ವಿಷಯಕ್ಕೆ ಹೋಗಿ

ತಿಳಿಯಲೇ ಬೇಕು ಈ ಕುಲುಕ್ಕಿ ಶರ್‍ಬತ್ತಿನ ಅಸಲಿಯತ್ತು..!!

download

ಸಿಹಿ ಪಾನೀಯಗಳೆಂದರೆ ಎಲ್ಲರಿಗೂ ಬಲು ಇಷ್ಟ.ಅದರಲ್ಲೂ ಸುಡು ಬೇಸಿಗೆಯಲ್ಲಂತೂ ತಂಪು ಪಾನೀಯಗಳ ಹವಾ ತುಂಬಾ ಜೋರಾಗೇ ಇರುತ್ತೆ. ದಣಿದು ಬಂದರಂತೂ ಇದನ್ನು ನೋಡಿದಾಕ್ಷಣ ಜನ ಅತ್ತ ಮುಗಿ ಬೀಳುತ್ತಾರೆ. ಕಾಲ ಬದಲಾದಂತೆಲ್ಲಾ ಜನರ ಅಭಿರುಚಿಯೂ ಬದಲಾಗಿರುತ್ತದೆ ಅನ್ನೋದಕ್ಕೆ ಈ ಕೇರಳದ ಕುಲುಕ್ಕಿ ಶರಬತ್ತೇ ಸಾಕ್ಷಿಯಾಗಿದೆ. ಈ ಬಾರಿಯ ನುಡಿಸಿರಿಯಲ್ಲೂ ಕೂಡಾ ಹಲವು ಕುಲುಕ್ಕಿ ಶರಬತ್ತಿನ ಸ್ಟಾಲ್‍ಗಳು ಅಲ್ಲಲ್ಲಿ ರಾರಾಜಿಸುತ್ತ ಜನರ ಬಾಯಲ್ಲಿ ನೀರೂರಿಸುತ್ತಿದೆ. ಕೇರಳದ ಈ ವಿಭಿನ್ನ ಶೈಲಿಯ ಪಾನೀಯವನ್ನ ಹೇಗೆ ತಯಾರಿಸುತ್ತಾರೆ. ಬಾಯಲ್ಲಿ ನೀರೂರಿಸುವ ಇದರ ರುಚಿಯ ಹಿನ್ನಲೆಯ ರಹಸ್ಯಗಳೇನು? ಈ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ.
ದೇವರ ನಾಡೆಂದೇ ಪ್ರಖ್ಯಾತಿ ಹೊಂದಿದ ಕೇರಳ, ಚಾರಣಿಗರನ್ನ ಕೈಬೀಸಿ ಕರೆಯುವ ಪ್ರವಾಸಿ ತಾಣ. ಅರಬ್ಬೀ ಸಮುದ್ರದೊಂದಿಗೆ ಮೈಚಾಚಿ ನಿಂತ ಈ ನಾಡ ಸೊಬಗು ಅದೆಷ್ಟೋ ದೇಶ ವಿದೇಶೀ ಪ್ರವಾಸಿಗರನ್ನ ಅತ್ತ ಆಕರ್ಷಿಸುತ್ತಿದೆ.ಪ್ರಾಕೃತಿಕ ಅಂದವ ಸವಿಯಲು ಬರುವವರನ್ನ ಸೆಳೆಯಲೆಂದೇ ಹೌಸ್ ಬೋಟ್,ನಾಡ ದೋಣಿ ಉತ್ಸವಗಳಂತಹ ವಿನೂತನ ಪ್ರಯತ್ನಗಳನ್ನ ಮಾಡಿ ಸೈ ಎನಿಸಿಕೊಂಡವರು ಕೇರಳೀಯರು. ಅಂತಹ ಪ್ರಯತ್ನಗಳ ಪೈಕಿ ಪಾನೀಯದಲ್ಲಾದ ಒಂದು ವಿಶಿಷ್ಟ ಪ್ರಯೋಗವೇ ಈ ಕುಲುಕ್ಕಿ ಶರಬತ್ತು. ಮಾರುಕಟ್ಟೆಯಲ್ಲಿ ಸಿಗುವ ಎನರ್ಜಿ ಡ್ರಿಂಕ್ಸ್ ಗಳಿಗೂ ಪೈಪೋಟಿ ನೀಡಬಲ್ಲ ಇದರ ಅಲೆ ಇದೀಗ ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ.ಅಂದ ಹಾಗೆ ಈ ಶರಬತ್ತಿನ ಒಳಗುಟ್ಟನ್ನು ನಿಮ್ಮ ಮುಂದಿಡುತ್ತಿದ್ದೇನೆ.
ನಿಂಬೆ ಹಣ್ಣು,ಸಕ್ಕರೆ ಪಾಕ,ಕಾಯಿ ಮೆಣಸು,ಶುಂಠಿ ದ್ರಾವಕ,ಕಸ್‍ಕಸ್,ಸೋಡಾ ಮುಂತಾದ ಸಾಮಾಗ್ರಿಗಳನ್ನು ಈ ರುಚಿಕರ ಪಾನೀಯವನ್ನ ತಯಾರಿಸಲು ಬಳಸಲಾಗುತ್ತದೆ. ಪಾತ್ರೆಯೊಂದರಲ್ಲಿ ಸೋಡಾ ಮತ್ತು ಸಕ್ಕರೆ ಪಾಕವನ್ನು ಮಿಶ್ರಣ ಮಾಡಿ ನಿಂಬೆ ರಸವನ್ನು ಸೇರಿಸಿ 20 ಸೆಕೆಂಡ್ಸ್ ಗಳ ಕಾಲ ಚೆನ್ನಾಗಿ ಕುಲುಕಿಸಬೇಕು... ಇಲ್ಲಿಗೆ ಈ ಪಾನೀಯ ಕುಡಿಯಲು ಸಿದ್ಧ..
ಇದರ ತಯಾರಿಕೆಯಲ್ಲಿ ಕೈಚಳಕ ಹೊಂದಿದ ಕೆಲ ಯುವಕರು ಗ್ಲಾಸುಗಳನ್ನು ಅತ್ತಿತ್ತ ಬಿಸಾಡಿ ಕ್ಯಾಚ್ ಹಿಡಿದು ಗ್ರಾಹಕರಿಗೆ ಮನರಂಜನೆಯನ್ನೂ ನೀಡುತ್ತಾರೆ. ಕಳೆದ ಹಲವು ವರ್ಷಗಳಿಂದ ಇದೇ ತಯಾರಿಯಲ್ಲಿ ಪಳಗಿರುವ ಕೇರಳದ ಪ್ರತಿಷ್ಟಿತ ಕುಲುಕ್ಕಿ ಹಬ್‍ನ ಕೆಲಸಗಾರರು ಹೇಳುವಂತೆ ಕೇರಳದಲ್ಲಿ ಪ್ರತ್ಯೇಕ ಸೀಸನ್‍ಗಳಲ್ಲಿ ಇದು ಭಾರೀ ವ್ಯಾಪಾರವನ್ನು ಗಿಟ್ಟಿಸುತ್ತಲ್ಲದೆ ಕೊಚ್ಚಿ ಒಳಗೊಂಡಂತೆ ರಾಜ್ಯದ ಎಲ್ಲಾ ಬೀಚ್‍ಗಳಲ್ಲೂ ಕುಲುಕ್ಕಿ ಸ್ಟಾಲ್‍ಗಳು ತಲೆಯೆತ್ತುತ್ತವೆ. ಅಲ್ಲದೇ ಇದರ ಸವಿಯನ್ನು ಹೀರಲು ದೂರದೂರಿನಿಂದಲೂ ಗ್ರಾಹಕರು ಬರುತ್ತಾರಂತೆ. ಅಂತೂ ನುಡಿಸಿರಿಯಲ್ಲಿ ಸಾಹಿತ್ಯಪಾಕವನ್ನುಂಡು ಕುಲುಕ್ಕಿ ಶರಬತ್ತಿನ ರುಚಿಯನ್ನ ಸವಿಯಲು ಜನರು ಸ್ಟಾಲಲ್ಲಿ ಸಾಲುಗಟ್ಟಿ ನಿಂತಿರೋದು ಕಂಡು ಬಂತು.

images

ನಿಝಾಮ್ ಅನ್ಸಾರಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...