'ಏರೋಪ್ಲೇನ್ ಚಿಟ್ಟೆ' ಪೂರ್ಣಚಂದ್ರ ತೇಜಸ್ವಿ ಬರೆದ ನಮ್ಮ ಪರಿಸರದ ಜೀವಜಾಲಗಳ ಕುರಿತು ಬರೆದಿರುವ ಕುತೂಹಲಕಾರಿ ಅಂಶಗಳನ್ನೊಳಗೊಂಡ ಕೃತಿ. ನಮ್ಮ ಸುತ್ತಮುತ್ತಲಲ್ಲಿ ಕಂಡು ಬರುವ ಒಂಟಿಹುಳು, ಏರೋಪ್ಲೇನ್ ಚಿಟ್ಟೆ, ಬಾವಲಿ, ಕೀಟ ಶಿಲ್ಪಿಗಳು, ಹಾವು ಮೀನು, ಹಲ್ಲಿ, ಮಲಬಾರ್ ಟ್ರೋಜನ್, ಜೇಡ ಹೀಗೇ ಹಲವು ಜೀವಿಗಳ ಕುರಿತಾದ ವಿಸ್ಮಯ ಪ್ರಪಂಚವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಒಂಟಿ ಹುಳು, ಮರದ ಎಲೆಯನ್ನು ಬೀಡಿಯಾಕಾರದಲ್ಲಿ ಸುತ್ತಿ, ಅದರಲ್ಲಿ ಮೊಟ್ಟೆ ಇಟ್ಟು ಭೂಮಿಗೆ ಬಿಸಾಡುವ ಆ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ತೇಜಸ್ವಿಯವರು ಸೂಕ್ಷ್ಮವಾಗಿ ಗಮನಿಸಿ, ಅದರ ಎಲ್ಲಾ ಆಯಾಮಗಳ ಕುರಿತೂ ವಿವರಿಸಿದ್ದಾರೆ. ಕೃತಿಯ ಶೀರ್ಷಿಕೆಯಂತೆಯೇ ಏರೋಪ್ಲೇನ್ ಚಿಟ್ಟೆಯ ಬಗ್ಗೆಯೂ ಸಾಕಷ್ಟು ಮಾಹಿತಿಗಳಿವೆ. ಅವೆಲ್ಲವುಗಳಿಗಿಂತಲೂ ನನಗೆ ಬಹಳ ಅಚ್ಚರಿ ಮೂಡಿಸಿದುದೆಂದರೆ ಬಾವಲಿ ಎಂಬ ಜೀವಿಯ ಅದ್ಭುತ ಜಗತ್ತು.. ಬಾವಲಿಯ ಬಗ್ಗೆ ಅವರು ಬಾಕಿಯುಳಿಸಿದ ವಿಷಯಗಳೇ ಇಲ್ಲವೆಂದು ಅನಿಸುವಷ್ಟರ ಮಟ್ಟಿಗೆ, ಜಾಗತಿಕ ಮಟ್ಟದಲ್ಲಿ ವಿಜ್ಞಾನಿಗಳು, ಪ್ರಾಣಿಶಾಸ್ತ್ರ ಪರಿಣತರು ಬಾವಲಿಗಳ ಶ್ರವಣಾತೀತ ಶಬ್ದಗಳನ್ನು ಆಲಿಸುವ ಸಾಮರ್ಥ್ಯವನ್ನು ಕಂಡು ಹಿಡಿಯುವ ಪ್ರಯತ್ನದಲ್ಲಿ ಅವರು ಮಾಡಿದಂತಹ ಸಂಶೋಧನೆಗಳು, ಅಧ್ಯಯನಗಳು ಹಂತ ಹಂತವಾಗಿ ತಿಳಿಯುವಾಗ ನಾವೆಲ್ಲಾ ಸಾಮಾನ್ಯವೆಂದೇ ಕಾಣುವ, ಒಂದು ಜೀವಿಯಲ್ಲಿ ಇಷ್ಟೊಂದು ಕೌತುಕ, ಕುತೂಹಲಗಳಿಗೆ ಎಡೆಮಾಡಿಕೊಡುವಂತಹ ವಿಷಯಗಳಿವೆ ಅ...
ಪಥಿಕನ ಬಗ್ಗೆ ಸಿಂಪಲ್ಲಾಗಿ : ನಿಝಾಮ್ ಅನ್ಸಾರಿ - ತಂ - ದಿ. ಇಸ್ಮಾಯಿಲ್ ಯು.ಕೆ, ತಾ -ಝುಬೈದಾ. ಕಲ್ಲಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಕಾಸರಗೋಡು ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ. ಸಮಾಜಶಾಸ್ತ್ರದಲ್ಲಿ ಬಿ.ಎ ಹಾಗೂ ಅರಬಿಕ್ ನಲ್ಲಿ 'ಅನ್ಸಾರಿ' ಪದವೀಧರ, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.