ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

‘ತೆರೆದಂತೆ ಹಾದಿ’ ಈ ದಿನದ ಓದು...

   -ನಿಝಾಮ್ ಅನ್ಸಾರಿ ಎರಡು ತಿಂಗಳ ಹಿಂದೆ ಮಂಗಳೂರಿನ ರಥಬೀದಿ ಯ ಲ್ಲಿರುವ ಸರ್ಕಾರಿ ಕಾಲೇಜಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅಲ್ಲಿ ಹೋಗಿ ನೋಡಿದರೆ, ಕಾಲೇಜು ವತಿಯಿಂದ ಪತ್ರಿಕೋದ್ಯಮದ ನಾನಾ ಆಯಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ವರ್ಕ್‍ಶಾಪ್ ಹಮ್ಮಿಕೊಳ್ಳಲಾಗಿತ್ತು. ನಾನಂತೂ ಯಾವ ಕಾರಣಕ್ಕೆ ಅಲ್ಲಿ ಬಂದು ತಲುಪಿದೆನೋ ಗೊತ್ತಿಲ್ಲ, ವರ್ಕ್‍ಶಾಪ್ ಮುಗಿಯುವಷ್ಟರಲ್ಲಿ ಪುಸ್ತಕವೊಂದು ಕೊಡುಗೆಯಾಗಿ ನನ್ನ ಕೈ ಸೇರಿತ್ತು. ಅದು ಅಲ್ಲಿನ ಅಧ್ಯಾಪಕಿ ಜಯಶ್ರೀ ಬಿ.ಕದ್ರಿ ಅವರ ‘ತೆರೆದಂತೆ ಹಾದಿ’ ಎಂಬ ವೈಚಾರಿಕ ಬರಹಗಳ ಸಂಗ್ರಹ. ನಿನ್ನೆ ಮನೇಲಿ ನನ್ನ ಪದವಿ ಸರ್ಟಿಫಿಕೇಟ್‍ಗಾಗಿ ಹುಡುಕಾಡುತ್ತಿದ್ದಾಗ, ಈ ಪುಸ್ತಕ ಸಿಕ್ಕಿತು. ಅದನ್ನು ನನ್ನ ಓದಿನ ಪಟ್ಟಿಗೆ ಸೇರಿಸಲು ಇದೇ ಸಕಾಲ ಅಂದುಕೊಂಡು ಕೈಗೆತ್ತಿಕೊಂಡೆ. ಅಂದ ಹಾಗೆ, ಪದವಿ ಸರ್ಟಿಫಿಕೇಟ್ ಹುಡುಕುತ್ತಿದ್ದೆಂದೆನಲ್ಲಾ. ನನ್ನ ಪದವಿಗೂ, ರಥಬೀದಿಯ ಆ ಕಾಲೇಜಿಗೂ ಅವಿನಾಭಾವ ಸಂಬಂಧವಿದೆ. ಮೂರು ವರ್ಷಗಳ ಪದವಿ ಪರೀಕ್ಷೆಗಳನ್ನು ಬರೆದಿದ್ದು ಅದೇ ಕಾಲೇಜಿನಲ್ಲಿ. ಅದಕ್ಕೂ ಮುನ್ನ ಎಸ್ಸೆಸೆಲ್ಸಿ ಪರೀಕ್ಷೆ ಬರೆದಿದ್ದೂ ಕೂಡಾ ಅಲ್ಲೇ ಹತ್ತಿರದ ಶಾಲೆಯೊಂದರಲ್ಲಿ. ಹಾಗಾಗಿ, ರಥಬೀದಿಯ ಆ ಬೀದಿಗಳು ಮತ್ತು ಶಾಲಾ, ಕಾಲೇಜು ಆವರಣ ಮನಸ್ಸಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ.  ಏನೇ ಇರಲಿ, ಅಂತೂ ಜಯಶ್ರೀ ಮೇಡಂ ನಮ್ಮನ್ನು ಬರಮಾಡಿಕೊಂಡ ...

ಕಾರ್ನಾಡರ "ಯಯಾತಿ" ಈ ದಿನದ ಓದು...

{ತಿಂಗಳುಗಳ ಹಿಂದೆ ಸೆಮಿನಾರೊಂದರಲ್ಲಿ ಭಾಗವಹಿಸಲು ಶಿವಮೊಗ್ಗ ತಲುಪಿದ್ದೆ. ಜೊತೆಗೆ ನಾಲ್ಕೈದು ಗೆಳೆಯರಿದ್ದರು. ಸೆಮಿನಾರ್ ಮುಗಿಸಿ ಹಿಂತಿರುಗುವಾಗ ಪುಸ್ತಕ ಪ್ರೇಮಿ ಗೆಳೆಯನೊಬ್ಬನ ಜೊತೆ ಅಲ್ಲೇ ಬಸ್ ಸ್ಟಾಂಡ್ ಹತ್ತಿರದ ಒಂದು ಪುಸ್ತಕದಂಗಡಿಗೆ ಹೋದೆವು. ಆತನಿಗೆ ಮರುಭೂಮಿಯ ಹೂವು ಪುಸ್ತಕ ಬೇಕೆಂದಿದ್ದ. ನಾನು ಯಯಾತಿ ಬೇಕೆಂದೆ. ಅಲ್ಲಿಂದ ಹೊರಡುವಾಗ ಅವತ್ತೇ ಓದಿ ಮುಗಿಸಬೇಕು ಅಂದು ಕೊಂಡ ನನಗೆ ಓದುಭಾಗ್ಯ ದೊರಕಿದ್ದು ಮಾತ್ರ ಇಂದು..ಏನೇ ಆಗಲಿ..ಕೊನೆಗೂ ಈ ಕೋವಿಡ್ ದಿನಗಳು ಕೊನೆಗೂ ಕಾರ್ನಾಡರನ್ನು ಓದಿಸುವಂತೆ ಮಾಡಿದೆ...} ಅಂದ ಹಾಗೆ ಯಯಾತಿ ಗಿರೀಶ ಕಾರ್ನಾಡ ಅವರ ೧೯೬೧ ರಲ್ಲಿ ಪ್ರಕಟವಾದ ಮೊದಲ ನಾಟಕ. ಕೀರ್ತಿನಾಥ ಕುರ್ತಕೋಟಿ ಅವರು ಮುನ್ನುಡಿ, ಹಾಗೂ ಜಿ.ಎಸ್ ಅಮೂರ ಹಿನ್ನುಡಿ ಬರೆದಿದ್ದಾರೆ. ನಾಲ್ಕಂಕಗಳಿರುವ ಪ್ರಸ್ತುತ ನಾಟಕದಲ್ಲಿ ಪಾತ್ರಗಳಾಗಿ ದೇವಯಾನಿ, ಸ್ವರ್ಣಲತೆ, ಶರ್ಮಿಷ್ಠೆ, ಯಯಾತಿ, ಪುರು, ಚಿತ್ರಲೇಖೆ ಮುಂತಾದವರು ಬರುತ್ತಾರೆ. ಕುರ್ತಕೋಟಿ ಅವರು ಹೇಳಿರುವಂತೆ, ಈ ನಾಟಕದಲ್ಲಿ ಮನುಷ್ಯ ಸಾಹಸದ ದುರಂತ ಚಿತ್ರವೊಂದನ್ನು ರೂಪಿಸುವ ಹವಣಿಕೆಯು ಎದ್ದು ಕಾಣುತ್ತದೆ. ನಾಟಕದ ಆಧುನಿಕತೆಯ ಅಂಶವೆಂದೇ ಅದು, ಇಲ್ಲಿಯ ಪಾತ್ರಗಳೆಲ್ಲವೂ ಮನುಷ್ಯನ ಸಾಮಾನ್ಯ ಮಟ್ಟವನ್ನೂ ಮೀರುವ ಹಂಬಲವನ್ನಿಟ್ಟುಕೊಂಡವುಗಳು. ಆದರೆ ಮನುಷ್ಯನ ದೌರ್ಬಲ್ಯಗಳಿಂದಲೇ ಅವುಗಳ ಹಂಬಲ ಪೂರ್ಣಗೊಳ್ಳುವುದಿಲ್ಲ. ಯಯಾತಿ ಅಮರತ್ವದ ಆಕಾಂಕ್ಷೆ, ದೇವಯಾನಿಯ ಪ...

#ನಾನು ದೀಪ ಹಚ್ಚುವುದಿಲ್ಲ...

ನಾನು ಬೆಳಕನ್ನು ಆರಿಸಿ ದೀಪವ ಹಚ್ಚುವುದಿಲ್ಲ.. ಹಸಿದು ಬಳಲಿದ ವಲಸಿಗ ನನ್ನ ಜನಗಳ ಬರಿಗಾಲ ನಡಿಗೆಗೆ ಅದು ತೊಂದರೆಯಾದೀತು.. ನಾನು ಬೆಳಕನ್ನು ಆರಿಸಿ ಹಣತೆ ಹಚ್ಚುವುದಿಲ್ಲ ಹಸಿದು ಸಾವಿನ ದವಡೆಗೆ ಸಿಲುಕಿದ ನನ್ನ ಜನಗಳ ಆತ್ಮಗಳ ಬರಿಗಾಲ ಸಂಚಾರಕ್ಕೆ ಅದು ತೊಡಕಾದೀತು... ನಾನು ಇರುವ ಬೆಳಕ ಆರಿಸಿ ಮನೆಯ ಜಗಲಿಗೆ ಬಂದು ದೀಪವ ಹಚ್ಚುವುದಿಲ್ಲ.. ವೈರಾಣುವಿಗಿಂತಲೂ ಭೀಕರ ಮತಾಂಧ ಕ್ರಿಮಿಗಳು ನನ್ನ ಮನೆಯ ಹಿಂಬಾಗಿಲಿನಿಂದ ಸೇರಿಕೊಳ್ಳಲೂ ಬಹುದು.. ನಾನು ಬೆಳಕನ್ನು ಆರಿಸಿ ದೀಪ ಹಚ್ಚುತ್ತೇನೆ.. ಟಾರ್ಚು, ಮೇಣದ ಬತ್ತಿ ಎನಗೆ ಬೇಕಿಲ್ಲ... ಅಜ್ಞಾನದ ಅಂಧಕಾರವು ನೀಗಲು ಸುಜ್ಞಾನ ದೀವಿಗೆ ಹಚ್ಚಬೇಕಿದೆ.. ಆ ಬೆಳಕು ಜಗವೆಲ್ಲಾ ಪಸರಿಸಬೇಕಿದೆ.. #ನಿಝಾಮ್ ಅನ್ಸಾರಿ

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri