ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಿಳಾವಾದದ ನವ ಚಿಂತನೆಗಳು- -ನಿಝಾಮ್ ಅನ್ಸಾರಿ

ಹತ್ತೊಂಬತ್ತನೆಯ ಶತಮಾನದಲ್ಲಿ ಉದಯಿಸಿದ ಮಹಿಳಾ ವಿಮೋಚನೆಯ ಸಿದ್ಧಾಂತವು ಜಾಗತಿಕ ಮಟ್ಟದಲ್ಲಿ ಇಂದಿಗೂ ಚರ್ಚೆಗೊಳಗಾಗುತ್ತಲೇ ಇದೆ.ಫೆಮಿನಿಸಂ ಎನ್ನುವುದು ಸ್ತ್ರೀ ಸಮಾನತೆಯ ಹಕ್ಕುಗಳು ಮತ್ತು ನಿಯಮಗಳ ಸಂರಕ್ಷಣೆಯನ್ನು ಲಕ್ಷವಿರಿಸುವ ಒಂದು ಮುನ್ನಡೆಯಾಗಿದೆ.ಇದರ ಪ್ರಚಾರಕರ ಕರ್ತವ್ಯಪರವೂ,ಸಾಮಾಜಿಕವೂ,ಭೂಶಾಸ್ತ್ರಪರವೂ ಆದ ವಿಂಗಡನೆಯಿಂದಾಗಿ ಇದು ವಿಭಿನ್ನವಾಗಿ ವಿಶ್ಲೇಷಿಸಲ್ಪಡುತ್ತದೆ.ಅಂದರೆ ಮಹಿಳಾವಾದದ ಚಿಂತನಾ ಪದ್ಧತಿಯೂ ಪ್ರಾಯೋಗಿಕ ರೀತಿನೀತಿಗಳೂ ಎಲ್ಲಾ ಕಡೆ ಒಂದೇ ರೀತಿಯಾಗಿರಲಿಲ್ಲ.ಸಾಮಾನ್ಯವಾಗಿ ಎಲ್ಲಾ ಸಾಮಾಜಿಕ ಮುನ್ನಡೆಗಳ ಹುಟ್ಟು ಮತ್ತು ಪರಿಣಾಮದ ಕುರಿತು ಸಹಜವಾಗಿ ಪ್ರಶ್ನೆಗಳು ಉದ್ಭವಿಸುವಂತೆಯೇ ಫೆಮಿನಿಸಂ ಕೂಡಾ ಇಂದು ವ್ಯಾಪಕವಾಗಿ ವಿಮರ್ಶಿಸಲ್ಪಡುತ್ತದೆ.ಸ್ತ್ರೀವಿಮೋಚನೆಯನ್ನು ಪಾಶ್ಚಾತ್ಯ ರೀತಿಶಾಸ್ತ್ರಗಳಿಗನುಗುಣವಾಗಿ ತುಲನೆಗೈದು ಚಿಂತಿಸುವವರ ಸಂಖ್ಯೆಯು ದೈನಂದಿನ ಹೆಚ್ಚಾಗುತ್ತಿದೆ. ಸ್ತ್ರೀವಾದದ ಮೂರು ತರಂಗಗಳು; ಸ್ತ್ರೀವಾದದ ಇತಿಹಾಸವನ್ನು ಮೂರು ತರಂಗಗಳಾಗಿ ವಿಭಾಗಿಸಬಹುದು.ಈ ಮೂರೂ ತರಂಗಗಳು ಒಂದೇ ಆಶಯದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತದೆ.ಹತ್ತೊಂಬತನೆಯ ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಘಟ್ಟದಲ್ಲೇ ಆರಂಭಗೊಂಡ ಒಂದನೆಯ ತರಂಗವು ಮಹಿಳೆಯರ ನಿಯಮ ಸಂರಕ್ಷಣೆ,ವಿವಾಹ,ಶಿಶುಪಾಲನೆ,ಆಸ್ತಿ ಹಕ್ಕು ಎಂಬಿತ್ಯಾದಿಗಳನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಿತ್ತು. 1848 ರಲ್ಲಿ ನ್ಯೂಯಾರ್ಕಿನ ಸೆನೆಕಾ ಫಾಲ್ಸ್‍ನಲ್...

'ಮ್ಯೂಸಿಕಲಿ': ನರಕದ ಭಯವಿರಲಿ -'ಟಿಕ್ ಟಾಕ್' ಮೋಡಿಗೆ ಬಲಿಯಾಗುತ್ತಿರುವ ಹದಿಹರೆಯದ ಮುಸ್ಲಿಂ ತರುಣಿಯರು'

✒-ನಿಝಾಮ್ ಅನ್ಸಾರಿ ಪ್ರಪಂಚವು ಹಂತ ಹಂತವಾಗಿ ಅಭಿವೃದ್ಧಿಯ ಕಡೆಗೆ ದಾಪುಗಾಲಿರಿಸುತ್ತಿದೆ. ದಿನ ಕಳೆದಂತೆ ವಿಜ್ಞಾನ ತಂತ್ರಜ್ಞಾನ ವಲಯಗಳಲ್ಲಿ ಕ್ಷಿಪ್ರಗತಿಯ ಬದಲಾವಣೆಯನ್ನು ಕಾಣುತ್ತಿದ್ದೇವೆ. ನಿನ್ನೆ ಹೊಸತೆನಿಸಿದ್ದೆಲ್ಲಾ ಇಂದಿಗೆ ಹಳೆಯದಾಗುತ್ತಿದೆ. ಹಳೆಯ ಕಾಲದಲ್ಲಿ ಶಾಲೆಯಿಂದ ಕೊಂಚ ಬಿಡುವು ಸಿಕ್ಕಾಗ ಕ್ರಿಕೆಟ್, ಚೆನ್ನಿದಾಂಡು ಎಂದೆಲ್ಲಾ ಹೇಳಿ ಮೈದಾನಕ್ಕಿಳಿಯೋದು, ಹುಣಸೇ ಮರ ಏರೋದು, ಮಾವಿನ ಮರಕ್ಕೆ ಕಲ್ಲೆಸೆಯೋದು ಸರ್ವೇಸಾಮಾನ್ಯವಾಗಿತ್ತು. ಆಧುನಿಕತೆಯ ಜಗತ್ತು ಮನುಷ್ಯನ ದೈಹಿಕ ಬಲಕ್ಕಾಗಿ ಜಿಮ್ ಕೋಚಿಂಗ್ ಸೆಂಟರ್ ಗಳನ್ನು ತೆರೆದರೆ, ಶರೀರವನ್ನು ಅಲ್ಪವೂ ಅಲುಗಾಡಿಸದೆ ಕೆಲಸ ಮಾಡಿ ವೇತನ ಪಡೆಯುವಲ್ಲಿ ಕಂಪೂಟರೀಕೃತ ನೂತನ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದೆ‌. ಅಂದರೆ ಹಾಯಾಗಿ ಕುಳಿತಲ್ಲೇ ತಿಂಡಿ ತಿನಿಸು, ಕೆಲಸ,ವ್ಯಾಯಾಮವೆಲ್ಲದರಲ್ಲೂ ಸುಧಾರಿಸಿಕೊಂಡು ಮುಂದೆ ಸಾಗಿದೆ. ಹಿಂದಿನ ಕಾಲದಂತೆ ಊರೂರು ಅಲೆದಾಡೋದು,ನೆರೆಕರೆ ಸಂಬಂಧಿಕರನ್ನು ಕಂಡು ಮಾತನಾಡೋದು, ಹರಟೆ ಹೊಡೆಯೋದು ಇಂದಿಗೆ ಹಳೆಯ ಆಚಾರಗಳಾಗಿ ಪರಿಗಣಿಸಲ್ಪಟ್ಟಿದೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯನನ್ನು ತಾಳಕ್ಕೆ ತಕ್ಕಂತೆ ಕುಣಿಸುವ ,ಮಾನಸಿಕವಾಗಿ ತನ್ನತ್ತ ಕೇಂದ್ರೀಕರಿಸುವಲ್ಲಿ ಅನುಸರಿಸುವ ಗುಲಾಮರಂತೆ ಕಂಡುಕೊಂಡಿದೆ‌. ನಾವು ಎಲ್ಲಾ ಸಮಯದಲ್ಲೂ ಬ್ಯುಸಿಯಾಗಿದ್ದರೆ ಮೊಬೈಲ್,ಕಂಪ್ಯೂಟರ್ ಗಳಂತಹ ತಂತ್ರಜ್ಞಾನಗಳು ನಮ್ಮನ್ನು ಗುಲಾಮರನ್ನಾಗಿಸಿದೆ ಎನ್ನಬಹು...

2018 ಕೊಟ್ಟು ಹೋದ ಅಂತರಾಳದಿ ಬೇರೂರಿದ ಅಳೆಯಲಾಗದಂತಹ ನೋವು...

#ಧಾರ್ಮಿಕತೆಯ ಪ್ರಪಂಚಕ್ಕೆ ಕೈಹಿಡಿದು ಮುನ್ನಡೆಸಿದ ನನ್ನ ಗುರುವರ್ಯರಾದ ಶೈಖುನಾ ಪಯ್ಯಕ್ಕಿ ಉಸ್ತಾದ್... #ಆಕಾಶದೆತ್ತರ ಸ್ನೇಹ ತೋರಿ ಬೆಳೆಸಿದ,ತಾನು‌ ನೋವುಂಡರೂ ಮಕ್ಕಳಿಗಾಗಿ ತನ್ನ ಆಯುಷ್ಯವ ಧಾರೆಯೆರೆದ ಪ್ರೀತಿಯ ಕಡಲಾದ ನನ್ನಪ್ಪ... ಈ ಇಬ್ಬರೂ ನನ್ನೊಂದಿಗಿಲ್ಲ...(ಅವರ ಆಶಯ ಆದರ್ಶಗಳಲ್ಲದೆ..) ಸೃಷ್ಟಿಕರ್ತನಾದ ಅಲ್ಲಾಹನು ಅವರ ಪರಲೋಕ ಜೀವನವನ್ನು ಸಮೃದ್ಧವಾಗಿಸಲಿ ಆಮೀನ್... ಕೊನೆಗೊಂದು ಮಾತು- ಪ್ಲೀಸ್ 2018..ದಯಮಾಡಿ ಬರಬೇಡ ಇನ್ನೊಮ್ಮೆ ಇಂತಹ ನೋವ ನೆನಪುಗಳನ್ನು ಕೊಡಲು...ಸಹಿಸಲಾಗದು ಈ ಬಡ ಜೀವಕ್ಕೆ..ಬಾಳ ಆಸರೆಯನ್ನು ನುಂಗಿ ಹಾಕಿದ ನೀನು ನನಗೆ ಕೊಟ್ಟಿರೋದು ಕರಾಳ ದಿನಗಳು ಮಾತ್ರ.. ಇವರಂತೆಯೇ ಅದೆಷ್ಟೋ ಪುಣ್ಯಾತ್ಮರ ವಿರಹವನ್ನೂ ಸಹಿಸಬೇಕಾಗಿ ಬಂತು...ಸೃಷ್ಟಿ ಕರ್ತನ ವಿಧಿಗೆ ತಲೆಬಾಗಲೇ ಬೇಕಲ್ವಾ...‌ಎಲ್ಲರಿಗೂ ಅಲ್ಲಾಹನು ಮೋಕ್ಷವನ್ನು ನೀಡಲಿ ಎಂದು ಪ್ರಾರ್ಥಿಸೋಣ... https://m.facebook.com/story.php?story_fbid=2337706293119565&id=100006406501585

#ಚಲಿಸುವ_ಮೋಡಗಳ_ಮಧ್ಯದಿ... ನೀವೂ ಓದಿ

ಯುವ ಲೇಖಕ,ಉದಯೋನ್ಮುಖ ಕವಿಯೂ ಆದ ಪ್ರಿಯ ಸ್ನೇಹಿತ ಶ್ರೀರಾಜ್ ಆಚಾರ್ಯ ರವರ ದ್ವಿತೀಯ ಕವನ ಸಂಕಲನ ನನ್ನ ಕೈಸೇರಿ ತಿಂಗಳುಗಳಾಯಿತು...ಸಮಯ ಸಿಕ್ಕಾಗ ಓದಬೇಕೆಂದುಕೊಂಡಿದ್ದೆ..ಇವತ್ತು ಬಿಡುವು ಸಿಕ್ಕಿತು.. ಅಂದ ಹಾಗೆ ಈ ಕೃತಿಯು 'ರಿಕ್ತ ನಕ್ಷತ್ರ'ವೆಂಬ ಕವನ ಸಂಕಲನದ ನಂತರ ಕವಿಲೋಕಕ್ಕೆ ಸಮರ್ಪಿಸಿದ ಶ್ರೀರಾಜ್ ರ ದ್ವಿತೀಯ ಕಾಣಿಕೆ... ಬದುಕಿನ ಆಯಾಚಿತ ಅಲಗುಗಳಲ್ಲಿ ಎದುರು ಬರುವ ಸಂತಸ,ಸಂದಿಗ್ಧ, ಸಂತಾಪ ಭರಿತ ಸನ್ನಿವೇಶಗಳನ್ನು ಕವಿ ಹೃದಯವು ಇಲ್ಲಿ ಹೃದಯಕ್ಕೆ ನಾಟುವಂತೆ,ಮನಮುಟ್ಟುವಂತೆ ಚಿತ್ರಿಸಿದ್ದಾರೆ.. ಸುತ್ತಮುತ್ತಲಿನ ಬಗ್ಗೆ ಗೊಡವೆಯೇ ಇಲ್ಲದೆ ಬದುಕು ಸಾಗಿಸುವಾಗ ಸ್ವಂತಿಕೆಗೋಸ್ಕರ ದ್ವೇಷ ಕಟ್ಟಿ ಅದರೊಳಗೆ ಸ್ನೇಹವನ್ನು ಹುಡುಕುವ ಮನುಜನ ಮನೋಸ್ಥಿತಿಗೆ ಮರುಗುವ ಕವಿ ಮನಸ್ಸು ಶ್ರೀರಾಜ್ ರವರದ್ದು....ಅದು ಕವನದ ಸಾಲುಗಳುದ್ದಕ್ಕೂ ಗೋಚರಿಸುತ್ತದೆ.... ಅಂತೂ ಅವರು ಹಚ್ಚಿದ ಈ ದೀಪವು ನಂದಾದೀಪವಾಗಿ ಪ್ರಜ್ವಲಿಸಿ,ಚಲಿಸುವ ಮೋಡಗಳು ಶಾಂತಿಯ ತಂಗಾಳಿಗೆ ಕರಗಿ‌,ಈ ಭುವಿಗೆ ಸ್ನೇಹದ,ಸೌಹಾರ್ದತೆಯ,ಕರುಣೆಯ ವರ್ಷಧಾರೆಯಾಗಿ ಸುರಿದು ಓದುಗ ಮನಕ್ಕೆ ತಂಪೆರಗಲಿ ಎಂದು ಆಶಿಸುತ್ತಾ....ಅವರ ಭವಿಷ್ಯ ಉಜ್ವಲವಾಗಲಿ ಎಂಬ ಮನದಾಳದ ಹಾರೈಕೆ.... https://m.facebook.com/story.php?story_fbid=2331324147091113&id=100006406501585

#ಇರುವುದೆಲ್ಲವ_ಬಿಟ್ಟು.....

ಅಂತೂ ಇರೋ ಕೆಲಸವನ್ನ ಬಿಟ್ಟು ನಾನು, ತಡವಾಗಿ ಹೂ ಬಿಟ್ಟ ಮರದ ಅನೂಹ್ಯ ಪುಳಕದೊಂದಿಗೆ ಓದುಗ ಪ್ರಪಂಚಕ್ಕೆ ಪ್ರಕಾಶ್ ರೈ ನೀಡಿದ ಅನುಭವಗಳ,ಚಿಂತನೀಯ ರಸದೌತಣವ ಉಂಡು ಮುಗಿಸಿದೆ... #ಇರುವುದೆಲ್ಲವ ಬಿಟ್ಟು....

#ಸೂಫೀ- #ವಿಶ್ವ ಪ್ರೇಮದ ಮೂಲಕ ಭಗವತ್ ಸಾಕ್ಷಾತ್ಕಾರ

ಇತ್ತೀಚೆಗೆ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣವೊಂದರಲ್ಲಿ ಬರಹದುದ್ದಕ್ಕೂ ಮುಸ್ಲಿಂ ಮೂಲಭೂತವಾದಿಗಳನ್ನು ತರಾಟೆಗೆ ತೆಗೆದುಕೊಂಡು ಟೀಕಿಸುವ,ಪ್ರತ್ಯಾರೋಪಗಳನ್ನು ಛೂ ಬಿಡುವ ಭರದಲ್ಲಿ ಲೇಖಕನು ಮಹಾನ್ ಸೂಫೀ ಸಂತ ಮುಈನುದ್ದೀನ್ ಚಿಶ್ತಿ (ರ)ರ ಬಗ್ಗೆ ಕೀಳಾಗಿ ಓರ್ವ ದಂಗೆಕೋರನಂತೆ ಚಿತ್ರಿಸಲು ಪ್ರಯತ್ನಿಸಿದ್ದು ಕಂಡು ತುಂಬಾ ಬೇಜಾರಾಯ್ತು... ಬಹುಶಃ ಅದಾಗಿರಬಹುದು ನನ್ನ ಕೈಗೆ ತಲುಪಲು ಕಾರಣ... (ಏನೇ ಆಗಲಿ #ಕರಜಗಿರವರು ಸೂಫೀ ಪಂಥವನ್ನು ಪ್ರತಿಪಾದಿಸುವಾಗ ಚಿಶ್ತಿಯವರ ತರೀಖತ್ ಗೆ ಸಂಪೂರ್ಣ ನ್ಯಾಯ ಒದಗಿಸಿದ್ದು ಕಂಡು ಮನತುಂಬಿತು...) ಪಡೆದ ಸೂಫಿ ಪರಂಪರೆಯನ್ನು ಜಗದಗಲಕ್ಕೆ ಪರಿಚಯಿಸುವಲ್ಲಿ ಖ್ಯಾತ ಸಾಹಿತಿ #ಡಾ_ಗುರುರಾಜ_ಕರಜಗಿಯವರ ಅಪೂರ್ವ ಪ್ರಯತ್ನವಿದು.. ಕರಜಗಿಯವರ ಚಿಂತನೆಯ ವೈಶಾಲ್ಯತೆಯನ್ನು ಓದುಗ ಇಲ್ಲಿ ಕೊನೆವರೆಗೂ ಅನುಭವಿಸುತ್ತಾನೆ ಹನ್ನೊಂದು, ಹನ್ನೆರಡನೆಯ ಶತಮಾನದಲ್ಲಿ ಜೀವಿಸಿ ಕಣ್ಮರೆಯಾದ ಅದೆಷ್ಟೋ ಸೂಫಿಗಳ ಜೀವನದ ಸಾರವು ಇಲ್ಲಿ ಪ್ರತಿಧ್ವನಿಸುತ್ತದೆ.ಅವರು ವಿಶ್ವ ಭ್ರಾತೃತ್ವಕ್ಕೆ ನೀಡಿದ ಅಗತ್ಯ ಜೀವರಸಾಯನ ಇಲ್ಲಿದೆ... ನಮ್ಮ ಜೀವನಕ್ಕೆ ಪಾಠ ಹೇಳಿ ಕೊಡುವ ಅನೇಕ ಕಥೆಗಳಿವೆ..ಆ ಕಥೆಗಳೇ ಅವರ ಜೀವನವಾಗಿತ್ತು...ನಂಬಲಾಗದ್ದು...ಇಂದಿನ ಕಾಲದ ನಮಗೆ ಅರಗಿಸಿಕೊಳ್ಳಲಾಗದ್ದು... ಧರ್ಮಾಚರಣೆಯ ಗೋಜಲಿನಲ್ಲಿ,ಆಧುನಿಕತೆಯ ಅಬ್ಬರದಲ್ಲಿ ಹೃನ್ಮನಗಳನ್ನು ವಿಚಲಿತಗೊಳಿಸಿಕೊಂ ವಿಲವಿಲನೆ ಒದ್ದಾಡುತ್ತಿರುವ ಮನು...

ತಿಳಿಯಲೇ ಬೇಕು ಈ ಕುಲುಕ್ಕಿ ಶರ್‍ಬತ್ತಿನ ಅಸಲಿಯತ್ತು..!!

ಸಿಹಿ ಪಾನೀಯಗಳೆಂದರೆ ಎಲ್ಲರಿಗೂ ಬಲು ಇಷ್ಟ.ಅದರಲ್ಲೂ ಸುಡು ಬೇಸಿಗೆಯಲ್ಲಂತೂ ತಂಪು ಪಾನೀಯಗಳ ಹವಾ ತುಂಬಾ ಜೋರಾಗೇ ಇರುತ್ತೆ. ದಣಿದು ಬಂದರಂತೂ ಇದನ್ನು ನೋಡಿದಾಕ್ಷಣ ಜನ ಅತ್ತ ಮುಗಿ ಬೀಳುತ್ತಾರೆ. ಕಾಲ ಬದಲಾದಂತೆಲ್ಲಾ ಜನರ ಅಭಿರುಚಿಯೂ ಬದಲಾಗಿರುತ್ತದೆ ಅನ್ನೋದಕ್ಕೆ ಈ ಕೇರಳದ ಕುಲುಕ್ಕಿ ಶರಬತ್ತೇ ಸಾಕ್ಷಿಯಾಗಿದೆ. ಈ ಬಾರಿಯ ನುಡಿಸಿರಿಯಲ್ಲೂ ಕೂಡಾ ಹಲವು ಕುಲುಕ್ಕಿ ಶರಬತ್ತಿನ ಸ್ಟಾಲ್‍ಗಳು ಅಲ್ಲಲ್ಲಿ ರಾರಾಜಿಸುತ್ತ ಜನರ ಬಾಯಲ್ಲಿ ನೀರೂರಿಸುತ್ತಿದೆ. ಕೇರಳದ ಈ ವಿಭಿನ್ನ ಶೈಲಿಯ ಪಾನೀಯವನ್ನ ಹೇಗೆ ತಯಾರಿಸುತ್ತಾರೆ. ಬಾಯಲ್ಲಿ ನೀರೂರಿಸುವ ಇದರ ರುಚಿಯ ಹಿನ್ನಲೆಯ ರಹಸ್ಯಗಳೇನು? ಈ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ. ದೇವರ ನಾಡೆಂದೇ ಪ್ರಖ್ಯಾತಿ ಹೊಂದಿದ ಕೇರಳ, ಚಾರಣಿಗರನ್ನ ಕೈಬೀಸಿ ಕರೆಯುವ ಪ್ರವಾಸಿ ತಾಣ. ಅರಬ್ಬೀ ಸಮುದ್ರದೊಂದಿಗೆ ಮೈಚಾಚಿ ನಿಂತ ಈ ನಾಡ ಸೊಬಗು ಅದೆಷ್ಟೋ ದೇಶ ವಿದೇಶೀ ಪ್ರವಾಸಿಗರನ್ನ ಅತ್ತ ಆಕರ್ಷಿಸುತ್ತಿದೆ.ಪ್ರಾಕೃತಿಕ ಅಂದವ ಸವಿಯಲು ಬರುವವರನ್ನ ಸೆಳೆಯಲೆಂದೇ ಹೌಸ್ ಬೋಟ್,ನಾಡ ದೋಣಿ ಉತ್ಸವಗಳಂತಹ ವಿನೂತನ ಪ್ರಯತ್ನಗಳನ್ನ ಮಾಡಿ ಸೈ ಎನಿಸಿಕೊಂಡವರು ಕೇರಳೀಯರು. ಅಂತಹ ಪ್ರಯತ್ನಗಳ ಪೈಕಿ ಪಾನೀಯದಲ್ಲಾದ ಒಂದು ವಿಶಿಷ್ಟ ಪ್ರಯೋಗವೇ ಈ ಕುಲುಕ್ಕಿ ಶರಬತ್ತು. ಮಾರುಕಟ್ಟೆಯಲ್ಲಿ ಸಿಗುವ ಎನರ್ಜಿ ಡ್ರಿಂಕ್ಸ್ ಗಳಿಗೂ ಪೈಪೋಟಿ ನೀಡಬಲ್ಲ ಇದರ ಅಲೆ ಇದೀಗ ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ.ಅಂದ ಹಾಗೆ ಈ ಶರಬತ್ತಿನ ಒಳಗುಟ್ಟನ್ನ...

ತುಂಬಿದ ಕೊಡ ತುಳುಕುವುದಿಲ್ಲ...

ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಶೈಖುನಾ ಪಯ್ಯಕ್ಕಿ ಉಸ್ತಾದರ ಕುರಿತು ಹಾಗೇ ಹೇಳಬೇಕಷ್ಟೇ. ಪಾಂಡಿತ್ಯದ ಸಮಾನತೆಯಿಲ್ಲದ ಶಿಖರದಿ ವಿರಾಜಮಾನ ಸುಲ್ತಾನರಾಗಿ ವಿಹರಿಸುವಾಗಲೂ,ಸಂಪದ್ಭರಿತ ಪಳ್ಳಿಕ್ಕೆರೆಯ ಖಾಝಿ ಸ್ಥಾನವನ್ನು ವಹಿಸುವಾಗಲೂ,ಪೈವಳಿಕೆಯಲ್ಲಿ ತನ್ನ ಕನಸಗೂಸು 'ಅನ್ಸಾರಿಯಾ' ಕವಲೊಡೆದು ಹೆಮ್ಮರವಾಗಿ ಬೆಳೆದು ಫಸಲು ಬಿಡಲು ಪ್ರಾರಂಭಿಸಿದ ಆ ಸುವರ್ಣ ನಿಮಿಷಗಳಲ್ಲಿ ವಿಧ್ಯಾರ್ಥಿಗಳು ಪ್ರಥಮವಾಗಿ ಸನದು ಸ್ವೀಕರಿಸಿದ ವೇಳೆಯೂ ವಿನಯಾನ್ವಿತರ ಆ ಮಂದಹಾಸಲ್ಲಿ ಕಿಂಚಿತ್ತೂ ಬದಲಾವಣೆಯಿಲ್ಲ.ತಾಳ್ಮೆಯ ಮೂಲಕ ಉಸ್ತಾದರು ಮತ್ತೆ ಮತ್ತೆ ಅಧ್ಬುತವೆನಿಸುತ್ತಿದ್ದಾರೆ.* *ವಿಲಾಯತ್ತಿನ ಉನ್ನತ ಗಿರಿಸಾಲುಗಳನ್ನೇರಿದ ಪಿತಾಮಹರ ಸ್ಮರಣೆಗಳು ಪಯ್ಯಕ್ಕಿಯ ಚರಿತ್ರೆಯ ಹಾಳೆಗಳಲ್ಲಿ ಇಂದಿಗೂ ಜಲಜಲಿಸುವ ಸ್ಮರಣೆಯಾಗಿ ಉಳಿದಿದೆ. ಅವರನ್ನಾಗಿತ್ತು ಈ ನಾಡು ಪ್ರಥಮವಾಗಿ ಪಯ್ಯಕ್ಕಿ ಉಸ್ತಾದ್ ಎಂದು ಕರೆದಿದ್ದು.ಅನ್ಯ ಸ್ತ್ರೀಯರ ನೆರಳು ಕೂಡಾ ತನ್ನ ಪುರುಷಾಯುಸ್ಸಿನಲ್ಲಿ ಕಾಣಬಾರದೆಂದು ಆಗ್ರಹಿಸಿದ ಆ ಅತಿ ಸೂಕ್ಷ್ಮ ಜೀವನದ ಬಗ್ಗೆ ಅಲ್ಪ ಚಿಂತಿಸಿ ನೋಡಿ..ಅಹ್ಲುಬೈತ್ ಹಿಂದೆಯೇ ಕಾಲಿರಿಸಿದ ಈ ಮಣ್ಣಲ್ಲಿ ಪೊನ್ನಾನಿ ದರ್ಸೀ ಪಾರಂಪರ್ಯದ ಬೀಜ ಬಿತ್ತಿ ಬೆಳೆಸಿವರು ಮರ್ಹೂಮ್ ಪಯ್ಯಕ್ಕಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ನ.ಮ ಆಗಿದ್ದರು.ಕಳೆದ ವರ್ಷದ ಉರೂಸಿನಲ್ಲ್ಲಿ ಸೌಹಾರ್ದ ಸಂಗಮದ ವೇದಿಕೆಯಲ್ಲಿ ಶಾಲಾ ಅಧ್ಯಾಪಕರೊಬ್ಬರು ಈ ರೀತಿ ಹೇಳಿದ್ದರು"ಇವ...

ನೋವು -ನೆನಪು

🌀🌀🌀🌀🌀🌀🌀🌀🌀🌀 *ಕಡಮೇರಿ ರಹ್ಮಾನಿಯಾ ದ ನೆನಪು...* *ಪ್ರಿಯ ಹಾರಿಸ್ ರಹ್ಮಾನಿ..... ನೆನಪಿನಾಳದಿ ಬೇರೂರಿದ ನೋವು ಮರುಕಳಿಸುತ್ತಿದೆ ಗೆಳೆಯಾ... ನಿನ್ನ ನೆನಪಲ್ಲೇ ಒಂದೆರೆಡು ಗೆರೆಗಳು ಬರೆಯಬೇಕೆಂದು ಅನಿಸಿತು.* ◻▪▫▪▫▪▫▪▫◻ *ಇದೀಗ ಮಗದೊಮ್ಮೆ ಸನದುದಾನ ಸಮ್ಮೇಳನಕ್ಕೆ ಕಡಮೇರಿ ರಹ್ಮಾನಿಯಾ ಸಜ್ಜಾಗಿದೆ.ರಹ್ಮಾನಿಯಾ ಸಮ್ಮೇಳನ ಬರುವಾಗ ಮತ್ತೊಮ್ಮೆ ಹಾರಿಸ್ ರಹ್ಮಾನಿ ನೆನಪಿನಂಗಳದಲ್ಲಿದ್ದಾನೆ. ಬಾಲ್ಯದಿಂದಲೂ ನಾವು ಗೆಳೆಯರು,ನನ್ನ ದೊಡ್ಡಮ್ಮನ ಮೊಮ್ಮಗ ಕೂಡಾ.* *(ನಮ್ಮ ತಾತರಾಗಿದ್ದ ಮರ್ಹೂಮ್ ಅಬೂಬಕ್ಕರ್ ಹಾಜಿ ಪೊನ್ನಾನಿಯಲ್ಲಿ ಕಲಿತ ಪಂಡಿತರಾಗಿದ್ದರು.ಆಲಡ್ಕಕ್ಕೆ ಶಂಸುಲ್ ಉಲಮಾ ಪ್ರಭಾಷಣಕ್ಕೆ ಬರುತ್ತಿದ್ದ ಕಾಲದಲ್ಲಿ ತಾತನವರು ಆಗ ಕಲ್ಲಡ್ಕದಲ್ಲಿ ಮುದರ್ರಿಸ್ ಆಗಿದ್ದರಂತೆ.ಸೂಕ್ಷ್ಮತೆಯ ಆಗರವಾಗಿದ್ದ ಅವರು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು, ಆದ್ರಿಂದ ನಾವು ಅವರ ಮೊಮ್ಮಕ್ಕಳಾದೆವಲ್ಲ ಅನ್ನೋ ಅಭಿಮಾನ ಎಂದಿಗೂ ಇದೆ.ಅಷ್ಟೇ ಅಲ್ಲದೆ ಅಂದು ನಮ್ಮೂರಲ್ಲಿ ಸಮಸ್ತದ ಉಸಿರಾಗಿ ನಿರಾಶ್ರಿತರ ಧ್ವನಿಯಾಗಿದ್ದ ಸಕ್ರಿಯ ಕಾರ್ಯಕರ್ತರಾದ ಕಲ್ಲಡ್ಕ ಮರ್ಹೂಮ್ ಇಬ್ರಾಹಿಂ ಹಾಜಿಯವರಿಗೆ ನಮ್ಮ ತಾತರೆಂದರೆ ಬಹಳ ಅಚ್ಚುಮೆಚ್ಚು.ಈ ಇಬ್ಬರೂ ಮಹಾ ಮನುಷ್ಯರು ಕಲ್ಲಡ್ಕದ ಧಾರ್ಮಿಕ ಮತ್ತು ಸಾಮಾಜಿಕ ನೇತೃತ್ವಕ್ಕೆ ಮುಂದಾಳತ್ವ ವಹಿಸಿದ್ದರು ಎಂದರೆ ತಪ್ಪಾಗಲ್ಲ.)* *ಹಾರಿಸ್ ತನ್ನ ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೂ ಕಲಿ...

*ಓ ಅಲ್ಲಾಹ್..ಮತ್ತೆ ಮರಳಿಸು ಆ ಮಂದಹಾಸವ*

ಪ್ರಿಯ ಶೈಖುನಾ.... ತಾವು ನಮ್ಮೆಲ್ಲರ ಮಾರ್ಗದರ್ಶಕರು,ನಮ್ಮ ಏಳಿಗೆ ಮತ್ತು ಪ್ರಗತಿಯಲ್ಲೆಲ್ಲಾ ತಮ್ಮ ಅವಿಸ್ಮರಣೀಯ ಪ್ರಭಾವ ಸಾಫಲ್ಯಗಳಾಗಿವೆ.ತಮ್ಮೊಂದಿಗೆ ನಾವು ಸರ್ವದಾ ಸರ್ವತ್ರ ಋಣಿಯಾಗಿರುವೆವು. ತಮಗೆ ಪ್ರತಿಯಾಗಿ ನೀಡಲು ನಮ್ಮ ಹಸ್ತಗಳು ಬರಿಶೂನ್ಯ. ತಾವೆಂದಿಗೂ ಅಧಿಕಾರಕ್ಕಾಗಿ ಅಂಗಲಾಚಿ ಪಟ್ಟು ಹಿಡಿದಿಲ್ಲ ಮೋಹದಿಂದ ಪಟ್ಟವು ತಮ್ಮನ್ನೇ ಅರಸಿಕೊಂಡು ಬಂದಿದ್ದೇ ಎಲ್ಲಾ.... ತಮ್ಮೊಡನೆ ಒಲವು ತೋರಿದವರೊಡನೆ ಒಲುಮೆಯ ಹಂಚಲು ತಮಗಂತೂ ವೈಮನಸ್ಯವೇ ಇಲ್ಲ.... ಶೈಖುನಾ ಕೋಟ ಉಸ್ತಾದರ ಜ್ಞಾನದ ಕೋಟೆಯೊಳಗೆ ಪಳಗಿದ ತಾವು ಕೋಟಿಗೊಬ್ಬರು.... ರಂಝಾನಿನ ದಿನಗಳೊಂದೊಂದು ಸರಿಯುತ್ತಿರುವಾಗ ನಿರೀಕ್ಷೆಯಿಂದಲೇ ಈ ಮನವು ತುಡಿಯುತಿದೆ ಆ ಸಚೇತನರ ಲವಲವಿಕೆಯಿಂದ ಕೂಡಿದ ಮುತ್ತಿನ ಉಪದೇಶವ ಆಲಿಸಲು.... ಆದರೆ....ಇದೀಗ ಆ ಹೃದಯವು ನೋವ ನುಂಗುತ್ತಿದೆ.... ಆ ಶರೀರವಿಂದು ಬಳಲಿದೆ.... ಆ ಲವಲವಿಕೆ ಮಾಯವಾಗಿದೆ... ಆ ನಯನಗಳಲ್ಲಿ ಮತ್ತೆ ಗುಣಮುಖರಾಗಬೇಕೆಂಬ ಹಂಬಲ ಕಾದಿದೆ... ಇಲ್ಲ ಶೈಖುನಾ... ತಾವು ಬರಬೇಕು.... ಮತ್ತೆ ಗುಣಮುಖರಾಗಿ..... ನಿರೀಕ್ಷೆ ಹೊತ್ತ ನೂರಾರು ಶಿಷ್ಯಗಣಕ್ಕೆ ಆಸರೆಯಾಗಿ... ತಮ್ಮ ಉಪದೇಶಗಳೇ ನಮ್ಮ ಉನ್ನತಿಗೆ ಹೇತು... ತಮ್ಮ ನಿರ್ದೇಶನಗಳೇ ನಮ್ಮ ಗೆಲುವಿನ ನಿದರ್ಶನ... ಜ್ಞಾನಧಾರೆಯ ನಡುವೆ ಹುರಿದುಂಬಿಸುತ್ತಿದ್ದ ಚಿಂತನಾರ್ಹ ಹಾಸ್ಯಭರಿತ ಮಣಿ ಮುತ್ತುಗಳೇ ನಮಗೆ ಸ್ಪೂರ್ತಿ.. ಅಕಾಡೆಮಿಯ ಅಂಗಣದಲ್ಲಿ...

ವಿದಾಯ....

ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪರಂಪರೆ-* ನಿಝಾಮ್ ಅನ್ಸಾರಿ

ಭಾರತವು ಕೃಷಿ ಅವಲಂಬಿತ ಹಳ್ಳಿಗಳನ್ನೊಳಗೊಂಡ ಸಮೃದ್ಧ ದೇಶ. ದೇಶದ ಬೆಳವಣಿಗೆಯಲ್ಲಿ ವ್ಯವಸಾಯದ ಪಾತ್ರ ಬಹುಮುಖ್ಯವಾದುದು. ತಂತ್ರಜ್ಞಾನವು ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತವೆಯೋ ಅದೇ ರೀತಿಯಲ್ಲಿ ಕೃಷಿಯ ಕೊಡುಗೆಯೂ ಕೂಡಾ ಅಪಾರವಾದುದು. ಆದರೆ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ವ್ಯವಸಾಯವು ಇಳಿಮುಖವಾಗುತ್ತಿದೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ವಿದ್ಯಾವಂತರಾಗುತ್ತಲೇ ತಮ್ಮ ಪಾರಂಪರಿಕ ಕುಲ ಕಸುಬನ್ನು ನಿರ್ಲಕ್ಷಿಸಿ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.ಕೈ ಕೆಸರು ಮಾಡಿಕೊಂಡು ದುಡಿಯುವವರ ಕೊರತೆ ಅಗಾಧವಾಗಿ ಎದ್ದು ಕಾಣುತ್ತಿದೆ. ಇಂದಿನ ನವ ತಲೆಮಾರು ಹಳ್ಳಿಗಳು ಕೇವಲ ವೃದ್ಧರಿಗೆ ಮಾತ್ರ ಯೋಗ್ಯವಾದುದು ಎಂದು ತಿಳಿದಂತಿದೆ. `ನೇಗಿಲಾ ಹಿಡಿದಾ ಹೊಲದಲಿ ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಎಂದು ಕುವೆಂಪುರಂತಹ ಖ್ಯಾತ ಕವಿಗಳಿಂದ ಕೊಂಡಾಡಲ್ಪಟ್ಟ ಕೃಷಿ ಚಟುವಟಿಕೆಗಳಿಂದು ಕಣ್ಮರೆಯಾಗಿದೆ. ನೇಗಿಲಿನಂತಹ ಕೃಷಿ ಸಲಕರಣೆಗಳು ಇಂದು ಮ್ಯೂಸಿಯಂ ಸೇರಿಬಿಟ್ಟಿವೆ. ಇದರೊಂದಿಗೆ ಅತ್ಯಂತ ಸುಂದರವಾದ ಕೃಷಿ ಪರಂಪರೆ ಮೂಲೆಗುಂಪಾಗುತ್ತಿದೆ. ಹಳೆಯ ಕಾಲದ ಸಾಂಪ್ರದಾಯಿಕ ಬೇಸಾಯಕ್ಕೆ ಉಪಯೋಗವಾಗುತ್ತಿದ್ದ ಪರಿಕರಗಳ ಸ್ಥಾನವನ್ನು ಟ್ರಾಕ್ಟರ್,ಟಿಲ್ಲರ್ ಗಳಂತಹ ಯಂತ್ರಗಳು ಆಕ್ರಮಿಸಿಕೊಂಡಿವೆ. ಭತ್ತ ನಾಟಿ ಮಾಡುವ ಮಹಿಳೆಯರಿಂದ ಕೇಳಿ ಬರು...

ಕೋಮುವಾದದ ವಿಷ ಉಗುಳುವವರು ಈ ಸಮುದಾಯಕ್ಕೆ ನೀಡಿದ ಪ್ರತ್ಯುತ್ತರ....

ಊರಿಡೀ ವರ್ಗೀಯತೆಯ ಗಬ್ಬುನಾತ ಹರಡುತ್ತಿದೆ.ಸಾಹೋದರ್ಯತೆಯ ಕೊಂಡಿಗಳು ಕಳಚಲ್ಪಡುತ್ತಿದೆ.. *ದಿನಗಳೆದಂತೆ ಮನುಷ್ಯನ ಸ್ವಭಾವ ಗುಣವು ರಾಕ್ಷಸ ಸ್ವರೂಪ ತಾಳುತ್ತಿದೆ*.ಮನುಜನು ಮಾನವೀಯತೆ ತೊರೆದು ಅನ್ಯಾಯವಾಗಿ ಅಮಾಯಕ ಅನ್ಯನ ರಕ್ತ ಹೀರುವಲ್ಲಿ ಆಸಕ್ತಿ ತೋರುತ್ತಿದ್ದಾನೆ.ಹತ್ಯೆಗಳು ಕೊನೆಯಲ್ಲಿ ರಾಜಕೀಯ ಪ್ರೇರಿತವೆಂದು ಬಿಂಬಿಸಲ್ಪಡುತ್ತದೆ.ಹಂತಕನು ರಕ್ತದ ಕಲೆ ಮಾಸುವ ಮುನ್ನ ಜಾಮೀನಿನ ಕದತೆರೆದು ಹೊರನುಸುಳುತ್ತಾನೆ.. ನಂತರ ಆ ಹೆಸರಿನ ಕೆಲವೊಂದು *ಸಾಂಘಿಕ ಚರ್ಚೆಗಳು* ಬಜಾರಿನಲ್ಲಿ ಬಿಸಿಸುದ್ದಿಯಾಗಿರುತ್ತದೆ.ಅದು ಮಾತ್ರ..... ಯಾಕೀಗಾಯಿತು? *ಯಾವುದೀ ನರಭಕ್ಷಕತೆಯನ್ನು ಪ್ರೋತ್ಸಾಹಿಸುವ ಕೈಗಳು?* ಪರಸ್ಪರ ಸಮೈಕ್ಯತೆಯಿಂದ ಕೂಡಿದ್ದ ನಮ್ಮ ಊರನ್ನು ಅನೈಕ್ಯತೆಯ ರಣಾಂಗಣ ಮಾಡಿದೋರ್ಯಾರು? *ರಕ್ತ ಚಿಮ್ಮಿಸುವ ಕೈಗಳಿಗೆ ಜಾತಿ ಮತ ಪಥ ಪಂಗಡ ಗಳ ನಡುವೆ ತಡೆಗೋಡೆಗಳನ್ನು ಕಟ್ಟಲು ಪ್ರೇರಣೆ ನೀಡುವೋರ್ಯಾರು?* *ಇದು ಪ್ರಜಾಪ್ರಭುತ್ವ ಭಾರತ.ಹಲವು ಧರ್ಮೀಯರು,ವಂಶಜರು ಆಳಿದ ಪುಣ್ಯ ಮಣ್ಣು.ಇಲ್ಲಿ ಅಕ್ರಮಣಗಳಿಗೆ ಅವಕಾಶವಿಲ್ಲ..ಸ್ವೇಚ್ಚಾರಗಳಿಗೆ ಅನುಮತಿಯಿಲ್ಲ..ಸರ್ವರೂ ಸಮ್ಮಿಲನದ ದ್ಯೋತಕವಾಗಿ ಜೀವಿಸಬೇಕಾದವರು ನಾವು ಭಾರತೀಯ ಪ್ರಜೆಗಳು.* ಆದರೆ *ಇಂದು ನಡೆಯುತ್ತಿರುವುದೋ?!* ಸಮಾಜದ ಎಲ್ಲೆಂದರಲ್ಲಿ ಅಡಗಿರುವ ಕೆಲವೊಂದು ಕಾಣದ ವರ್ಗೀಯತೆಯ ಕೈಗಳು ಇಂದು ನಮ್ಮೆಡೆಯಲ್ಲಿ ಅಮಾನುಷಿಕ ಕೃತ್ಯಗಳನ್ನೆಸಗಿ ಪರಾರಿಯಾಗುತ್ತಿದೆ..... ಮನುಷ್ಯನೇ...

ಕವನ- ಮನದಾಳದ ಮರ್ಹೂಮ್ ಪಯ್ಯಕ್ಕಿ ಉಸ್ತಾದ್

ಉಷಾಕಿರಣ ಬೀರಿ ಊರ ಬೆಳಗಿಹ ಜ್ಞಾನದೈಸಿರಿಯು ದಶಮಾನಗಳಂಚಿಗೂ ದಿಟ್ಟೆದೆಯಿಂದ ಭೋಧನಾನಿರತ ಆ ಹರಿವ- ಅರಿವಿನ ಪ್ರವಾಹವು ದರಹಾಸವ ಚೆಲ್ಲಿ ಇಹದಾಚೆಗೆ ಪಯಣವಿತ್ತ ಪರಾರ್ಧ್ಯ ಪಾರಂಗತರು ಅವರು #ಪಯ್ಯಕ್ಕಿಉಸ್ತಾದ್..!! ಓ ಭುವಿಯೇ...ಬಿಚ್ಚಿಡು ನೀ ನಿನ್ನೊಡಲಲಿ ಬಚ್ಚಿಟ್ಟ ಜ್ಞಾನ ಸರಣಿಯ ಅಭಿಜ್ಞರ ಅನುಬಂಧವ... ಅದೇಗೆ ಸಾಧಿಸಿತೆಂದೇ ಅಚ್ಚರಿಯು ಎನಗೆ..! ಅನುಪಮ ದಶಕಗಳಸವೆಸಿದ ಆ ಕನತ್ ಚಿಲುಮೆಯ ಸಾಗರವ ಆರಡಿಯೊಳಗೆ ತುಂಬಲು ನಿನಗೆ..! ಪೃಥ್ವಿಯೇ ನಿಜಕ್ಕೂ ಭಾಗ್ಯಶಾಲಿ ನೀ ನಿನ್ನೆದೆಯ ಅಪ್ಪಿ ಚಿರನಿದ್ರೆಗೆ ಜಾರಿದ ಜಲಜಲಿಸುವ ಆ ವಿದ್ವತ್ ಕನಿ..! ಇಳೆಯ ರೋಧನವು ಮುಗಿಲು ಮುಟ್ಟಿದಾಕ್ಷಣ.. ವರ್ಷಿತ ಗಗನದಿಂದ ಅಶ್ರುಧಾರೆಯಂತೆ ತಣ್ಬನಿಗಳು ಜಾರಿ ಮೆಲ್ಲಗೆ ಭುವಿಯ ಸೇರಲು... ವಿರಹವ ತಾಳಲಾರದೆ ಶೋಕದಿ ಮರುಗಿದ ಮನುಕುಲದ ಮನವು ಮೆಲ್ಲನೆ ಮಂತ್ರಿಸಿತು ಅವರಿನ್ನೂ ಬದುಕಿರುತ್ತಿದ್ದರೆ..?!! ಕಂಬನಿ ಮಿಡಿದ ಹೃದಯಗಳೆಷ್ಟು ಕೇಳು ಆ ಪರಂಜ್ಯೋತಿಯ ಕಣ್ಣಾರೆ ದರ್ಶಿಸಲು ಹಾತೊರೆಯುತಿಹ ಮನದಾಳಗಳದೆಷ್ಟು...! ಚಿನುಮಯ ಸಾಮ್ರಾಜ್ಯವ ಕಟ್ಟಿ ಜ್ಞಾನದ ತುತ್ತತುದಿ ಏರಿದ ಪುಂಗವರ ಸ್ಮರಣೆಯ ಮೆಲುಕು ಹಾಕುವರೆಷ್ಟು.....!! ನಡೆದರು ನೋಟದಲಿ ಕಣ್ಣಳತೆಯಿಟ್ಟು .. ಕಣ್ದೊಳಲು ಸಾಗಿಲ್ಲ ಅವರ ಬಿಟ್ಟು.. ಇತಿಹಾಸ ಬರೆದಿತು ಆರವವಿಲ್ಲ-ಆ ಜೀವನವನು ಕಂಡು ಇನ್ಯಾರು ಹೋಲುವರು ಈ ನಿಸ್ತುಲ ದ್ಯುತಿಗೆ ಸಮಾನರು..!?! ಆಧ...

ಕಥೆ – ವೈರಲ್!! -ನಿಝಾಮ್ ಅನ್ಸಾರಿ

"ಸರ್,ಇದು ಕ್ಲೋಸಿಂಗ್ ಟೈಮ್.." ಹರಿದಾಸನು ತಲೆಯೆತ್ತಿ ನೋಡಿದ.ಬಾರಿನ ಸಪ್ಲಾಯರ್ ಹುಡುಗನು ಅವನ ಮುಂದೆ ಅಕ್ಷಮ್ಯ ಮುಖಭಾವದಿ ನಿಂತಿದ್ದ .ಸಮಯ 9:30 ಆಗಿತ್ತು.ಹರಿದಾಸ ಸುತ್ತಲೂ ಒಮ್ಮೆ ಕಣ್ಣೋಡಿಸಿದ.ಬಾರಿನಲ್ಲಿ ತಾನು ಮಾತ್ರ.ಉಳಿದ ಕುಡುಕರೆಲ್ಲರೂ ಗೂಡು ಸೇರಿಯಾಗಿದೆ.ಅವನು ಮೆಲ್ಲಗೆ ಎದ್ದೇಳಲು ಪ್ರಯತ್ನಿಸಿದ. "ನನಗೊಂದು ಬಾಟ್ಲಿ ವಿಸ್ಕಿ ಬೇಕಪ್ಪಾ" ಹರಿ ಹೇಳಿದ. ಸಪ್ಲಾಯರ್ ನ ಮುಖ ಬಾಡಿತು. "ಸರ್,ಈವಾಗ್ಲೇ ಹೆಚ್ಚಾಗಿದೆ. ಇನ್ನೂ.."!? "ನೀನು ಬೇಸರ ಮಾಡ್ಕೋಬೇಡ.ನಾನು ಮನೆಗೆ ಹೋಗಿ ಕುಡಿಯುತ್ತೇನೆಂದ ಹರಿ. ಸಪ್ಲಾಯರ್ ಬಾಟ್ಲಿ ತಂದು ಕೊಟ್ಟ.ಜೇಬಲ್ಲಿದ್ದ ಹಣವನ್ನು ಅವನ ಕೈಗಿತ್ತು ಹರಿದಾಸ್ ಬಾರಿನಿಂದ ಹೊರಗಿಳಿದ.ಮದ್ಯದ ನಶೆಯಲ್ಲಿ ಅವನ ಕಾಲುಗಳು ನಡುಗತೊಡಗಿದ್ದವು.ಬಾರಿನ ಹೊರಗಡೆ ಹರಿದಾಸನ ಬಾಲ್ಯ ಸ್ನೇಹಿತ ಬಾಲಚಂದ್ರನು ಅವನಿಗಾಗಿ ಕಾಯುತ್ತಿದ್ದ.ಅಂದಹಾಗೆ ಬಾಲಚಂದ್ರನು ಒಬ್ಬ ಗೈನಕಾಲಜಿಸ್ಟ್ ಆಗಿದ್ದನು.ಬಾಲನೊಂದಿಗೆ ಹರಿಯ ಸಹಾಯಕನಾಗಿದ್ದ ಬಿಬಿನ್ ಎನ್ನುವ ಯುವಕನೂ ಜೊತೆಗಿದ್ದ. ಹಲೋ..ಬಾಲಚಂದ್ರ ನಿನಗೆ ಇಲ್ಲೇನ್ ಕೆಲ್ಸ..? "ಮನೆಗೆ ಹೋದಾಗ ನೀನಿರಲಿಲ್ಲ.ಆಗ ಬಿಬಿನ್ ಹೇಳಿದ ಇಲ್ಲೇ ಇರಬಹುದು ಎಂದು.." ಹರಿದಾಸನು ಬಿಬಿನ್ ನನ್ನು ಒಮ್ಮೆ ದುರುಗುಟ್ಟಿ ನೋಡಿದ.ಬಾಲಚಂದ್ರನು ಕಾರಿನ ಬಾಗಿಲು ತೆರೆದ. ಹರಿ ಅವನೊಂದಿಗೆ ಹೋಗಿ ಮುಂದಿನ ಸೀಟಿನಲ್ಲಿ ಕುಳಿತನು. ...

ತ್ರಿವಳಿ ತಲಾಕ್ : ತಿರುಳಿಲ್ಲದ ವಿವಾದಗಳ ಸುತ್ತ...

- ನಿಝಾಮ್ ಅನ್ಸಾರಿ ಕಲ್ಲಡ್ಕ ವೈವಿಧ್ಯತೆಯ ವರ್ಣ್ಯ ಪ್ರತೀಕ ವಾದ ಭವ್ಯ ಭಾರತವು ವಿವಿಧತೆಯಲ್ಲಿನ ಏಕತೆಯ ವೈಶಿಷ್ಟ್ಯತೆಯನ್ನು ಹೊತ್ತ ಮಣ್ಣು. ವಿಭಿನ್ನ ರೀತಿಯ ವರ್ಗ, ವರ್ಣ, ಜಾತಿ, ಮತ, ಪಂಥ, ಪಂಗಡಗಳ ಸಮೈಕ್ಯತಾ ಪ್ರತಿಪಾದ್ಯ ಭೂಮಿ...ಬಲಿಷ್ಟವೂ,ಜನಪರವೂ, ಸದೃಢಾತ್ಮಕವೂ ಆದ ಭಾರತದ ಸಂವಿಧಾನದ ರೂಪ ಕಲ್ಪನೆಯು ವಿಶ್ವಕ್ಕೇ ಮಾದರಿಯಾಗಿದೆ. ಸರ್ವ ಧರ್ಮಗಳ ಉದಾತ್ತ ಸಂಸ್ಕೃತಿಗಳಿಗೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗದಂತೆ ಅತಿ ಸೂಕ್ಷ್ಮವೂ ,ಅಷ್ಟೇ ಪರಿಗಣನಾತ್ಮಕ ಸ್ಪಷ್ಟ ಶೈಲಿಯನ್ನಾಗಿದೆ ಸಂವಿಧಾನ ಶಿಲ್ಪಿಯು ಸ್ವೀಕರಿಸಿದ್ದು.. ಇತ್ತೀಚಿಗೆ ದೇಶದೆಲ್ಲೆಡೆ ವ್ಯಾಪಕವಾಗಿ ಚರ್ಚೆಕ್ಕೀಡಾಗಿರುವ ದೇಶದ ಅತ್ಯುನ್ನತ ನ್ಯಾಯಪೀಠವಾದ ಸುಪ್ರೀಂ ಕೋರ್ಟ್ ನ ಕೆಲವೊಂದು ತೀರ್ಪುಗಳು ಜನರ ಮಧ್ಯೆ ವ್ಯಾಪಕ ಚರ್ಚೆಗೀಡಾಗಿಸುವಂತಿತ್ತು. ಶಬರಿಮಲೆ ಮಹಿಳಾ ಪ್ರವೇಶ,ಸಹಮತದ ಸಲಿಂಗಕಾಮ ಮತ್ತು ವ್ಯಭಿಚಾರ ಅಪರಾಧವಲ್ಲ, SC ST ಬಡ್ತಿ ಮೀಸಲಾತಿ, ನಮಾಝ್ ಗೆ ಮಸೀದಿ ಮುಖ್ಯವಲ್ಲ, ತ್ರಿವಳಿ ತಲಾಕ್ ಗೆ ಸಾಂವಿಧಾನಿಕ ಮಾನ್ಯತೆ ರದ್ದು ಹೀಗೇ 2018 ರ ಹತ್ತಕ್ಕೂ ಹೆಚ್ಚು ತೀರ್ಪುಗಳು ಮಹತ್ವದ ತೀರ್ಪುಗಳೆಂದು ಬಿಂಬಿಸಲ್ಪಟ್ಟವು. ಹೆಚ್ಚಿನ ತೀರ್ಪುಗಳೂ ಒಂದೊಂದು ಸಮುದಾಯ ಸಂಬಂಧಿತವಾದುದರಿಂದಲೇ ಇತರ ಸಮುದಾಯಗಳು ಆ ಬಗ್ಗೆ ತಕರಾರೆತ್ತಲೇ ಇಲ್ಲ.ಮಾತ್ರವಲ್ಲ ಕೆಲವು ಮತಾಂಧರು ಆ ಬಗ್ಗೆ ಸಂಭ್ರಮಾಚರಣೆಯಂತೆ ಕಂಡರು. ನಾವಿಲ್ಲಿ ಬರಿಯ ತ್ರಿವಳಿ ತಲಾಕ್ ಬಗ್ಗೇನ...