ವಿಷಯಕ್ಕೆ ಹೋಗಿ

ಆಹಾರವಿಲ್ಲದೆ ಕಲ್ಲುಗಳನ್ನು ಬೇಯಿಸಿದಳು ಆ ಬಡತಾಯಿ..


ಖಲೀಫ ಉಮರ್ ಆಡಳಿತವನ್ನು ನೆನಪಿಸಿದ ಕೆನ್ಯಾದ ಈ ಘಟನೆ..


ಅದು ಹಝ್ರತ್ ಉಮರ್ (ರ) ರ ಆಡಳಿತ ಕಾಲ. ತನ್ನ ಆಡಳಿತ ಅವಧಿಯಲ್ಲಿ, ರಾಷ್ಟ್ರದ ಯಾರೂ ಕೂಡಾ ಸಂಕಷ್ಟಕ್ಕೆ ಗುರಿಯಾಗಬಾರದೆಂಬ ಮಹತ್ವದ ನಿರ್ಧಾರ ಉಮರ್ ಅವರದ್ದಾಗಿತ್ತು. ಹಾಗಾಗಿ, ಹಗಲು ರಾತ್ರಿಯೆನ್ನದೆ ಜನರಿಗಾಗಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಡಿಪಾಗಿಡುತ್ತಿದ್ದರು. ಅದಕ್ಕಾಗಿಯೇ ಸಿಬ್ಬಂದಿಗಳನ್ನು ನೇಮಿಸಿದ್ದರಲ್ಲದೆ, ರಾತ್ರಿ ಪಾಳಿಯಲ್ಲಿ ತಾನೇ ಸ್ವತಃ ಜನರ ಸುಖ ದುಃಖಗಳನ್ನು ಅರಿಯಲೆಂದು ಒಬ್ಬರನ್ನು ಜೊತೆಗೂಡಿಸಿ ಹೊರಟು ಬಿಡುತ್ತಿದ್ದರು.



ಅದೊಂದು ದಿನ ರಾತ್ರಿ, ಇಡೀ ಊರಿಗೆ ಊರೇ ನಿಶ್ಯಬ್ದವಾಗಿದೆ. ಜನರು ಶಾಂತ ನಿದ್ರೆಯಲ್ಲಿ ಮುಳುಗಿದ್ದಾರೆ. ಹಝ್ರತ್ ಉಮರ್ ತನ್ನ ಜೊತೆ ಅಸ್ಲಮ್ ಅವರನ್ನು ಜೊತೆಗೂಡಿಸಿಕೊಂಡು ಅರೇಬಿಯಾ ಮರುಭೂಮಿಯ ಪ್ರತಿಯೊಂದು ಗುಡಿಸಲುಗಳ ಹಾದಿಯಾಗಿ ಸಾಗುತ್ತಲಿದ್ದಾರೆ. ಹೌದು, ರಾಜಠೀವಿಯಲ್ಲಿ ಮೆರೆಯಬೇಕಿದ್ದ, ರಾಜಾತಿಥ್ಯವನ್ನುಂಡು ಮಲಗಬೇಕಾಗಿದ್ದ ಸಮಯವದು. ಇಲ್ಲ ತನ್ನ ಎಂದಿನ ದಿನಚರಿಯಂತೆ ಇದು ನಡೆಯಲೇಬೇಕು. ಪ್ರಜೆಗಳೆಲ್ಲರೂ ಉಮರ್ ನ ಆಡಳಿತದಲ್ಲಿ ಸುಖ ನಿದ್ರೆ ಅನುಭವಿಸಿದರೆ ಮಾತ್ರ ತನಗೂ ನಿದ್ರಿಸಲು ಸಾಧ್ಯ. ಹಾಗಾಗಿ ಉಮರ್ ಖಲೀಫರ ವೇಷ ಕಳಚಿಟ್ಟು ಒಬ್ಬ ಸಾಮಾನ್ಯನಂತೆ ಈಗ ಹೊರಟಿದ್ದಾರೆ.

ಅವರಿಬ್ಬರೂ ಈಗ ಮದೀನದ ಪ್ರ್ಯಾಂತ್ಯ ಪ್ರದೇಶವನ್ನು ತಲುಪಿದ್ದಾರೆ. ನಡೆಯುತ್ತಿದ್ದಂತೆಯೇ ದೂರದ ಒಂದು ಗುಡಿಸಲಿನಿಂದ ಪುಟ್ಟ ಕಂದಮ್ಮಗಳ ಅಳು ಕೇಳಿ ಬರುತ್ತಿದೆ. ಗುಡಿಸಲಿಗೆ ಹತ್ತಿರವಾದಂತೆ ಅಳು ಇನ್ನಷ್ಟು ಜೋರಾಗಿ ಕೇಳಿ ಬಂತು. ಹತ್ತಿರ ಧಾವಿಸಿ ನೋಡಿದಾಗ ಹೆಂಗಸೊಬ್ಬಳು ತನ್ನ ಮಕ್ಕಳನ್ನು ಸುತ್ತಲೂ ಕೂರಿಸಿ, ಒಲೆಯಲ್ಲಿಟ್ಟ ಪಾತ್ರೆಗೆ ಸೌಟು ಹಿಡಿದು ಕೈಯಾಡಿಸುತ್ತಿದ್ದಾಳೆ. ಒಲೆಯ ಮೇಲಿನ ಪಾತ್ರದಲ್ಲಿನ ನೀರು ಕೊತಕೊತನೆ ಕುದಿಯುತ್ತಿತ್ತು. ಆಹಾರವೇನೋ ಅಂದುಕೊಂಡ ಉಮರ್, ಸೂಕ್ಷವಾಗಿ ನೋಡಿದಾಗ ಆದೃಶ್ಯವನ್ನು ನಂಬಲಾಗದೆ ಹೋದರು. ಹೌದು, ಬರೀ ಕಲ್ಲುಗಳು ಅವು.! ಕುದಿಯುವ ನೀರಿನಲ್ಲಿ ಅತ್ತಿಂದಿತ್ತ ಹೊರಳಾಡುತ್ತಿವೆ. ಮಕ್ಕಳ ರೋದನ ಮುಗಿಲು ಮುಟ್ಟುವಂತಿತ್ತು. ಇನ್ನೇನು ನಮಗೆಲ್ಲರಿಗೂ ಅಮ್ಮ ಉಣಬಡಿಸುವಳೆಂಬ ನಿರೀಕ್ಷೆ ಮಾತ್ರ ಕಣ್ಣೀರಿನಲ್ಲಿ ತೋಯ್ದ ಆ ಮುದ್ದು ಕಣ್ಣುಗಳಲ್ಲಿ. ಉಮರ್ ಮೂಕ ವಿಸ್ಮಿತರಾದರು. ತಕ್ಷಣ ಗುಡಿಸಲೊಳಗೆ ಹೋದರು. ಮಹಿಳೆಯನ್ನು ಯಾಕೆ ಈ ರೀತಿ ಮಾಡುತ್ತಿದ್ದೀರಿ ಅಂತ ವಿಚಾರಿಸಿದರು. ಆಗ " ಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ. ನನ್ನ ಬಳಿಯೋ ಆಹಾರ ತಯಾರಿಸಲು ಒಂದು ಕಾಳು ಧಾನ್ಯವೂ ಇಲ್ಲ. ಹಾಗಾಗಿ, ಅವರು ಅಳುತ್ತಲೇ ನಿದ್ದೆಗೆ ಜಾರುವ ತನಕ ಆಹಾರ ಬೇಯಿಸುವಂತೆ ಒಲೆಯಲ್ಲಿ ಕಲ್ಲುಗಳನ್ನು ಹಾಕಿ ಕೈಯಾಡಿಸುವಂತೆ ಮಾಡುತ್ತಿರುತ್ತೇನೆ. ನನ್ನ ಮಕ್ಕಳನ್ನು ಸಮಾಧಾನ ಪಡಿಸಲು ಬೇರೆ ದಾರಿಯಿರಲಿಲ್ಲ ಎಂದು ಆ ಮಹಿಳೆ ಹೇಳಿದಾಗ, ಅವರನ್ನು ಸಾಂತ್ವನ ಪಡಿಸಿ, ಅಸ್ಲಮ್ ಅವರನ್ನು ಕರೆದುಕೊಂಡು ನೇರ ಬೈತುಲ್ ಮಾಲ್ ನಿಂದ ಆಹಾರಕ್ಕೆ ಬೇಕಾದ ಸಾಮಗ್ರಿಗಳನ್ನು ಹೊತ್ತು ತರುತ್ತಾರೆ. ನಂತರ ಖಲೀಫ ಉಮರ್ ತನ್ನ ಕೈಯಾರೆ ಅವರಿಗೆ ರೊಟ್ಟಿ ತಯಾರಿಸಿ ಉಣಬಡಿಸುತ್ತಾರೆ. ಆ ಮಹಿಳೆ ಹಾಗೂ ಮಕ್ಕಳು ಸಂತೃಪ್ತರು ಎಂದೆನಿಸಿದಾಗಲೇ, ಮರುದಿನ ಖಲೀಫರ ಸನ್ನಿಧಿಗೆ ಬಂದು ತಮ್ಮ ಬೇಡಿಕೆಗಳನ್ನು ತಿಳಿಸಿ ಎನ್ನುತ್ತಾ ಖಲೀಫ ಉಮರ್ ಅಲ್ಲಿಂದ ಹೊರಡುವುದು. ಆ ಮಹಿಳೆ ಮರುದಿನ ಖಲೀಫರ ಸನ್ನಿಧಿಗೆ ತಲುಪುವ ವರೆಗೂ ನಿನ್ನೆಯ ರಾತ್ರಿ ನಮಗೆ ಆಹಾರ ನೀಡಿದ್ದು ಹಝ್ರತ್ ಉಮರ್ ಅವರೆಂದು ತಿಳಿದಿರಲಿಲ್ಲ.

ನಿಜಕ್ಕೂ ಈ ಒಂದು ಘಟನೆ ಜಗತ್ತಿನ ಎಲ್ಲಾ ಆಡಳಿತಗಾರಿಗೂ ಒಬ್ಬ ನಿಷ್ಟಾವಂತ ಆಡಳಿತಕಾರ ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಕಳೆದ ದಿನ ಕೆನ್ಯಾದ ಮೊಂಬಾಸ ಎಂಬಲ್ಲಿ ನಡೆದ ಮನಕಲಕುವ ಒಂದು ಘಟನೆಯ, ಖಲೀಫ ಉಮರ್ ಆಡಳಿತದ ಇದೇ ಘಟನೆಯನ್ನು ಕಣ್ಣ ಮುಂದೆ ಕಟ್ಟಿಕೊಡುವಂತೆ ಮಾಡಿತು. ಎಂಟು ಮಕ್ಕಳ ವಿಧವೆ ತಾಯೊಯೊಬ್ಬರು ಆಹಾರವಿಲ್ಲದೆ ಕಲ್ಲುಗಳನ್ನು ಬೇಯಿಸಿದ ದೃಶ್ಯಗಳು ಟ್ವಿಟರ್ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಕೆನ್ಯಾದ ನಾಗರಿಕರು ಆ ಮಹಿಳೆಯ ನೆರವಿಗೆ ಬಂದಿದ್ದಾರೆ.
*******************************************************************************





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...