ವಿಷಯಕ್ಕೆ ಹೋಗಿ

ಕೋವಿಡ್ ಕಾಲದ ಓದು : 'ಅಲೆಮಾರಿಯ ಅಂಡಮಾನ್' ಹಾಗೂ 'ಮಹಾನದಿ ನೈಲ್'

ಕಳೆದ ಕೆಲವು ದಿನಗಳ ಹಿಂದೆ ಅಂಡಮಾನ್ ಸೆಲ್ಲುಲರ್ ಜೈಲಿನ ಬಗ್ಗೆ ಕೆಲವೊಂದು ಚರ್ಚೆಗಳು ನಡೆಯುತ್ತಿರೋದನ್ನ ನೋಡಿದಾಗ, ಗೆಳೆಯನೊಬ್ಬನಲ್ಲಿ ಈ ಬಗ್ಗೆ ತಿಳಿಸುತ್ತಾ, ನಮಗೂ ಅಂಡಮಾನ್ ಗೆ ಒಮ್ಮೆ ಹೋಗಬೇಕಿತ್ತು ಅಂತ ಹೇಳಿದ್ದೆ. ಅವನೂ ಕೂಢಾ ಹೌದಂದಿದ್ದ. ಕಳೆದ ದಿನ ಅಂಡಮಾನ್ ಬಗ್ಗೆ ಓದಿಕೊಳ್ಳಲು ಕನ್ನಡದಲ್ಲಿ ಪುಸ್ತಕಗಳು ಸಿಗುಬಹುದಾ ಅಂತ ವೆಬ್ ತಾಣಗಳೊಳಗೆ ಜಾಲಾಡಿದ್ದೆ. ಹಾಗೆ ಸಿಕ್ಕ ಕೃತಿಗಳಲ್ಲಿ ಓದಬೇಕು ಅಂತ ಅನ್ನಿಸಿದ್ದು ಪೂರ್ಣಚಂದ್ರ ತೇಜಸ್ವಿ ಅವರ ಅಲೆಮಾರಿಯ ಅಂಡಮಾನ್. ಈ ಪುಸ್ತಕದ ವಿಶೇಷತೆ ಅಂದರೆ, ಇದರಲ್ಲಿ ಎರಡು ಕೃತಿಗಳಿವೆ. ಒಂದು ಅಂಡಮಾನ್ ಪ್ರವಾಸ ಕಥನವಾದರೆ, ಮಗದೊಂದು ನೈಲ್ ನದಿಯ ಬಗೆಗಿನ ಅಧ್ಯಯನ ಲೇಖನಗಳ ಸಂಗ್ರಹ. ನಿಜಕ್ಕೂ ಎರಡೂ ಕೂಡಾ ಜ್ಞಾನದ ಅದ್ಭುತ ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ.


ಅಂಡಮಾನ್ ಬಗ್ಗೆ ಹೇಳುವಾಗ, ಅಲ್ಲಿನ ಸಮುದ್ರಗಳಿಂದ ತೀರಕ್ಕಪ್ಪಳಿಸುವ ಹೆದ್ದೆರೆಗಳ ಭಯಾಜನಕ ವಾತಾವರಣದ ಬಗ್ಗೆ ಹೇಳುತ್ತಾ, ಲೇಖಕರು ತನ್ನ ಜೊತೆಗಿದ್ದ ತಂಡದೊಂದಿಗೆ ಅಲ್ಲಿ ಸಂದರ್ಶಿಸಿದ ಪ್ರತಿಯೊಂದು ಜಾಗವನ್ನೂ ಅದರ ವೈಶಿಷ್ಟ್ಯವನ್ನೂ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ನಾನು ಯಾವ ಜೈಲಿನ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದೆನೋ, ಆ ಜೈಲಿಗೆ ತನ್ನ ತಂಡದವರೂ ಹೋದರೂ, ತಾನು ಹೋಗದಿದ್ದುದಕ್ಕೋ, ಅಥವಾ ಬೇರ್ಯಾವುದೋ ಕಾರಣಕ್ಕೇನೋ ತಿಳಿಯದು ಆ ಬಗ್ಗೆ ಅಲ್ಲಲ್ಲಿ ಅಲ್ಪ ಸ್ವಲ್ಪ ನೆನಪಿಸಿದ್ದು ಬಿಟ್ಟರೆ, ಸ್ಪಷ್ಟವಾಗಿ ಮಾಹಿತಿಗಳನ್ನು ನೀಡಿಲ್ಲ, ಆದರೇನಂತೆ, ನನಗೇನೂ ಅಲ್ಪವೂ ನಿರಾಶೆಯಾಗಲಿಲ್ಲ, ಕಾರಣವೇನೆಂದರೆ, ಅಷ್ಟೊಂದು ರೀತಿಯ ಭೀತಿಜನಕ, ಸಂತೋಷದಾಯಕ, ಸ್ವಾರಸ್ಯಕರ ಸಂಗತಿಗಳು ಅವರ ಪ್ರವಾಸದಲ್ಲಿದ್ದುವು. ಹಾಗಾಗಿ ಪುಟಗಳಿನ್ನೂರು ಸರಿದುದೇ ತಿಳಿಯಲಿಲ್ಲ.


ಅಂಡಮಾನ್ ನಲ್ಲಿ ಹವಳದ ಕಲ್ಲುಗಳ ಬಗ್ಗೆ, ಹವಳದಂತೆ ಹೊಳೆಯುವ ಜೀವಿಗಳ ಬಗ್ಗೆ, ಅಲ್ಲಿನ ಸುಂದರಿಗಳಾದ ಮೀನುಗಳ ಬಗ್ಗೆ ತುಂಬಾ ಮಾಹಿತಿಗಳಿವೆ. ಅಲ್ಲಿನ ದಟ್ಟಾರಣ್ಯಗಳು, ನೀಲಿ ಬಣ್ಣದ ನೀರು ಇರುವಂತೆ ಕಾಣಿಸುವ ಸಮುದ್ರದ ಸೌಂದರ್ಯ, ಅದರ ಹತ್ತಿರ ಹೋದಂತೆಲ್ಲಾ ತಳಭಾಗದ ಜಲಚರಗಳನ್ನೊಳಗೊಂಡ ಸಕಲ ವಸ್ತುಗಳೂ ಗೋಚರಿಸುವ ಅದರ ವಿಶೇಷತೆಗಳು, ಮನೋಹರ ದೃಶ್ಯಗಳು, ಹಡಗು ಯಾನದಲ್ಲಿ ಉಂಟಾದ ರಸವತ್ತಾದ ಅನುಭವಗಳು, ಯಾತನೆಗಳು, ಗಾಳ ಹಾಕಿ ಮೀನು ಹಿಡಿಯಲು ಹೋದಾಗಲೆಲ್ಲಾ ಅವರನ್ನು ಕಾಡುತ್ತಿದ್ದ ನಿರಾಶೆ, ಅಲ್ಲಿರುವ ಮಲಯಾಳಿ, ಕನ್ನಡಿಗರೊಡನೆ ಆದ ಪರಿಚಯಗಳು ಎಲ್ಲವೂ ಒಂದು ರೀತಿಯ ಮೋಹಕ ಅನುಭವಗಳನ್ನು ಕಟ್ಟಿಕೊಡುತ್ತದೆ. ಅದರಲ್ಲೂ ಪ್ರತಿಯೊಂದು ಸ್ಥಳಗಳ ಬಗ್ಗೆ ವಿವರಿಸುವಾಗಲೂ ಆ ಸ್ಥಳದ ಪೂರ್ವೇತಿಹಾಸವನ್ನು ಕೆದಕುವುದು ತೇಜಸ್ವಿ ಅವರ ಬರಹದುದ್ದಕ್ಕೂ ಕಾಣಬಹುದಾಗಿದೆ..


ಮಹಾನದಿ ನೈಲ್:

ಅಂಡಮಾನ್ ಗಿಂತಲೂ ಮಹಾನದಿ ನೈಲ್ ಬಗ್ಗೆ ಬರೆದ ಅಧ್ಯಯನ ಲೇಖನಗಳು ಪ್ರತಿಯೊಂದೂ ನೈಲ್ ನದಿಯ ಮೂಲವನ್ನು ಹುಡುಕುವಲ್ಲಿ ವರ್ಷಗಳ ಕಾಲ ಅವಿರತ ಶ್ರಮವಹಿಸಿದ ಸ್ಟೀಕೆ, ಸ್ಟಾನ್ಲಿ, ಬೇಕರ್, ಲಿವಿಂಗ್ ಸ್ಟನ್ ಮುಂತಾದವರು, ಅದರಲ್ಲೂ, ಸ್ಟಾನ್ಲಿ ಎಂಬ ಪತ್ರಕರ್ತ ತನ್ನ ಜೀವನವನ್ನೇ ನದಿಯ ಮೂಲ ಹುಡುಕುವುದಕ್ಕಾಗಿ ವಿನಿಯೋಗಿಸಿದ ಚಾರಿತ್ರಿಕ ಘಟನೆಗಳನ್ನು ತಿಳಿಯಲು ಸಾಧ್ಯವಾಯಿತು. 


ನನಗೆ ನೈಲ್ ನದಿಯ ಬಗ್ಗೆ ಇಸ್ಲಾಮಿಕ್ ಇತಿಹಾಸದಲ್ಲಿ ಹಝ್ರತ್ ಮೂಸಾ ನೆಬಿ ಅವರ ಬಾಲ್ಯದ ಘಟನೆಗಳಿಗೆ ಸಾಕ್ಷಿಯಾಗಿ ನಿಂತ ಕೆಲವೊಂದು ಘಟನೆಗಳ ಮತ್ತು ಉಮರ್ ಖಲೀಫರ ಕಾಲದಲ್ಲಿ ನಡೆದ ಒಂದು ವಿಚಿತ್ರ ಘಟನೆಯ ಬಗ್ಗೆ ಕೇಳಿ ತಿಳಿದಿದ್ದಲ್ಲದೆ, ನೈಲ್ ಮೂಲವನ್ನು ಅನ್ವೇಷಿಸಿ ಹೊರಟ ಯುರೋಪಿಯನ್ನರ ಪೂರ್ವೇತಿಹಾಸವನ್ನು ತಿಳಿಯೋದು ಈ ಕೃತಿಯಿಂದಲೇ. ಅಷ್ಟಕ್ಕೂ ನೈಲ್ ನದಿ ಅದೊಂದು ಅದ್ಭುತಗಳ ಮಹಾ ಪ್ರಪಂಚ ಅನ್ನೋದು ಬಹಳ ಸ್ಪಷ್ಟ. ಅದರ ಬಗ್ಗೆ ಆಂಗ್ಲ, ಅರೆಬಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಕೃತಿಗಳು ಅದೆಷ್ಟೋ,,ಆ ಬಗ್ಗೆ ಕುತೂಹಲಗಳನ್ನು ಕೊಟ್ಟ ಮಹಾನದಿನೈಲ್ ಕೃತಿಯನ್ನು ಬರೆದ ತೇಜಸ್ವಿ ಎಂಬ ಮಹಾ ಚೇತನಕ್ಕೆ ಒಂದು ಬಿಗ್ ಸೆಲ್ಯೂಟ್....


-ನಿಝಾಮ್ ಅನ್ಸಾರಿ ಕಲ್ಲಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರಂಝಾನ್ ನೀಡುವ ಒಳಿತಿನ ಸಂದೇಶ...

-ನಿಝಾಮ್ ಅನ್ಸಾರಿ ಮತ್ತೆ ರಂಝಾನ್ ತಿಂಗಳ ಆಗಮನವಾಗಿದೆ. ಪ್ರತಿ ವರ್ಷವೂ ರಂಝಾನ್ ಬಗ್ಗೆ ಬರೆಯುವಾಗ ಅದರ ಶ್ರೇಷ್ಟತೆ, ವ್ರತಾನುಷ್ಟಾನದ ಪ್ರಾಧಾನ್ಯತೆಯನ್ನೇ ಹೆಚ್ಚಿನವರೂ ಬರೆಯುತ್ತಾರೆ. ಅದನ್ನೇ ಮಸೀದಿಗಳಲ್ಲೂ ಹೇಳುವುದಿದೆ. ಒಳ್ಳೆಯದೇ. ಕಾರಣ ಆಧುನಿಕ ಜನರು ಧರ್ಮದ ಪ್ರತಿಯೊಂದು ವಿಷಯಗಳಲ್ಲೂ ಸಡಿಲಿಕೆ ಬಯಸುತ್ತಾರೆ. ಅಂದರೆ ಅವರವರ ಜೀವನಕ್ರಮಗಳಿಗನುಸಾರವಾಗಿ ಧರ್ಮದ ನಿಯಮಗಳನ್ನು ಗಾಳಿಗೆ ತೂರುವಂತಹ ಕಾರ್ಯಗಳು ಎಲ್ಲಾ ಕಡೆ ನಡೆಯುತ್ತಲಿದೆ. ಹಾಗಿರುವಾಗ ರಂಝಾನ್ ವ್ರತಾಚರಣೆಯ ಮಹತ್ವವನ್ನು ಪ್ರತಿ ಬಾರಿಯೂ ಪ್ರಭಾಷಣ ವೇದಿಕೆಗಳಲ್ಲಿ, ಮಸೀದಿಗಳಲ್ಲಿ ಜನ ಸಾಮಾನ್ಯರಿಗೆ ನೆನಪಿಸುತ್ತಲಿರುವುದು ಸ್ವಾಗತಾರ್ಹವಾದುದು. ಮತ್ತು ಪ್ರಯೋಜನಕಾರಿಯೂ ಕೂಡಾ. ಯಾಕೆ ಈ ರೀತಿ ಬರೆದೆ ಅಂತ ಕೇಳಿದರೆ, ಇತ್ತೀಚೆಗೆ ವಾಟ್ಸಾಪ್ ನೊಳಗೆ ಕಣ್ಣಾಡಿಸಿದಾಗ ಕಂಡ ಕೆಲವೊಂದು ಸಂದೇಶಗಳು ಧರ್ಮದ ಬಗ್ಗೆ ಕೀಳರಿಮೆಯ ಭಾವ ತೋರುವವರಿಗೆ ತಕ್ಕ ಉತ್ತರ ನೀಡುವಂತಿತ್ತು. ಬಡ ಕುಟುಂಬಕ್ಕೆ ಮನೆ ಕಟ್ಟುವ ಸಹಾಯಾರ್ಥ ಕಲೆಕ್ಷನ್, ರಂಝಾನ್ ನಂತರದ ಬಡ ಹೆಣ್ಮಕ್ಕಳ ಮದುವೆಗಾಗಿ, ಮುಅಲ್ಲಿಂಗಳಿಗಾಗಿ ಹೀಗೇ ಹಲವು ರೀತಿಯಲ್ಲಿ ಯುವ-ವಯಸ್ಕರು ಸೇರಿ ಸಮುದಾಯದೊಂದಿಗಿನ ಸಾಮಾಜಿಕ ಕಾಳಜಿಗಾಗಿ ರಂಝಾನ್ ಅನ್ನು ಉಪಯೋಗಿಸುತ್ತಿದ್ದಾರೆನ್ನುವಾಗ ಧರ್ಮದ ಮನದಲ್ಲಿ ಅಭಿಮಾನ ಮೂಡುತ್ತಿದೆ. ಬುರ್ಖಾದ ವಿಚಾರದಲ್ಲಿ ಬಲತ್ಕಾರ ಮಾಡಲಾಗುತ್ತದೆ ಎಂದು ಆರೋಪಿಸುತ್ತಿರುವಾಗ, ಆ ವಾದವನ್ನು ವಿರ...

ನಾನುಗೌರಿ ವೆಬ್ ನಲ್ಲಿ ಪ್ರಕಟಗೊಂಡ ಬರಹಗಳು..ಓದಲು ಈ ಲಿಂಕ್ ಉಪಯೋಗಿಸಿ

-ನಿಝಾಮ್ ಅನ್ಸಾರಿ ಭಾರತದ ಉನ್ನತ ಶಿಕ್ಷಣದ ಮಹಾನ್‌ ಆಶಯಕ್ಕೆ ಎಳ್ಳುನೀರು ಬಿಡುತ್ತಿರುವ ಪ್ರಭುತ್ವ… http://naanugauri.com/indian-higher-education-shrinking-down- **************************************************************** ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ http://naanugauri.com/lockdown-story-of-labour/ via @Naanu gauri ***************************************************************** ಪೌರತ್ವ ವಸೂಲಿ – ನಾಝಿ ಜರ್ಮನಿಯಿಂದ ಕಲಿಯಬೇಕಾದುದು… http://naanugauri.com/citizen-amendment-act-same-thing-happen-in-german-80-years-back- ****************************************************************** ಪ್ಲೇಗ್ ಹಾಗೂ ಕೋವಿಡ್ 19 ನಡುವೆ ಕೆಲವು ಹೋಲಿಕೆಗಳು http://naanugauri.com/covid-19-and-bubonic-plague-this-lead-to-renaissance/ via @Naanu gauri

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...