
ನಾನು ಬೆಳಕನ್ನು ಆರಿಸಿ
ದೀಪವ ಹಚ್ಚುವುದಿಲ್ಲ..
ಹಸಿದು ಬಳಲಿದ ವಲಸಿಗ
ನನ್ನ ಜನಗಳ ಬರಿಗಾಲ ನಡಿಗೆಗೆ
ಅದು ತೊಂದರೆಯಾದೀತು..
ನಾನು ಬೆಳಕನ್ನು ಆರಿಸಿ
ಹಣತೆ ಹಚ್ಚುವುದಿಲ್ಲ
ಹಸಿದು ಸಾವಿನ ದವಡೆಗೆ ಸಿಲುಕಿದ
ನನ್ನ ಜನಗಳ ಆತ್ಮಗಳ ಬರಿಗಾಲ ಸಂಚಾರಕ್ಕೆ
ಅದು ತೊಡಕಾದೀತು...
ನಾನು ಇರುವ ಬೆಳಕ ಆರಿಸಿ
ಮನೆಯ ಜಗಲಿಗೆ ಬಂದು
ದೀಪವ ಹಚ್ಚುವುದಿಲ್ಲ..
ವೈರಾಣುವಿಗಿಂತಲೂ ಭೀಕರ
ಮತಾಂಧ ಕ್ರಿಮಿಗಳು
ನನ್ನ ಮನೆಯ ಹಿಂಬಾಗಿಲಿನಿಂದ
ಸೇರಿಕೊಳ್ಳಲೂ ಬಹುದು..
ನಾನು ಬೆಳಕನ್ನು ಆರಿಸಿ
ದೀಪ ಹಚ್ಚುತ್ತೇನೆ..
ಟಾರ್ಚು, ಮೇಣದ ಬತ್ತಿ ಎನಗೆ ಬೇಕಿಲ್ಲ...
ಅಜ್ಞಾನದ ಅಂಧಕಾರವು ನೀಗಲು
ಸುಜ್ಞಾನ ದೀವಿಗೆ ಹಚ್ಚಬೇಕಿದೆ..
ಆ ಬೆಳಕು ಜಗವೆಲ್ಲಾ ಪಸರಿಸಬೇಕಿದೆ..
#ನಿಝಾಮ್ ಅನ್ಸಾರಿ
ಕಾಮೆಂಟ್ಗಳು