂತನ ಪ್ರಯತ್ನಗಳನ್ನ ಮಾಡಿ ಸೈ ಎನಿಸಿಕೊಂಡವರು ಕೇರಳೀಯರು. ಅಂತಹ ಪ್ರಯತ್ನಗಳ ಪೈಕಿ ಪಾನೀಯದಲ್ಲಾದ ಒಂದು ವಿಶಿಷ್ಟ ಪ್ರಯೋಗವೇ ಈ ಕುಲುಕ್ಕಿ ಶರಬತ್ತು. ಮಾರುಕಟ್ಟೆಯಲ್ಲಿ ಸಿಗುವ ಎನರ್ಜಿ ಡ್ರಿಂಕ್ಸ್ ಗಳಿಗೂ ಪೈಪೋಟಿ ನೀಡಬಲ್ಲ ಇದರ ಅಲೆ ಇದೀಗ ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ.ಅಂದ ಹಾಗೆ ಈ ಶರಬತ್ತಿನ ಒಳಗುಟ್ಟನ್ನು ನಿಮ್ಮ ಮುಂದಿಡುತ್ತಿದ್ದೇನೆ.
ನಿಂಬೆ ಹಣ್ಣು,ಸಕ್ಕರೆ ಪಾಕ,ಕಾಯಿ ಮೆಣಸು,ಶುಂಠಿ ದ್ರಾವಕ,ಕಸ್‍ಕಸ್,ಸೋಡಾ ಮುಂತಾದ ಸಾಮಾಗ್ರಿಗಳನ್ನು ಈ ರುಚಿಕರ ಪಾನೀಯವನ್ನ ತಯಾರಿಸಲು ಬಳಸಲಾಗುತ್ತದೆ. ಪಾತ್ರೆಯೊಂದರಲ್ಲಿ ಸೋಡಾ ಮತ್ತು ಸಕ್ಕರೆ ಪಾಕವನ್ನು ಮಿಶ್ರಣ ಮಾಡಿ ನಿಂಬೆ ರಸವನ್ನು ಸೇರಿಸಿ 20 ಸೆಕೆಂಡ್ಸ್ ಗಳ ಕಾಲ ಚೆನ್ನಾಗಿ ಕುಲುಕಿಸಬೇಕು... ಇಲ್ಲಿಗೆ ಈ ಪಾನೀಯ ಕುಡಿಯಲು ಸಿದ್ಧ..
ಇದರ ತಯಾರಿಕೆಯಲ್ಲಿ ಕೈಚಳಕ ಹೊಂದಿದ ಕೆಲ ಯುವಕರು ಗ್ಲಾಸುಗಳನ್ನು ಅತ್ತಿತ್ತ ಬಿಸಾಡಿ ಕ್ಯಾಚ್ ಹಿಡಿದು ಗ್ರಾಹಕರಿಗೆ ಮನರಂಜನೆಯನ್ನೂ ನೀಡುತ್ತಾರೆ. ಕಳೆದ ಹಲವು ವರ್ಷಗಳಿಂದ ಇದೇ ತಯಾರಿಯಲ್ಲಿ ಪಳಗಿರುವ ಕೇರಳದ ಪ್ರತಿಷ್ಟಿತ ಕುಲುಕ್ಕಿ ಹಬ್‍ನ ಕೆಲಸಗಾರರು ಹೇಳುವಂತೆ ಕೇರಳದಲ್ಲಿ ಪ್ರತ್ಯೇಕ ಸೀಸನ್‍ಗಳಲ್ಲಿ ಇದು ಭಾರೀ ವ್ಯಾಪಾರವನ್ನು ಗಿಟ್ಟಿಸುತ್ತಲ್ಲದೆ ಕೊಚ್ಚಿ ಒಳಗೊಂಡಂತೆ ರಾಜ್ಯದ ಎಲ್ಲಾ ಬೀಚ್‍ಗಳಲ್ಲೂ ಕುಲುಕ್ಕಿ ಸ್ಟಾಲ್‍ಗಳು ತಲೆಯೆತ್ತುತ್ತವೆ. ಅಲ್ಲದೇ ಇದರ ಸವಿಯನ್ನು ಹೀರಲು ದೂರದೂರಿನಿಂದಲೂ ಗ್ರಾಹಕರು ಬರುತ್ತಾರಂತೆ. ಅಂತೂ ನುಡಿಸಿರಿಯಲ್ಲಿ ಸಾಹಿತ್ಯಪಾಕವನ್ನುಂಡು ಕುಲುಕ್ಕಿ ಶರಬತ್ತಿನ ರುಚಿಯನ್ನ ಸವಿಯಲು ಜನರು ಸ್ಟಾಲಲ್ಲಿ ಸಾಲುಗಟ್ಟಿ ನಿಂತಿರೋದು ಕಂಡು ಬಂತು.

images

ನಿಝಾಮ್ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಂದಿನಿಂದ 'ಸಮಸ್ತ'ದ ಆನ್ ಲೈನ್ ತರಗತಿಗಳು ಆರಂಭ

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಒಕ್ಕೂಟದ (SKJU)ಅಧೀನದಲ್ಲಿ‌ ಕಾರ್ಯಾಚರಿಸುವ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಮದ್ರಸಗಳ ವಿದ್ಯಾರ್ಥಿಗಳಿಗೆ ನವ ಅಧ್ಯಯನ ವರ್ಷ ಇಂದಿನಿಂದ ಆರಂಭಗೊಂಡಿದೆ. ವಿಶೇಷ ಅಂದ್ರೆ, ಈ ಬಾರಿ ತರಗತಿಗಳ ಪ್ರಾರಂಭೋತ್ಸವದ ಸಂಭ್ರಮಗಳಿಲ್ಲದೆ, ಮದ್ರಸಾ ಕಟ್ಟಡಗಳು ತೆರೆಯದೇ, ಹತ್ತು ಸಾವಿರಕ್ಕೂ ಮಿಕ್ಕ ಮದ್ರಸಗಳ ಹನ್ನೆರಡು ಲಕ್ಷ ವಿದ್ಯಾರ್ಥಿಗಳು ಅವರವರ ಮನೆಗಳಲ್ಲಿಯೇ ಕುಳಿತು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಎಂಬುದು.  ಆನ್ ಲೈನ್ ತರಗತಿಗಳಿಗಾಗಿ, ಸಮಸ್ತ ಈ ಹಿಂದೆಯೇ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ವಿದ್ಯಾಭ್ಯಾಸ ಬೋರ್ಡ್‌ ಅದಕ್ಕಾಗಿ ಆರು ಕ್ಯಾಮರಾ ಯುನಿಟ್ ಗಳ ಕ್ಲಾಸ್ ರೂಂಗಳು ,22 ಪರಿಣತರಾದ ಅಧ್ಯಾಪಕರನ್ನು ನೇಮಕಗೊಳಿಸಿದೆ.  ತರಗತಿ ಆರಂಭದಿಂದ ಕೊನೆಯವರೆಗೂ ವಿದ್ಯಾರ್ಥಿ ಜೊತೆ ಪೋಷಕರು ಕುಳಿತಿರಬೇಕು.ಹೋಂ ವರ್ಕ್ ನೀಡಿದರೆ, ಅದನ್ನು ಮಾಡಿ, ಮುಂದೆ ಮದ್ರಸಗಳಲ್ಲಿ ತರಗತಿ ಆರಂಭಗೊಳ್ಳುವಾಗ ಮೌಲ್ಯಮಾಪನಕ್ಕಾಗಿ ಅಧ್ಯಾಪಕರಿಗೆ ತೋರಿಸಬೇಕು. ಮನೆಯಲ್ಲಿ ತರಗತಿಯ ವಾತಾವರಣವನ್ನು ಒದಗಿಸಿಕೊಟ್ಟು,ವಿದ್ಯಾರ್ಥಿಗಳಿಗೆ ಮನೆಯವರು ಸಹಕರಿಸಬೇಕು. ಅಲ್ಲದೇ, ಮದ್ರಸಾ ಹಾಗೂ ಜಮಾಅತ್ ಕಮಿಟಿಗಳು ಸೇರಿ, ಆನ್‌ಲೈನ್ ತರಗತಿಗಳು ಆಯಾ ಮದ್ರಸಗಳ ವಿದ್ಯಾರ್ಥಿಗಳಿಗೆ ಅವರವರ ಮನೆಗಳಲ್ಲಿಯೇ ಸುಲಭವಾಗಿ ತಲುಪುವಂತೆ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನೀಡಬೇಕು. ಮದ್ರಸಗಳು ತ...

ಕೋವಿಡ್ ಕಾಲದ ಓದು: ಚಂದ್ರನ ಚೂರು

'ಚಂದ್ರನ ಚೂರು' ಕೃತಿಯ ಹೆಸರು ಕೇಳಿದಾಗ ನಿಜವಾಗಿಯೂ ಅದೊಂದು ಕಾದಂಬರಿಯಾಗಿರಬಹುದು ಎಂದು ಭಾವಿಸಿದ್ದೆ. ಆದರೆ, ಪುಸ್ತಕ ಕೈಗೆ ತಲುಪಿದಾಗಲೇ ಗೊತ್ತಾಗಿದ್ದು, ಅದೊಂದು ಚಂದ್ರಲೋಕಕ್ಕೆ ಕೊಂಡೊಯ್ಯುವ ಅದ್ಭುತ ಕೃತಿ ಅಂತ. ತಂದೆ ಕುವೆಂಪು ಅವರ ಸಾಹಿತ್ಯದ ಹಾದಿಯಲ್ಲೇ ನಡೆದರೂ, ತೇಜಸ್ವಿಯವರ ಸಾಹಿತ್ಯವು ನಿಸರ್ಗ ವಿಸ್ಮಯ, ಭೂಗೋಳ, ಜೀವಶಾಸ್ತ್ರ, ಭತಶಾಸ್ತ್ರ, ಇತಿಹಾಸ ಹೀಗೇ ಎಲ್ಲಾ ಶಾಸ್ತ್ರಗಳ ಮಿಶ್ರಣ ರಸಾಯನ ಎಂದೇ ಹೇಳಬಹುದು. ಚಂದ್ರನ ಚೂರು ಚಂದ್ರ ಲೋಕದ ವಿಸ್ಮಯ ದೃಶ್ಯಗಳನ್ನು ಕಟ್ಟಿಕೊಡುವ ಚೊಚ್ಚಲ ಕೃತಿ. ಬಾಹ್ಯಾಕಾಶ, ಖಗೋಳ ಶಾಸ್ತ್ರ ವಿಷಯದಲ್ಲಿ ಆಸಕ್ತಿ ಇಲ್ಲದ ನನ್ನಂತವರನ್ನೂ ಇದು ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಮಾಡುತ್ತದೆ, ಅದಕ್ಕೆ ಕಾರಣ, ತೇಜಸ್ವಿ ಅವರ ಬರವಣಿಗೆ ಹಾಗೂ ವಿವರಣೆಯ ಶೈಲಿ.. ಜಗತ್ತಿನಲ್ಲಿ ಮನುಷ್ಯನು ಚಂದ್ರನಲ್ಲಿಗೆ ಕಾಲಿಡುವುದಕ್ಕೂ ಮುನ್ನ, ಯಾವುದೆಲ್ಲಾ ರೀತಿಯ ಪರಿಶ್ರಮಗಳು ನಡೆದಿದ್ದವು ಹಾಗೂ ಭೂಮಂಡಲ ಮತ್ತು ಚಂದ್ರನ ಕುರಿತಾಘಿ ಯಾವುದೆಲ್ಲಾ ಆಯಾಮಗಳಲ್ಲಿ ಅಧ್ಯಯನಗಳಾಗಿದ್ದುವು ಎಂಬುದರ ಸಂಪೂರ್ಣ ವಿಷಯಗಳಿವೆ. ಚಂದ್ರನಲ್ಲಿ ತಲುಪಿದ ಮನುಷ್ಯನಿಗೆ ಆದ ಅನುಭವಗಳೇನು? ನೀಲ್ ಆಮ್Fಸ್ಟ್ರಾಂಗ್ ತಂಡದ ಚಂದ್ರಯಾನದ ರಸವತ್ತಾದ ಅನುಭವಗಳು, ಚಂದಿರನ ಮಣ್ಣಲ್ಲಿ ಅಮೇರಿಕದ ಫ್ಲಾಗ್ ಮತ್ತು ಬೋಡ್F ಸ್ಥಾಪಿಸಿ ಬಂದ ಆ ಧೀರ ತಂಡದ ಬೆರಗಾಗಿಸುವ ಕ್ಷಣ ಕ್ಷಣದ ವರದಿಗಳು ಈ ಕೃತಿಯ ಲೇಖನಗಳಲ್ಲಿ ಅಡಗಿದೆ. ಒಟ್ಟಿನಲ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri