{ತಿಂಗಳುಗಳ ಹಿಂದೆ ಸೆಮಿನಾರೊಂದರಲ್ಲಿ ಭಾಗವಹಿಸಲು ಶಿವಮೊಗ್ಗ ತಲುಪಿದ್ದೆ. ಜೊತೆಗೆ ನಾಲ್ಕೈದು ಗೆಳೆಯರಿದ್ದರು. ಸೆಮಿನಾರ್ ಮುಗಿಸಿ ಹಿಂತಿರುಗುವಾಗ ಪುಸ್ತಕ ಪ್ರೇಮಿ ಗೆಳೆಯನೊಬ್ಬನ ಜೊತೆ ಅಲ್ಲೇ ಬಸ್ ಸ್ಟಾಂಡ್ ಹತ್ತಿರದ ಒಂದು ಪುಸ್ತಕದಂಗಡಿಗೆ ಹೋದೆವು. ಆತನಿಗೆ ಮರುಭೂಮಿಯ ಹೂವು ಪುಸ್ತಕ ಬೇಕೆಂದಿದ್ದ. ನಾನು ಯಯಾತಿ ಬೇಕೆಂದೆ. ಅಲ್ಲಿಂದ ಹೊರಡುವಾಗ ಅವತ್ತೇ ಓದಿ ಮುಗಿಸಬೇಕು ಅಂದು ಕೊಂಡ ನನಗೆ ಓದುಭಾಗ್ಯ ದೊರಕಿದ್ದು ಮಾತ್ರ ಇಂದು..ಏನೇ ಆಗಲಿ..ಕೊನೆಗೂ ಈ ಕೋವಿಡ್ ದಿನಗಳು ಕೊನೆಗೂ ಕಾರ್ನಾಡರನ್ನು ಓದಿಸುವಂತೆ ಮಾಡಿದೆ...} ಅಂದ ಹಾಗೆ ಯಯಾತಿ ಗಿರೀಶ ಕಾರ್ನಾಡ ಅವರ ೧೯೬೧ ರಲ್ಲಿ ಪ್ರಕಟವಾದ ಮೊದಲ ನಾಟಕ. ಕೀರ್ತಿನಾಥ ಕುರ್ತಕೋಟಿ ಅವರು ಮುನ್ನುಡಿ, ಹಾಗೂ ಜಿ.ಎಸ್ ಅಮೂರ ಹಿನ್ನುಡಿ ಬರೆದಿದ್ದಾರೆ. ನಾಲ್ಕಂಕಗಳಿರುವ ಪ್ರಸ್ತುತ ನಾಟಕದಲ್ಲಿ ಪಾತ್ರಗಳಾಗಿ ದೇವಯಾನಿ, ಸ್ವರ್ಣಲತೆ, ಶರ್ಮಿಷ್ಠೆ, ಯಯಾತಿ, ಪುರು, ಚಿತ್ರಲೇಖೆ ಮುಂತಾದವರು ಬರುತ್ತಾರೆ. ಕುರ್ತಕೋಟಿ ಅವರು ಹೇಳಿರುವಂತೆ, ಈ ನಾಟಕದಲ್ಲಿ ಮನುಷ್ಯ ಸಾಹಸದ ದುರಂತ ಚಿತ್ರವೊಂದನ್ನು ರೂಪಿಸುವ ಹವಣಿಕೆಯು ಎದ್ದು ಕಾಣುತ್ತದೆ. ನಾಟಕದ ಆಧುನಿಕತೆಯ ಅಂಶವೆಂದೇ ಅದು, ಇಲ್ಲಿಯ ಪಾತ್ರಗಳೆಲ್ಲವೂ ಮನುಷ್ಯನ ಸಾಮಾನ್ಯ ಮಟ್ಟವನ್ನೂ ಮೀರುವ ಹಂಬಲವನ್ನಿಟ್ಟುಕೊಂಡವುಗಳು. ಆದರೆ ಮನುಷ್ಯನ ದೌರ್ಬಲ್ಯಗಳಿಂದಲೇ ಅವುಗಳ ಹಂಬಲ ಪೂರ್ಣಗೊಳ್ಳುವುದಿಲ್ಲ. ಯಯಾತಿ ಅಮರತ್ವದ ಆಕಾಂಕ್ಷೆ, ದೇವಯಾನಿಯ ಪ...
ಪಥಿಕನ ಬಗ್ಗೆ ಸಿಂಪಲ್ಲಾಗಿ : ನಿಝಾಮ್ ಅನ್ಸಾರಿ - ತಂ - ದಿ. ಇಸ್ಮಾಯಿಲ್ ಯು.ಕೆ, ತಾ -ಝುಬೈದಾ. ಕಲ್ಲಡ್ಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಕಾಸರಗೋಡು ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಲ್ಲಿ ಪದವಿ ವ್ಯಾಸಂಗ. ಸಮಾಜಶಾಸ್ತ್ರದಲ್ಲಿ ಬಿ.ಎ ಹಾಗೂ ಅರಬಿಕ್ ನಲ್ಲಿ 'ಅನ್ಸಾರಿ' ಪದವೀಧರ, ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ.